Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಾಳು ಮೊರಡಿಗಳಲ್ಲಿ

ಹಾಳು ಮೊರಡಿಗಳಲ್ಲಿ

ವಾರ್ತಾಭಾರತಿವಾರ್ತಾಭಾರತಿ3 April 2018 12:04 AM IST
share
ಹಾಳು ಮೊರಡಿಗಳಲ್ಲಿ

ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ,
ಕೆರೆ ಬಾವಿ ಹೂಗಿಡ ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ ಚೌಪಥ ಪಟ್ಟಣ ಪ್ರವೇಶದಲ್ಲಿ,
ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
ಕರೆವೆಮ್ಮೆಯ ಹಸುಗೂಸು ಬಸುರಿ ಬಾಣತಿ,
ಕುಮಾರಿ, ಕೊಡಗೂಸು ಎಂಬುವರ ಹಿಡಿದುಂಬ, ತಿರಿದುಂಬ
ಮಾರಯ್ಯ ಬೀರಯ್ಯ ಕೇಚರಗಾವಿಲ ಅಂತರಬೆಂತರ
ಕಾಳಯ್ಯ, ಧೂಳಯ್ಯ, ಮಾಳಯ್ಯ, ಕೇತಯ್ಯಗಳೆಂಬ ನೂರು ಮಡಕೆಗೆ
ನಮ್ಮ ಕೂಡಲಸಂಗಮದೇವಂಗೆ ಶರಣೆಂಬುದೊಂದು ದಡಿ ಸಾಲದೆ?

