ಮಂಗಳೂರು: ಮಸಾಜ್ ಪಾರ್ಲರ್ಗೆ ದಾಳಿ; 11 ಮಂದಿಯ ಬಂಧನ

ಮಂಗಳೂರು, ಎ. 2: ನಗರದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಆರ್ಯುವೇದಿಕ್ ಥೆರಾಪಿ ಕ್ಲಿನಿಕ್ ಎಂಬ ಹೆಸರಿನ ಮಸಾಜ್ ಸೆಂಟರ್ಗೆ ಸಿಸಿಬಿ ಪೊಲೀಸರು ಹಾಗೂ ಬಂದರು ಠಾಣೆ ಪೊಲೀಸರು ದಾಳಿ ಮಾಡಿ, 11 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಸಾಜ್ ಸೆಂಟರ್ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಬಂಟ್ವಾಳ ಫರಂಗಿಪೇಟೆಯ ಹರೀಶ್ ಶೆಟ್ಟಿ, ಕೇರಳ ಕಣ್ಣೂರಿನ ಸಿ.ಕೆ.ಪಟ್ಟಕಂಡಿ, ಕಣ್ಣೂರು ಕಾಟಿಮಳ್ಳಿಯ ರವೂದ್ ಎಂ.ಕೆ., ಕೇರಳ ನೆಲ್ಲಾಯನ ಸದಖತುಲ್ಲಾ (31), ಮಂಜನಾಡಿಯ ಅಬ್ದುಲ್ ರಹ್ಮಾನ್(37), ಕಣ್ಣೂರಿನ ಸಚೀಂದ್ರ ಎಂ.(43), ಕಣ್ಣೂರಿನ ದಿತಿನ್ ದಾಸ್ (25), ಕಣ್ಣೂರಿನ ಶಿಬೂಕೆ, ಕಣ್ಣೂರು ಕಾಳಿಪುರದ ಅನಸ್, ಪಾಲಕ್ಕಾಡ್ ಮಲಪ್ಪುರಂನ ರಾಜೇಶ್, ಕಣ್ಣೂರು ಚೆರಪಾರಸಿಯ ಸಿಯಾದ್ ಟಿ.ವಿ.(36) ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಟ್ಟು 53,400 ರೂ. ನಗದು ಹಾಗೂ 13 ಮೊಬೈಲ್ ಪೋನ್ಗಳನ್ನು ಸ್ವಾಧೀನಪಡಿಸಲಾಗಿದೆ. ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಾಂತರಾಮ, ಬಂದರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್ ಹಾಗೂ ಸಿಸಿಬಿ ಘಟಕದ ಪಿಎಸ್ಐ ಎಚ್.ಡಿ.ಕಬ್ಬಾಳ್ ರಾಜ್ ಹಾಗೂ ಬಂದರು ಠಾಣೆಯ ಪಿಎಸ್ಐ ಪ್ರದೀಪ್ ಟಿ.ಆರ್. ಹಾಗೂ ಸಿಸಿಬಿ ಘಟಕದ ಮತ್ತು ಬಂದರು ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.