ದಾವಣಗೆರೆ ಬೆಣ್ಣೆ ದೋಸೆಗೆ ಮನಸೋತ ರಾಹುಲ್ ಗಾಂಧಿ
ಸೆಲ್ಫಿಗೆ ಮುಗಿಬಿದ್ದ ಜನರು
![ದಾವಣಗೆರೆ ಬೆಣ್ಣೆ ದೋಸೆಗೆ ಮನಸೋತ ರಾಹುಲ್ ಗಾಂಧಿ ದಾವಣಗೆರೆ ಬೆಣ್ಣೆ ದೋಸೆಗೆ ಮನಸೋತ ರಾಹುಲ್ ಗಾಂಧಿ](https://www.varthabharati.in/sites/default/files/images/articles/2018/04/4/rahul.gif)
ದಾವಣಗೆರೆ, ಎ.4: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದರು.
ರಾಜ್ಯದಲ್ಲಿ 5ನೇ ಹಂತದ ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ಇಂದು ದಾವಣಗೆರೆಗೆ ಆಗಮಿಸಿದ್ದರು. ಈ ಸಂದರ್ಭ ಇಲ್ಲಿನ ಪಿ.ಜೆ. ಬಡಾವಣೆಯಲ್ಲಿರುವ ವಿ.ಜಿ. ಬೆಣ್ಣೆ ದೋಸೆ ಹೋಟೆಲ್ ಗೆ ಭೇಟಿ ನೀಡಿದ ಅವರು ಬೆಣ್ಣೆ ದೋಸೆ ಸವಿದರು. ದೋಸೆಯ ಸವಿಗೆ ಮನಸೋತ ರಾಹುಲ್ ಹೋಟೆಲ್ ಮಾಲಕನಿಗೆ ಮೆಚ್ಚುಗೆ ಹೇಳಿದರು.
ಬಳಿಕ ಪಕ್ಕದಲ್ಲಿರುವ ಪದ್ದು ಕಾಫಿ ಬಾರ್ ನಿಂದ ಟೀ ತರಿಸಿಕೊಂಡು ಕುಡಿದರು.
ರಾಹುಲ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಮಲ್ಲಿಕಾರ್ಜುನ ಖರ್ಗೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಥ್ ನೀಡಿದರು. ಇವರೆಲ್ಲ ಸೇರಿ ಒಟ್ಟು 23 ದೋಸೆ ತಿಂದರು.-
ಹೋಟೆಲ್ ನಿಂದ ರಾಹುಲ್ ಗಾಂಧಿ ಹೊರಬರುತ್ತಿದ್ದಂತೆ ಯುವಜನರು ಅವರೂಂದಿಗೆ ಸೆಲ್ಫಿ ತೆಗೆಸಿಕೊಳಲು ಮುಗಿಬಿದ್ದರು.
ಬಳಿಕ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದ ರಾಹುಲ್ ಗಾಂಧಿ ಚಿತ್ರದುರ್ಗದತ್ತ ಪಯಣ ಬೆಳೆಸಿದರು.
Next Story