ಕೊರಗ ಸಮುದಾಯದ ಬಾಯ್ಸ ಟ್ರೋಫಿ ಉದ್ಘಾಟನೆ

ಉಡುಪಿ, ಎ.7: ಚಿಟ್ಪಾಡಿ ಬಾಯ್ಸಾ ಕ್ರಿಕೆಟರ್ಸ್ ಆಶ್ರಯದಲ್ಲಿ ಉಡುಪಿ ಬೀಡಿನಗುಡ್ಡೆ ಮೈದಾನದಲ್ಲಿ ಕೊರಗ ಸಮುದಾಯದವರಿಗಾಗಿ ಏರ್ಪಡಿಸಲಾದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಚಂದ್ರಹಾಸ ಶನಿವಾರ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಯುವ ವಕೀಲ ಅಸದುಲ್ಲಾ ಕಟಪಾಡಿ ಮಾತನಾಡಿ ದರು. ಕೊರಗ ಸೇವಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ರವಿ, ಕೊರಗ ಸಮುದಾಯದ ಗುರಿಕಾರ ಆನಂದ ಚಿಟ್ಪಾಡಿ, ಆನಂದ ಅಲೆವೂರು, ಬಾಯ್ಸಾ ಕ್ರಿಕೆಟರ್ಸ್ನ ಅಧ್ಯಕ್ಷ ಸುನಿಲ್ ಉಪಸ್ಥಿತರಿದ್ದರು.
ಶಂಕರ್ ಕಾಡಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಈ ಕ್ರೀಡಾಕೂಟದಲ್ಲಿ ಅವಿಭಜಿತ ಜಿಲ್ಲೆಯ ಕೊರಗ ಸಮುದಾಯದ 30ತಂಡಗಳು ಭಾಗವಹಿಸಿದ್ದವು.
Next Story