ಸುಳ್ಯ: ಡಿವಿಷನ್ ಎಸ್ಸೆಸ್ಸೆಫ್ ವತಿಯಿಂದ 'ರಂಝಿ ಕ್ಯಾಂಪ್ -18'

ಸುಳ್ಯ,ಎ.03: ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ವತಿಯಿಂದ ಸೆಕ್ಟರ್ ನಾಯಕರಿಗಾಗಿ 'ರಂಝಿ ಕ್ಯಾಂಪ್ -18' ಶನಿವಾರ ರಾತ್ರಿ ಗುತ್ತಿಗಾರು ಮದರಸ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಂಪ್ ಅನ್ನು ಗುತ್ತಿಗಾರು ಮಸ್ಜಿದ್ ಖತೀಬರಾದ ಇಲ್ಯಾಸ್ ಮದನಿ ಉದ್ಘಾಟಿಸಿ ಕಾರ್ಯಕರ್ತರಿಗೆ ಹಿತೋಪದೇಶ ನೀಡಿದರು. ನಂತರ 'ನಾಯಕ ಹೇಗಿರಬೇಕು' ಎಂಬ ವಿಷಯದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಾರ್ಯದರ್ಶಿ ಅಲಿ ತುರ್ಕಳಿಕೆ ತರಗತಿಯನ್ನು ನಡೆಸಿದರು. ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ 'ಉತ್ತಮ ಸ್ವಭಾವವನ್ನು ಮೈಗೂಡಿಸಿ' ಎನ್ನುವ ವಿಷಯವನ್ನಾದರಿಸಿ ತರಗತಿಯನ್ನು ನಡೆಸಿದರು. ಇದೇ ವೇಳೆ ದ.ಕ ಜಿಲ್ಲಾ ಸಮಿತಿಯ ನೂತನ ಸದಸ್ಯರಾಗಿ ಆಯ್ಕೆಯಾದ ಲತೀಫ್ ಸಖಾಫಿಯವರನ್ನು ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು.
ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಅಬ್ದುರ್ರಹ್ಮಾನ್ ಮೊಗರ್ಪಣೆ, SYS ಜಿಲ್ಲಾ ನಾಯಕರಾದ ಅಬ್ದುಲ್ ಹಮೀದ್ ಸುಣ್ಣಮೂಲೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಂತರ ಸೆಕ್ಟರ್ ನಾಯಕರಿಗಾಗಿ ರಂಝಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗುತ್ತಿಗಾರು ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಖಾದರ್ ವಳಲಂಬೆ, ಶಮೀರ್ ಮೊಗರ್ಪಣೆ, ಸಿದ್ದೀಕ್ ಕಟ್ಟೆಕಾರ್ಸ್, ಅಬ್ಬಾಸ್ ವಳಲಂಬೆ, ಮಜೀದ್ ವಳಲಂಬೆ, ಹಸೈನಾರ್ ವಳಲಂಬೆ, ಜುನೈದ್ ವಳಲಂಬೆ ಹಾಗೂ ಮಸೀದಿ ಆಡಳಿತ ಸಮಿತಿ ಸದಸ್ಯರು, ಡಿವಿಷನ್ ವ್ಯಾಪ್ತಿಯ ಸೆಕ್ಟರ್ ನಾಯಕರು ಊರಿನ ಹಿರಿಯರು, ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಡಿವಿಷನ್ ಪ್ರ. ಕಾರ್ಯದರ್ಶಿ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೇೂಲು ಸ್ವಾಗತಿಸಿ, ಕಾರ್ಯದರ್ಶಿ ಸಿದ್ದೀಕ್ ಸಅದಿ ಎಣ್ಮೂರು ವಂದಿಸಿದರು. ಡಿವಿಷನ್ ಕಾರ್ಯದರ್ಶಿ ಅಬ್ಬಾಸ್ ಎ.ಬಿ ನಿರೂಪಿಸಿದರು.