Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಅರ್ಥವಾಗಲು ಕಷ್ಟವಾಗುವ ವರ್ತಮಾನ!

ಅರ್ಥವಾಗಲು ಕಷ್ಟವಾಗುವ ವರ್ತಮಾನ!

ವಾರ್ತಾಭಾರತಿವಾರ್ತಾಭಾರತಿ8 April 2018 12:12 AM IST
share
ಅರ್ಥವಾಗಲು ಕಷ್ಟವಾಗುವ ವರ್ತಮಾನ!

ಸಾಮಾನ್ಯವಾಗಿ ಕನ್ನಡದ ಯಾವುದೇ ಸಿನೆಮಾ ಗಳನ್ನು ಅರ್ಧದಿಂದ ನೋಡತೊಡಗಿದರೂ ಅರ್ಥ ವಾಗುತ್ತಾ ಹೋಗುತ್ತದೆ. ಯಾಕೆಂದರೆ ಒಂದಲ್ಲ ಒಂದು ಕಡೆ ನಿರ್ದೇಶಕರು ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಬಂದೇ ಬರುತ್ತಾರೆ. ಆದರೆ ಚಿತ್ರ ಆರಂಭಗೊಂಡು ಮಧ್ಯಂತರ ತಲುಪಿದರೂ ಅರ್ಥವಾಗದಂತೆ ಸಾಗುವ ರೀತಿ ‘ವರ್ತಮಾನ’ದ್ದು.

ಅನಂತ ಎಂಬಾತ ತನ್ನ ಸ್ನೇಹಿತರ ಜೊತೆಗೆ ಸೇರಿಕೊಂಡು ಹಣ ಸಂಪಾದನೆಗಾಗಿ ಅಡ್ಡದಾರಿ ಹಿಡಿಯುತ್ತಾನೆ. ಆದರೆ ಅಡ್ಡದಾರಿ ಹಿಡಿದು ಸಂಪತ್ತು ಪಡೆದ ಮಾತ್ರಕ್ಕೆ ಸಂತೋಷ ನಿರಂತರವಲ್ಲ ಎಂದು ತೋರಿಸುವುದೇ ವರ್ತಮಾನ. ಅಡ್ಡದಾರಿ ಹಿಡಿದ ವ್ಯಕ್ತಿ ಹುಚ್ಚನಾಗಿರುವುದನ್ನು ತೋರಿಸಲು ನಿರ್ದೇಶಕರು ಅಡ್ಡಾದಿಡ್ಡಿ ದಾರಿ ಹಿಡಿದಿದ್ದಾರೆ.ಹಾಗಾಗಿ ನೋಡುತ್ತಾ ನೋಡುತ್ತಾ ಪ್ರೇಕ್ಷಕನಿಗೇ ಹುಚ್ಚು ಹಿಡಿದಂತಾದರೆ ಅಚ್ಚರಿಯಿಲ್ಲ. ರಿವರ್ಸ್ ಚಿತ್ರಕತೆ, ಫ್ಲ್ಯಾಶ್ ಬ್ಯಾಕ್ ಮೇಲೆ ಫ್ಲ್ಯಾಶ್ ಬ್ಯಾಕ್ ಮೊದಲಾದವು ಕನ್ನಡಿಗರಿಗೆ ಹೊಸತೇನಲ್ಲ.ಉಪೇಂದ್ರರ ‘ಎ’ಚಿತ್ರದಿಂದ ಪವನ್ ನಿರ್ದೇಶನದ ‘ಲೂಸಿಯಾ’ ತನಕ ನೋಡಿ ಮೆಚ್ಚಿದ್ದಾರೆ. ಆದರೆ ಅಲ್ಲೆಲ್ಲ ಕಲರ್‌ಫುಲ್ ಹಾಡು, ಸಂಭಾಷಣೆಗಳು ಕತೆಗೆ ಬಣ್ಣ ತುಂಬಿವೆ. ಆದರೆ ಇಲ್ಲಿ ಮನಸಿನ ಅಸ್ಪಷ್ಟತೆಯನ್ನು ತೋರಿಸಲು ಹೊರಟು ದೃಶ್ಯಗಳನ್ನೇ ಅಸ್ಪಷ್ಟಗೊಳಿಸಲಾಗಿದೆ. ಖಂಡಿತವಾಗಿ ಇದು ಒಳ್ಳೆಯ ಸಂದೇಶಗಳನ್ನು ನೀಡುವಂಥ ಪ್ರಯೋಗಾತ್ಮಕ ಸಿನೆಮಾ. ಆದರೆ ಕಮರ್ಷಿಯಲ್ ಪ್ರೇಕ್ಷಕರ ವಿಚಾರಕ್ಕೆ ಬಂದರೆ ಅವರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಿತ್ರದ ನಾಯಕ ಅನಂತನಾಗಿ ಸಂಚಾರಿ ವಿಜಯ್ ನಟನೆ ಎಂದಿನಂತೆ ಆಕರ್ಷಕವಾಗಿದೆ ‘ಅನಂತ’ನ ಮೂಲಕ ‘ಆದರ್ಶ’ನ ಹುಡುಕಾಟ ಮಾಡಿಸುವ ನಿರ್ದೇಶಕರ ಜಾಣ್ಮೆಯೂ ಮೆಚ್ಚತಕ್ಕದ್ದು. ಸಹೋದರಿಯಾಗಿ ವಾಣಿ ಶ್ರೀ, ವೈದ್ಯೆಯಾಗಿ ಸಪ್ನಾರಾಜ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದಂತೆ ಪಾತ್ರ, ಸಂಭಾಷಣೆಗಳಿಗಿಂತ ಸನ್ನಿವೇಶಗಳಿಗೆ ಒತ್ತು ನೀಡಲಾಗಿದೆ. ನಾಯಕಿ ಸಂಜನಾ ಪ್ರಕಾಶ್‌ಗೆ ವಿಶೇಷ ಅವಕಾಶಗಳೇನೂ ಇಲ್ಲ.