                                                                                 -ಬಸವಣ್ಣ

ಹಾಳುಬಿದ್ದ ಮಡ್ಡಿಭೂಮಿಯಲ್ಲಿ, ಹಾದಿಬೀದಿಗಳಲ್ಲಿ ಕೆರೆದಂಡೆಯಲ್ಲಿ, ಬಾವಿಯ ಮೆಟ್ಟಿಲುಗಳ ಪಕ್ಕ, ಬನ್ನಿ, ಬೇವು ಮುಂತಾದ ಗಿಡಗಳಲ್ಲಿ, ದೊಡ್ಡದೊಡ್ಡ ಆಲದ ಮರಗಳಲ್ಲಿ, ಗ್ರಾಮದ ಮಧ್ಯಭಾಗದಲ್ಲಿ, ನಾಲ್ಕುಪಥ ಗಳುಳ್ಳ ಪಟ್ಟಣದ ಪ್ರವೇಶ ಸ್ಥಳದಲ್ಲಿ ಈ ಕ್ಷುದ್ರದೇವತೆಗಳು ಬೀಡುಬಿಟ್ಟಿರುತ್ತವೆ. ಇವು ಹಾಲು ಕರೆಯುವ ಎಮ್ಮೆಗಳಿಗೆ, ಹಸುಗೂಸುಗಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಬಾಲಕಿಯರಿಗೆ ಮತ್ತು ಕನ್ಯೆಯರಿಗೆ ಕಾಡುತ್ತವೆ. ಜನ ಇಂಥ ಮೂಢನಂಬಿಕೆಯಿಂದಾಗಿ ದುರ್ಬಲ ಮನಸ್ಸಿನವರಾಗುತ್ತಾರೆ. ಅವರ ಮನಸ್ಸಿನಲ್ಲಿ ಕಾಡುವ ಈ ದೈವಗಳು ಭಯವನ್ನು ಸೃಷ್ಟಿಸುತ್ತಲೇ ಇರುತ್ತವೆ. ಜನ ಅಂಜಿ ಈ ದೈವಗಳಿಗೆ ಹರಕೆ ಹೊರುತ್ತಾರೆ, ಸಾಲ ಮಾಡಿ ಹರಕೆ ತೀರಿಸುತ್ತಾರೆ. ಆ ಸಾಲ ತೀರಿಸಲು ಒದ್ದಾಡುತ್ತಾರೆ. ಹೀಗೆ ಬಡವರ ಬದುಕು ದುಃಖದ ಚಕ್ರದಲ್ಲಿ ಸಿಲುಕುತ್ತದೆ. ಹೀಗಾಗಿ ಅನೇಕರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಎಲ್ಲೆಂದರಲ್ಲಿ ಕಂಡುಬರುವ ಈ ದೇವತೆಗಳು ಜನರನ್ನು ಮೌಢ್ಯದ ಕಡೆಗೆ ಒಯ್ಯುತ್ತವೆ. ಬದುಕನ್ನು ದುಸ್ತರಗೊಳಿಸುತ್ತವೆ. ಈ ದೇವರುಗಳಿಗೆ ಬೆಳ್ಳಿಪಾದುಕೆ, ಬೆಳ್ಳಿತೊಟ್ಟಿಲು, ಬಂಗಾರದ ಕಣ್ಣು, ಹಿತ್ತಾಳೆಯ ಪ್ರಭಾವಳಿ, ಸೀರೆ ಮುಂತಾದ ಬಟ್ಟೆಬರೆ, ಕೋಳಿ, ಕುರಿ, ಕೋಣ ಬೇಕು. ಬಡವರನ್ನು ಕಾಡಿಬೇಡಿ ಹಿಡಿದು ತಿನ್ನುವ ಮತ್ತು ಯಾಚಿಸಿ ತಿನ್ನುವ ಈ ದೇವರುಗಳನ್ನು ಬಸವಣ್ಣನವರು ತಿರಸ್ಕರಿಸುತ್ತಾರೆ. ಸೃಷ್ಟಿಕರ್ತನ ಸೃಷ್ಟಿಯೇ ದೇವರಾಗಲು ಸಾಧ್ಯವಿಲ್ಲ. ಇನ್ನು ಸೃಷ್ಟಿಕರ್ತನ ಸೃಷ್ಟಿಯ ಮಕ್ಕಳಾದ ದೈವಗಳು ಅದು ಹೇಗೆ ದೇವರಾಗುತ್ತವೆ? ನಿರಾಕಾರ ಸೃಷ್ಟಿಕರ್ತನನ್ನು ಹೊರತುಪಡಿಸಿ ಉಳಿದೆಲ್ಲ ದೇವರುಗಳು ಕಲ್ಲು, ಮಣ್ಣು ಮತ್ತು ಲೋಹಗಳಿಗೆ ಜನಿಸಿದವುಗಳಾಗಿವೆ. ಹೀಗೆ ಜನರು ಸತ್ಯವನ್ನು ಅರ್ಥೈಸಿಕೊಂಡು ಪ್ರಜ್ಞಾವಂತರಾಗಿ ಬಾಳಬೇಕೆನ್ನುತ್ತಾರೆ. ಕ್ಷುದ್ರ ದೇವತೆಗಳಿಂದಾಗಿ ಜನಸಾಮಾನ್ಯರು ಬಸವಳಿದದ್ದನ್ನು ಬಸವಣ್ಣನವರು ನೋಡಿದ್ದಾರೆ. ಅವರ ವಿಮೋಚನೆಗಾಗಿ ಚಿಂತಿಸಿದ್ದಾರೆ. ಇವರೆಲ್ಲ ಇಷ್ಟಲಿಂಗಕ್ಕೆ ಶರಣಾದರೆ ಎಲ್ಲ ತೆರೆನಾದ ಮೂಢನಂಬಿಕೆಗಳಿಂದ ಮುಕ್ತರಾಗುವರು. ಇಷ್ಟಲಿಂಗವೆಂಬ ವೈಚಾರಿಕ ದೊಣ್ಣೆಯಿಂದ ನೂರಾರು ಮಡಕೆಗಳಂತಿರುವ ಕ್ಷುದ್ರದೇವತೆಗಳನ್ನು ನಾಶಗೊಳಿಸುವುದು ಕಷ್ಟಕರವಲ್ಲ ಎಂದು ಬಸವಣ್ಣನವರು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇಷ್ಟಲಿಂಗದ ಪೂಜೆಗೆ ಖರ್ಚಿಲ್ಲ. ಅದಕ್ಕೆ ಹರಕೆ ಹೊರಬೇಕಿಲ್ಲ. ಅದು ಯಾರನ್ನೂ ಕಾಡುವುದಿಲ್ಲ. ಎಲ್ಲರಲ್ಲೂ ಆತ್ಮಶಕ್ತಿ ತುಂಬುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X