ಹನೂರು: ಕಡ್ಡಾಯ ಮತದಾನ ಅರಿವು ಕಾರ್ಯಕ್ರಮ
![ಹನೂರು: ಕಡ್ಡಾಯ ಮತದಾನ ಅರಿವು ಕಾರ್ಯಕ್ರಮ ಹನೂರು: ಕಡ್ಡಾಯ ಮತದಾನ ಅರಿವು ಕಾರ್ಯಕ್ರಮ](https://www.varthabharati.in/sites/default/files/images/articles/2018/04/5/hanur news photo 02.jpg)
ಹನೂರು,ಎ.05: ಪ್ರಜಾಪ್ರಬುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮತದಾನವು ಪವಿತ್ರವಾದದು ಎಂದು ಹನೂರು ವಲಯದ ಶಿಕ್ಷಾಣಿಧಿಕಾರಿಯಾದ ಟಿ.ಆರ್ ಸ್ವಾಮಿ ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಗಳು ಹಾಗೂ ಪ್ರಮುಖ ಬೀದಿಗಳಲ್ಲಿ 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂಬಂಧ ಕಡ್ಡಾಯ ಮತದಾನ ಅರಿವು ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿಲಾಗಿತ್ತು. ಇದನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಾವುದೇ ಭಯ, ಆತಂಕ, ಮುಜುಗರವಿಲ್ಲದೇ ನಿರ್ಭೀತಿಯಿಂದ ಮತ ಚಲಾಯಿಸಿಬೇಕು. ತಾವು ಮತ ಹಾಕುವುದಲ್ಲದೇ ತಮ್ಮ ನೆರೆ ಹೊರೆವರನ್ನು ಮತದಾನಕ್ಕೆ ಪ್ರೇರೆಪಿಸಿಬೇಕು. ವಿದ್ಯಾವಂತ ಮತದಾರರು ಹೆಚ್ಚು ಮತದಾನ ಮಾಡುವುದರಿಂದ ಉತ್ತಮ ಅಭ್ಯರ್ಥಿಗಳ ಆಯ್ಕೆಯಾಗಿ ಪ್ರಜಾಪ್ರಭುತ್ವ ಇನ್ನಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಾನ್ ಬ್ರೀಟೋ, ಮು.ಶಿ ಅಧ್ಯಕ್ಷ ನಂಜುಂಡಸ್ವಾಮಿ, ಬಿಆರ್ ಪಿ ಆಶೋಕ್ , ಶ್ರೀನಿವಾಸ್ನಾಯ್ಡು, ವೆಂಕಟರಾಜು, ಶಿವಕುಮಾರಿ, ಬಿಐಇಆರ್ ಟಿ ಕೃಷ್ಣ, ಸಿಆರ್ ಪಿ ಕಚೇರಿ ಸಿಬ್ಬಂದಿ, ಶಿಕ್ಷಕವೃಂದದ ಹಲವರು ಹಾಜರಿದ್ದರು.