ವಿಶ್ವನಾಥ್‌ರ ಸಂಕಲನ ಚೆನ್ನಾಗಿದೆ. ಆದರೆ ನಿರ್ದೇಶಕರು ಬಯಸಿದ್ದಲ್ಲಿ ಚಿತ್ರವನ್ನು ಇನ್ನಷ್ಟು ಹೃಸ್ವಗೊಳಿಸಬಹುದಿತ್ತು! ಶರವಣ ಅವರ ಸಂಗೀತದಲ್ಲಿ ಹಾಡುಗಳಿಲ್ಲವಾದರೂ ಹಿನ್ನೆಲೆ ಸಂಗೀತದಿಂದಲೇ ಆಕರ್ಷಣೆ ತುಂಬಿದ್ದಾರೆ.

ಒಟ್ಟಿನಲ್ಲಿ ‘ವರ್ತಮಾನ’ ಸುಲಭದಲ್ಲಿ ಅರ್ಥವಾಗುವುದಿಲ್ಲ. ಅದಕ್ಕೆ ಕಾರಣ, ವರ್ತಮಾನ ಕಾಲದಲ್ಲಿ ಸುಲಭದಲ್ಲಿ ಯಾವುದೂ ಯಾರಿಗೂ ಅರ್ಥವಾಗುವುದಿಲ್ಲ. ಎಲ್ಲಕ್ಕೂ, ಎಲ್ಲರಿಗೂ ಎರಡು ಮುಖಗಳಿರುತ್ತವೆ. ಅವುಗಳನ್ನು ಅರಿಯಲು ಸಾಮರ್ಥ್ಯ ಇರುವವರು ಚಿತ್ರ ನೋಡಬಹುದು.

ತಾರಾಗಣ: ಸಂಚಾರಿ ವಿಜಯ್, ಸಂಜನಾ ಪ್ರಕಾಶ್
ನಿರ್ದೇಶಕ: ಉಮೇಶ್ ಅಂಶಿ
ನಿರ್ಮಾಪಕರು: ಮನು ಬಿಲ್ಲೇಮನೆ, ಹೇಮಾವತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X