ಉಡುಪಿ: ಎಪ್ರಿಲ್ ಫೂಲ್ ಬದಲು ಗಿಡ ನೆಟ್ಟು ಎಪ್ರಿಲ್ ಕೂಲ್ ಆಚರಣೆ

ಉಡುಪಿ, ಎ.1: ಕೆಲವರು ಎ.1ರಂದು ಯಾರನ್ನಾದರೂ ಅಪಹಾಸ್ಯ ಅಥವಾ ವಿಡಂಬನೆ ಮಾಡಿ ವಿಕೃತ ಸಂತೋಷ ಅನುಭವಿಸುತ್ತ ಮೂರ್ಖರ ದಿನವನ್ನು ಆಚರಿಸುತ್ತಿದ್ದರೆ ಆದರೆ ಸಾಸ್ತಾನ ಮಿತ್ರರು ಎಪ್ರಿಲ್ ಫೂಲ್ ದಿನವನ್ನು ಎಪ್ರಿಲ್ ಕೂಲ್ ಎಂಬ ಧ್ಯೇಯದೊಂದಿಗೆ ಗಿಡ ನೆಡುವ ಮೂಲಕ ಸಮಾಜಕ್ಕೆ ಆದರ್ಶ ಸಂದೇಶ ರವಾನಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಮನೆಯಲ್ಲಿ ಮಗುವಿನ ಹುಟ್ಟು... ಸಂಭ್ರಮಿಸಿ ಗಿಡವನ್ನು ನೆಟ್ಟು’ ಎಂಬ ಘೋಷವಾಕ್ಯದಡಿಯಲ್ಲಿ ವಿನೂತನ ಅಭಿಯಾನಕ್ಕೆ ಉಡುಪಿ ಕನ್ನರ್ಪಾಡಿಯ ರೇಷ್ಮಾ ವಿಶಾಲ್ ದಂಪತಿ ಒಂದು ತಿಂಗಳ ಮಗುವಿನ ಹೆಸರಿನಲ್ಲಿ ಅವರ ಮನೆ ವಠಾರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಜೊತೆ ಯಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಪ್ರತಿಜ್ಞಾ ಕರಪತ್ರ ವನ್ನು ವಿತರಿಸಲಾಯಿತು.
ಪರಿಸರಕ್ಕೆ ಗಿಡ ಮರಗಳ ಅವಶ್ಯಕತೆಯ ಬಗ್ಗೆ ಪರಿಸರವಾದಿ ವಿನಯಚಂದ್ರ ಸಾಸ್ತಾನ ಮಾಹಿತಿ ನೀಡಿ, ಪ್ರತಿ ಮನೆಯಲ್ಲಿ ಮಗು ಹುಟ್ಟಿದಾಗ ಮಗು ಹುಟ್ಟಿದ ಸಂಭ್ರಮಕ್ಕೆ ಒಂದು ಗಿಡ ನೆಟ್ಟು, ಮಗುವಿನ ಹೆಸರನಲ್ಲಿ ನಮ್ಮ ಪರಿಸರಕ್ಕೆ ಅಮೂಲ್ಯ ಕೊಡುಗೆ ನೀಡುವಂತೆ ಮಗುವಿನ ಹೆತ್ತವರಲ್ಲಿ ಜಾಗೃತಿ ಮೂಡಿಸ ಲಾಗುವುದು. ಜಿಲ್ಲೆಯ ಪ್ರತಿಯೊಂದು ಹೆರಿಗೆ ಆಸ್ಪತ್ರೆಗಳಲ್ಲಿ ಸಂದೇಶ ಕರಪತ್ರ ವನ್ನು ಹಂಚಲಾಗುವುದು. ಆರೋಗ್ಯಕರ ಬದುಕಿಗಾಗಿ ಮನುಷ್ಯನಿಗೊಂದು ಗಿಡ ನೆಡ ಬೇಕಾದ ಪರಿಸ್ಥಿತಿ ಈಗ ಎದುರಾಗಿದೆ. ಹಾಗಾಗಿ ನಾವು ಭೂ ಮಡಿಲವನ್ನು ಹಸಿರುಗೊಳಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ ಪಾಡಿ, ಬದ್ರಿನಾಥ್ ದೊಡ್ಡಬಳ್ಳಾಪುರ, ತಾರಾನಾಥ್ ಮೇಸ್ತ ಶಿರೂರು, ಅರ್ಚಕ ಆರೂರು ಕೃಷ್ಣಮೂರ್ತಿ ಭಟ್, ಮನೆಯ ಸದಸ್ಯರಾದ ಲಕ್ಷ್ಮೀ , ರೇಷ್ಮಾ ವಿಶಾಲ್, ವಿದ್ಯಾ ಉಪಸ್ಥಿತರಿದ್ದರು.