ಚಾಮರಾಜನಗರ: ಮುಖಂಡರ, ಕಾರ್ಯಕರ್ತರ ಮನೆಗೆ ತೆರಳಿ ವಾಟಾಳ್ ನಾಗರಾಜ್ ಪ್ರಚಾರ
![ಚಾಮರಾಜನಗರ: ಮುಖಂಡರ, ಕಾರ್ಯಕರ್ತರ ಮನೆಗೆ ತೆರಳಿ ವಾಟಾಳ್ ನಾಗರಾಜ್ ಪ್ರಚಾರ ಚಾಮರಾಜನಗರ: ಮುಖಂಡರ, ಕಾರ್ಯಕರ್ತರ ಮನೆಗೆ ತೆರಳಿ ವಾಟಾಳ್ ನಾಗರಾಜ್ ಪ್ರಚಾರ](https://www.varthabharati.in/sites/default/files/images/articles/2018/04/6/06 Apr chn vatal photo 01.jpg)
ಚಾಮರಾಜನಗರ.ಎ.06: ಕ್ಷೇತ್ರದ ಎಲ್ಲಾ ವರ್ಗದ ಬಡ ಜನತೆಗೆ 10 ಸಾವಿರ ನಿವೇಶನಗಳನ್ನು ಕೊಡಿಸುತ್ತೇನೆ. ನಗರಕ್ಕೆ ಕಾವೇರಿ ಕುಡಿಯುವ ನೀರಿನ ಎರಡನೇ ಹಂತ ಯೋಜನೆ ತರುತ್ತೇನೆ. ಈ ಬಾರಿ ನನ್ನನ್ನು ಬೆಂಬಲಿಸಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅದ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಇಂದು ಚಾಮರಾಜನಗರ ಕ್ಷೇತ್ರ ವ್ಯಾಪ್ತಿಗೆ ಬರುವ ಎಲಕ್ಕೂರು, ಹುಲ್ಲೇಪುರ, ಕರಡಿಮೋಳೆ, ಯಡಿಯೂರು, ಮಹಾಂತಳಪುರ, ಅನಹಳ್ಳಿ, ಕಿರಗಸೂರು, ಸಪ್ಪಯ್ಯನಪುರ, ಬೋಗಾಪುರ ಗ್ರಾಮಗಳಲ್ಲಿ ವಾಟಾಳ್ ನಾಗರಾಜ್ ಮುಖಂಡರ, ಕಾರ್ಯಕರ್ತರ ಮನೆ ಮನೆಗೆ ತೆರಳಿ ಪ್ರಚಾರ ಮಾಡಿ ಮಾತನಾಡಿದರು.
ಹೋದ ಕಡೆಯಲ್ಲೆಲ್ಲಾ ಮಹಿಳೆಯರೇ ಹೆಚ್ಚಾಗಿ ಬೆಲ್ಲದ ಆರತಿ ಎತ್ತಿ ಸ್ವಾಗತಿಸಿ ಗೌರವಿಸಿದ್ದಾರೆ. ನಾನು ಹಿಂದೆ ಮಾಡಿದಂತಹ ಕೆಲಸ ಕಾರ್ಯಗಳನ್ನು ಮೆಚ್ಚಿ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ವಾಟಾಳ್ ನುಡಿದರು. ಚಂದಕವಾಡಿ, ಬದನಗುಪ್ಪೆ ಭಾಗಗಳಲ್ಲಿ ಸುಸಜ್ಜಿತ ಮೂಲ ನಾಗರೀಕ ಸೌಲಭ್ಯಗಳನ್ನೊಳಗೊಂಡ ಎರಡು ಉಪನಗರ ನಿರ್ಮಾಣ ಹಾಗು ಸಾಗುವಳಿ ಚೀಟಿ ವಿತರಣೆ, ಮಹಿಳೆಯರಿಗೆ ವಿಶೇಷವಾದ ಯೋಜನೆ ತಯಾರಿಸಿ ಅವರ ಕಲ್ಯಾಣಕ್ಕೆ ಕಂಕಣ ಬದ್ದವಾಗಿ ದುಡಿಯುತ್ತೇನೆ. ಚಾಮರಾಜನಗರ ಸೇರಿದಂತೆ ಎಲ್ಲಾ ಗ್ರಾಮಗಳಿಗೆ ಖಾಯಂ ಕುಡಿಯುವ ನೀರು ಹಾಗು ಸಮಗ್ರ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ವಾಟಾಳ್ ಹೇಳಿದರು.
ಈ ಸಂದರ್ಭದಲ್ಲಿ ದಳಪತಿ ವೀರತಪ್ಪ, ನಾಗರಾಜಮೂರ್ತಿ, ಕಾರ್ನಾಗೇಶ್, ಸುರೇಶ್ನಾಗ್, ಕೆಂಪಣ್ಣ, ರೇವಣ್ಣಸ್ವಾಮಿ, ಅಜಯ್, ವೀರಭದ್ರಸ್ವಾಮಿ, ಮೂರ್ತಿ, ಬಸವಣ್ಣ, ಮಹದೇವಸ್ವಾಮಿ, ಗಣಪತಿ, ಬಸವರಾಜು, ಗೌಡಿಕೆ ನಂಜುಂಡೇಗೌಡ, ಮಲ್ಲಿಕಾರ್ಜುನ, ವರದರಾಜು, ಶಿವಲಿಂಗಮೂರ್ತಿ, ಮಹದೇವನಾಯಕ, ಗೌಡಿಕೆ ಸೋಮಣ್ಣ, ಕಿರಗಸೂರು ಮಾದಪ್ಪ, ನಾಗರಾಜು, ಚಿಕ್ಕಬಸಪ್ಪ, ಗುರುಸಿದ್ದಪ್ಪ, ಪಿ.ಮಹದೇವಪ್ಪ, ಲಿಂಗರಾಜು, ಲಿಂಗಶೆಟ್ಟಿ, ಪಣ್ಯದಹುಂಡಿ ರಾಜು, ವರದನಾಯಕ, ಜಾವಿದ್, ಇತರರು ಹಾಜರಿದ್ದರು.