ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕೆಎಸ್ಆರ್ ಪಿ ಪೊಲೀಸ್ ಪೇದೆ ಮೃತ್ಯು
![ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕೆಎಸ್ಆರ್ ಪಿ ಪೊಲೀಸ್ ಪೇದೆ ಮೃತ್ಯು ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಕೆಎಸ್ಆರ್ ಪಿ ಪೊಲೀಸ್ ಪೇದೆ ಮೃತ್ಯು](https://www.varthabharati.in/sites/default/files/images/articles/2018/04/4/Accident-im.jpg)
ಶಿವಮೊಗ್ಗ, ಏ. 4: ಡಾಂಬರ್ ಸಾಗಿಸುವ ಟ್ಯಾಂಕರ್ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಕೆಎಸ್ಆರ್ ಪಿ ಪೊಲೀಸ್ ಪೇದೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಗ್ರಾಂಡ್ ಡಿಸೋಜಾ (50) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರು ಮಾಚೇನಹಳ್ಳಿಯ ಕೆಎಸ್ಆರ್ ಪಿ ಘಟಕದಲ್ಲಿ ಪೇದೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಎಂದಿನಂತೆ ಅವರು ತಮ್ಮ ಸ್ಕೂಟಿಯಲ್ಲಿ ಮನೆಯಿಂದ ಕರ್ತವ್ಯಕ್ಕೆ ತೆರಳುವ ವೇಳೆ ಈ ಅವಘಡ ಸಂಭವಿಸಿದೆ. ಈ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story