ಹನೂರು: ಬೈಕ್ - ಗೂಡ್ಸ್ ಆಟೋ ಢಿಕ್ಕಿ; ಸವಾರ ಮೃತ್ಯು
![ಹನೂರು: ಬೈಕ್ - ಗೂಡ್ಸ್ ಆಟೋ ಢಿಕ್ಕಿ; ಸವಾರ ಮೃತ್ಯು ಹನೂರು: ಬೈಕ್ - ಗೂಡ್ಸ್ ಆಟೋ ಢಿಕ್ಕಿ; ಸವಾರ ಮೃತ್ಯು](https://www.varthabharati.in/sites/default/files/images/articles/2018/04/5/05 HANUR.3.jpg)
ಹನೂರು,ಎ.05: ಬೈಕ್ ಹಾಗೂ ಗೂಡ್ಸ್ ಆಟೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕ್ಷೇತ್ರ ವ್ಯಾಪ್ತಿಯ ಕುರಟ್ಟಿ ಹೊಸೂರು -ಭದ್ರಯ್ಯನ ಹಳ್ಳಿ ಮಾರ್ಗ ಮಧ್ಯೆ ನಡೆದಿದೆ.
ಕುರಟ್ಟಿ ಹೊಸೂರು ಗ್ರಾಮದ ಪೊನ್ನಶೆಟ್ಟಿಯ ಮಗ ತಮ್ಮಯ್ಯಶೆಟ್ಟಿ (42) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಇವರು ಬುಧವಾರ ಸಂಜೆ 6 ರ ವೇಳೆ ತನ್ನ ಸ್ನೇಹಿತ ಕೃಷ್ಣಯ್ಯಶೆಟ್ಟಿ ಎಂಬವರೊಂದಿಗೆ ಗ್ರಾಮದಿಂದ ಬೈಕ್ನಲ್ಲಿ ಕೌದಳ್ಳಿ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯದ ಮಹದೇಶ್ವರ ದೇವಸ್ಥಾನದ ಬಳಿ ಎದುರಿನಿಂದ ಬಂದ ಇವರ ಬೈಕ್ ಹಾಗೂ ಗೂಡ್ಸ್ ಆಟೋ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ತಮ್ಮಯ್ಯಶೆಟ್ಟಿ ಹಾಗೂ ಕೃಷ್ಣಯ್ಯಶೆಟ್ಟಿ ಗಾಯಗೊಂಡಿದ್ದರು. ಈ ವೇಳೆ ಸಾರ್ವಜನಿಕರ ಸಹಕಾರದಿಂದ ಇಬ್ಬರನ್ನು ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ತಮ್ಮಯ್ಯ ಶೆಟ್ಟಿಯನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ12.15 ರ ವೇಳೆಗೆ ತಮ್ಮಯ್ಯಶೆಟ್ಟಿ ಮೃತಪಟ್ಟಿದ್ದಾರೆ. ಗುರುವಾರ ಮೃಹದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಇನ್ನು ಗಾಯಗೊಂಡಿದ್ದ ಕೃಷ್ಣಯ್ಯ ಶೆಟ್ಟಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಮೃತರ ಸಂಬಂಧಿ ಮುನಿಸ್ವಾಮಿ ರಾಮಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಎಎಸೈ ಶಿವನಂಜಪ್ಪ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.