Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯಾದ ಡೌಮ ಮೇಲೆ ಶಂಕಿತ ರಾಸಾಯನಿಕ...

ಸಿರಿಯಾದ ಡೌಮ ಮೇಲೆ ಶಂಕಿತ ರಾಸಾಯನಿಕ ದಾಳಿ: ಮಹಿಳೆಯರು, ಮಕ್ಕಳು ಸೇರಿ 70 ಮಂದಿ ಮೃತ್ಯು

ವಾರ್ತಾಭಾರತಿವಾರ್ತಾಭಾರತಿ8 April 2018 2:40 PM IST
share
ಸಿರಿಯಾದ ಡೌಮ ಮೇಲೆ ಶಂಕಿತ ರಾಸಾಯನಿಕ ದಾಳಿ: ಮಹಿಳೆಯರು, ಮಕ್ಕಳು ಸೇರಿ 70 ಮಂದಿ ಮೃತ್ಯು

ಬೈರೂತ್(ಲೆಬನಾನ್),ಎ.9: ಸಿರಿಯದ ಪೂರ್ವ ಘೌತ ಪ್ರಾಂತದಲ್ಲಿ ಬಂಡುಕೋರರ ವಶದಲ್ಲಿರುವ ಕಟ್ಟಕಡೆಯ ಪಟ್ಟಣವಾದ ಡೌಮದಲ್ಲಿ ನಡೆದ ಶಂಕಿತ ರಾಸಾಯನಿಕ ಅಸ್ತ್ರ ದಾಳಿಯಲ್ಲಿ ಕನಿಷ್ಠ 70 ಮಂದಿ ನಾಗರಿಕರು ಮೃತಪಟ್ಟಿದ್ದಾರೆಂದು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವವರು ತಿಳಿಸಿದ್ದಾರೆ.

ಆದಾಗ್ಯೂ ಈ ವರದಿಗಳನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲವೆಂದು ತಿಳಿದುಬಂದಿದೆ.

  ಈ ಮಧ್ಯೆ ಡೌಮದಲ್ಲಿ ಸರಕಾರಿ ಪಡೆಗಳು ದಾಳಿಯನ್ನು ನಡೆಸಿದೆಯೆಂಬ ಆರೋಪಗಳು ಕಪೋಲಕಲ್ಪಿತವೆಂದು ಸಿರಿಯ ತಿಳಿಸಿದೆ. ಡೌಮ ಪಟ್ಟಣದಲ್ಲಿ ಬಂಡುಕೋರರು ಪತನದ ಅಂಚಿಗೆ ತಲುಪಿದ್ದಾರೆ. ಹೀಗಾಗಿ ಅವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆಂದು ಅದು ಹೇಳಿದೆ.

ಸಿರಿಯ ಸರಕಾರದ ಪ್ರಮುಖ ಜೊತೆಗಾರನಾದ ರಶ್ಯ ಕೂಡಾ ಡೌಮ ಪಟ್ಟಣದಲ್ಲಿ ರಾಸಾಯನಿಕ ದಾಳಿ ನಡೆಸಲಾಗಿದೆಯೆಂಬ ವರದಿಗಳನ್ನು ಅಲ್ಲಗಳೆದಿದೆ.

