ದಾವಣಗೆರೆ: ಮರಕ್ಕೆ ಓಮ್ನಿ ಢಿಕ್ಕಿ; ಸ್ಥಳದಲ್ಲಿಯೇ ಮೂವರು ಮೃತ್ಯು
![ದಾವಣಗೆರೆ: ಮರಕ್ಕೆ ಓಮ್ನಿ ಢಿಕ್ಕಿ; ಸ್ಥಳದಲ್ಲಿಯೇ ಮೂವರು ಮೃತ್ಯು ದಾವಣಗೆರೆ: ಮರಕ್ಕೆ ಓಮ್ನಿ ಢಿಕ್ಕಿ; ಸ್ಥಳದಲ್ಲಿಯೇ ಮೂವರು ಮೃತ್ಯು](https://www.varthabharati.in/sites/default/files/images/articles/2018/04/2/davangere.jpg)
ದಾವಣಗೆರೆ, ಎ. 2: ಓಮ್ನಿಯೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಎಂಬಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ನಡೆದಿದೆ.
ಮೃತರನ್ನು ಜಗಳೂರು ನಿವಾಸಿಗಳಾದ ಮುಹಮ್ಮದ್ ರಫೀಕ್ (37), ಹಾಫೀಝ್ (56) ಹಾಗೂ ನಾಜ್ ಫೀರ್ (65) ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿಯಿಂದ ಜಗಳೂರಿಗೆ ಬರುವಾಗ ಓಮ್ನಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಓಮ್ನಿಯಲ್ಲಿದ್ದ ನಾಲ್ಕು ಮಂದಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story