ಶಾಂತಿಬಾಗ್ನಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್

ಮಂಗಳೂರು, ಎ.3: ಪ್ರವಾದಿ ಮುಹಮ್ಮದ್ (ಸ) ಸಾರಿದ ತತ್ವಾದರ್ಶಗಳನ್ನು ಪಾಲಿಸಿಕೊಂಡು ಜೀವಿಸಬೇಕಾದ ಕರ್ತವ್ಯ ನಮ್ಮದಾಗಿದೆ ಎಂದು ಪೇರೋಡ್ ಅಬ್ದುಲ್ ರ್ರಹ್ಮಾನ್ ಸಖಾಫಿ ಹೇಳಿದರು.
ಎಸ್ಸೆಸ್ಸೆಫ್ ಯೆನೆಪೋಯ ಕ್ಯಾಂಪಸ್ ಶಾಂತಿಬಾಗ್ ಶಾಖೆಯ ಆಶ್ರಯದಲ್ಲಿ ಯೆನೆಪೋಯ ಮೆಡಿಕಲ್ ಕಾಲೇಜು ಬಳಿ ಜರಗಿದ ಹುಬ್ಬುರ್ರಸೂಲ್ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಬ್ಬಾಸ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಯೆನೆಪೋಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಜುನೈದ್ ತಂಙಳ್, ಸಿದ್ದೀಕ್ ಮೋಂಟುಗೋಳಿ, ಉಸ್ಮಾನ್ ಸಅದಿ ಪಟ್ಟೋರಿ, ಮುನೀರ್ ಅಹ್ಮದ್ ಸಖಾಫಿ, ಅಬೂಬಕರ್ ಸಿದ್ದೀಕ್ ಝುಹ್ರಿ, ಉಮರ್ ಸಖಾಫಿ, ಅಬ್ದುಲ್ ಅಝೀಝ್ ಝುಹ್ರಿ ಪುಣಚ, ಏಷ್ಯನ್ ಬಾವಾ ಹಾಜಿ, ಅಲ್ತಾಫ್ ಕುಂಪಲ, ಮುಹಮ್ಮದ್ ಹಾಜಿ, ಹನೀಫ್ ಹಾಜಿ, ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು. ಎಸ್. ಎಂ. ಇಲ್ಯಾಸ್ ಸಖಾಫಿ ಸ್ವಾಗತಿಸಿದರು. ಇರ್ಫಾನ್ ಎ.ಎಂ. ವಂದಿಸಿದರು.
Next Story