 ಅಮೆರಿಕದ ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ ತಾನು ಪರಿಸ್ಥಿತಿಯ ಮೇಲೆ ನಿಗಾವಿರಿಸಿರುವುದಾಗಿ ಹೇಳಿದೆ ಹಾಗೂ ಒಂದು ವೇಳೆ ಡೌಮದಲ್ಲಿ ರಾಸಾಯನಿಕ ವಸ್ತುಗಳು ಬಳಕೆಯಾಗಿದ್ದಲ್ಲಿ ಅದಕ್ಕಾಗಿ ರಶ್ಯವನ್ನು ದೂರಬೇಕಾಗುತ್ತದೆಯೆಂದು ಅದು ಹೇಳಿದೆ. ಕಳೆದ ಫೆಬ್ರವರಿಯಲ್ಲಿ ಬಂಡುಕೋರರ ಭದ್ರಕೋಟೆಯಾಗಿದ್ದ ಪೂರ್ವ ಘೌತ ಪ್ರಾಂತದ ಮೇಲೆ ಸಿರಿಯದ ಸರಕಾರಿ ಪಡೆಗಳು ದಾಳಿಯನ್ನು ಆರಂಭಿಸಿದ್ದು, ಈಗ ಬಹುತೇಕ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ ಹಲವಾರು ದಿನಗಳ ಕದನವಿರಾಮದ ಬಳಿಕ ಸಿರಿಯದ ಸರಕಾರಿ ಪಡೆಗಳು ಶುಕ್ರವಾರ ಮಧ್ಯಾಹ್ನ ದಾಳಿಯನ್ನು ಪುನಾರಂಭಿಸಿದ್ದವು. ಸರಕಾರಿ ಪಡೆಗಳು ಬಳಸಿದ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳಿಂದಾಗಿ 11 ಮಂದಿ ಮೃತಪಟ್ಟಿದ್ದರು. ಇವರ ಪೈಕಿ ಒಟ್ಟು 70 ಮಂದಿ ಉಸಿರಾಟದ ತೊಂದರೆಗಳಿಗೆ ತುತ್ತಾಗಿದ್ದರು.

 ಆದಾಗ್ಯೂ ಸಿರಿಯದ ವಿದ್ಯಮಾನಗಳ ಕಣ್ಗಾವಲು ಸಂಸ್ಥೆೆಯೊಂದರ ನಿರ್ದೇಶಕರಾದ ರಮಿ ಅಬ್ದುಲ್‌ರಹಮಾನ್ ಅವರು,ಡೌಮಾ ಪಟ್ಟಣದ ಮೇಲೆ ನಡೆದ ಆಕ್ರಮಣದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಗಿದೆಯೇ ಎಂಬುದನ್ನು ತನಗೆ ದೃಢಪಡಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.

ಡೌಮ ಪಟ್ಟಣದ ಆಸ್ಪತ್ರೆಯೊಂದಕ್ಕೆ ಕ್ಲೋರಿನ್ ಬಾಂಬ್ ಅಪ್ಪಳಿಸಿ, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆಂದು ಡೌಮದ ವೈದ್ಯಕೀಯ ನೆರವು ಸಂಸ್ಥೆಯಾದ ಸಿರಿಯನ್ ಅಮೆರಿಕನ್ ಮೆಡಿಕಲ್ ಸೊಸೈಟಿ (ಎಸ್‌ಎಂಎಂಎಸ್) ತಿಳಿಸಿದೆ. ಆನಂತರ ನರ್ವ್ ಏಜೆಂಟ್ ಸೇರಿದಂತೆ ಮಿಶ್ರಿತ ರಾಸಾಯನಿಕಗಳನ್ನು ಬಳಸಿ ಎರಡನೆ ದಾಳಿಯನ್ನು ನಡೆಸಲಾಗಿದೆಯೆಂದು ಅದು ಆರೋಪಿಸಿದೆ. ಆಮೆರಿಕದಲ್ಲಿ ಕಾರ್ಯಾಚರಿಸುತ್ತಿರುವ ಎಸ್‌ಎಎಂಎಸ್ ಸಂಸ್ಥೆಯ ಉಪಾಧ್ಯಕ್ಷ ಬಾಸೆಲ್ ತೆರಾಮಾನಿನಿ ಅವರು ಡೌಅದಲ್ಲಿ ನಡೆದ ರಾಸಾಯನಿಕ ದಾಳಿಗಳಲ್ಲಿ ಒಟ್ಟು 35 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಸಿರಿಯದ ಪಡೆಗಳ ರಾಸಾಯನಿಕ ದಾಳಿಯಲ್ಲಿ ಬಲಿಯಾದ ನಾಗರಿಕರ ಸಂಖ್ಯೆ 100ನ್ನು ದಾಟಿದೆಯೆಂದು ಡೌಮದಲ್ಲಿ ಪ್ರಬಲವಾಗಿರುವ ಬಂಡುಕೋರ ಗುಂಪಾದ ಜೈಶೆ ಅಲ್ ಇಸ್ಲಾಮ್ ಡೌಮದಲ್ಲಿ ನಡೆದಿದೆಯನ್ನಲಾದ ರಾಸಾಯನಿಕ ಅಸ್ತ್ರಗಳ ದಾಳಿಯನ್ನು ಅಮೆರಿಕದ ವಿದೇಶಾಂಗ ಇಲಾಖೆ ತೀವ್ರವಾಗಿ ಖಂಡಿಸಿದೆ. ತನ್ನದೇ ಜನರ ವಿರುದ್ಧ ರಾಸಾಯನಿಕ ಅಸ್ತ್ರಗಳನ್ನು ಸಿರಿಯ ಸರಕಾರ ವಿವಾದಾತೀತ ಕುಖ್ಯಾತಿಯನ್ನು ಹೊಂದಿದೆ ಎಂದು ಅದು ಬಣ್ಣಿಸಿದೆ.

 ಡೌಮ ಪಟ್ಟಣದಲ್ಲಿ ಕದನವಿರಾಮವನ್ನು ಏರ್ಪಡಿಸುವ ಬಗ್ಗೆ ಜೈಶೆ ಅಲ್ ಇಸ್ಲಾಮ್ ಗುಂಪು ರಶ್ಯದ ಪಡೆಗಳ ಜೊತೆ ಮಾತುಕತೆಯಲ್ಲಿ ತೊಡಗಿರುವಂತೆಯೇ ನಾಗರಿಕರು ಹಾಗೂ ಬಂಡುಕೋರರು ಸೇರಿದಂತೆ ಸಾವಿರಾರು ಜನರು ಪೂರ್ವ ಘೌತವನ್ನು ತೊರೆಯತೊಡಗಿದ್ದಾರೆ. ಆದಾಗ್ಯೂ ಜೈಶೆ ಇಸ್ಲಾಮ್ ತಾನು ಡೌಮ ಪಟ್ಟಣದಿಂದ ಹಿಂದೆ ಸರಿಯುವುದಿಲ್ಲವೆಂದು ಘೋಷಿಸಿದೆ.

2013ರಲ್ಲಿಯೂ ಘೌತ ಪ್ರದೇಶದ ಬಂಡುಕೋರರ ವಶದಲ್ಲಿರುವ ಪ್ರದೇಶಗಳ ಮೇಲೆ ಸಿರಿಯ ಪಡೆಗಳು ರಾಸಾಯನಿಕ ದಾಳಿ ನಡೆಸಿದ್ದವು.

2017ರಲ್ಲಿ ಎಪ್ರಿಲ್‌ನಲ್ಲಿ , ಸಿರಿಯದ ಸರಕಾರಿ ಪಡೆಗಳು ಬಂಡುಕೋರರ ವಶದಲ್ಲಿರುವ ಪಟ್ಟಣವಾದ ಖಾನ್ ಶೈಖೂನ್‌ನಲ್ಲಿ ಸಾರಿನ್ ಎಂಬ ನರ್ವ್ ಏಜೆಂಟನ್ನು ಬಳಸಿತ್ತೆಂದು ವಿಶ್ವಸಂಸ್ಥೆ ಹಾಗೂ ರಾಸಾಯನಿಕ ಅಸ್ತ್ರಗಳ ನಿಷೇಧಕ್ಕಾಗಿನ ಸಂಸ್ಥೆ ಆರೋಪಿಸಿದ್ದವು.

2014 ಹಾಗೂ 2015ರಲ್ಲಿಯೂ ಸಿರಿಯನ್ ಪಡೆಗಳು ಬಂಡುಕೋರರ ಮೇಲೆ ಕ್ಲೋರಿನ್ ದಾಳಿ ನಡೆಸಿರುವುದನ್ನು ದೃಢಪಡಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X