Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಡುಪಿ: ಮತದಾನಕ್ಕೆ ಬರಲು ಯಾರು...

ಉಡುಪಿ: ಮತದಾನಕ್ಕೆ ಬರಲು ಯಾರು ಕರೆಯುತಿದ್ದಾರೆ ನೋಡಿ.....

ವಾರ್ತಾಭಾರತಿವಾರ್ತಾಭಾರತಿ9 April 2018 9:29 PM IST
share
ಉಡುಪಿ: ಮತದಾನಕ್ಕೆ ಬರಲು ಯಾರು ಕರೆಯುತಿದ್ದಾರೆ ನೋಡಿ.....

ಉಡುಪಿ, ಎ.9: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರನ್ನು ಮತಗಟ್ಟೆಗೆ ಕರೆಯಲು ಜಿಪಂ ಸಿಇಒ ಶಿವಾನಂದ ಕಾಪಶಿ ಅಧ್ಯಕ್ಷತೆಯ ಜಿಲ್ಲಾ ಸ್ಪೀಪ್ ಸಮಿತಿ ಕಂಡುಕೊಂಡ ಸರಳ ಉಪಾಯ ನಮ್ಮ- ನಿಮ್ಮ ನಡುವಿರುವ ಜನಸಾಮಾನ್ಯರು.

ಹೌದು. ಜಿಲ್ಲೆಯ ಜನಸಾಮಾನ್ಯರಲ್ಲಿ ಮತದಾನದ ಕುರಿತಂತೆ ಜಾಗೃತಿ ಮೂಡಿಸಲು, ಅರಿವು ನೀಡಲು ಸ್ವೀಪ್ ಸಮಿತಿ ಇಂದು ಬಿಡುಗಡೆಗೊಳಿಸಿದ ಒಟ್ಟು 17 ಭಿತ್ತಿಪತ್ರಗಳು, ನಮ್ಮ-ನಿಮ್ಮ ಗ್ರಾಮಗಳಲ್ಲಿ ಪ್ರತಿದಿನ ನಿಮ್ಮೆದುರೇ ಇರುವ ವಿವಿಧ ವೃತ್ತಿಯ, ವಿವಿಧ ಸಮಾಜಗಳ ಸಾಮಾನ್ಯರನ್ನೇ ರೂಪದರ್ಶಿ ಗಳನ್ನಾಗಿ ಬಳಸಿಕೊಂಡಿದೆ.

ಸ್ಥಳೀಯ ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ಕಣ್ಣಿಗೆ ಹಿತ ನೀಡುವ ಬಣ್ಣದ ಚಿತ್ರ ಹಾಗೂ ಘೋಷವಾಕ್ಯಗಳನ್ನು ಹೊಂದಿರುವ ಈ ಪೋಸ್ಟರ್ಸ್‌ ಹಾಗೂ ಹೋರ್ಡಿಂಗ್ಸ್ ಡಿಸೈನ್‌ಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಬಿಡುಗಡೆಗೊಳಿಸಿದರು.

ಈ ಪೋಸ್ಟರ್‌ಗಳಲ್ಲಿ ರೈತರು, ಗದ್ದೆ ಕೆಲಸದಲ್ಲಿ ನಿರತರಾದ ಮಹಿಳೆಯರು, ಮೀನುಗಾರ ಮಹಿಳೆ, ಕೊರಗ ದಂಪತಿಗಳು, ಕೂಲಿಕಾರ್ಮಿಕರು, ಹಿರಿಯ ನಾಗರಿಕರು, ಕೈಕಸುಬಿನಲ್ಲಿ ನಿರತರಾದ ಮಹಿಳೆಯರು, ಯುವ ಜನತೆ ರೂಪದರ್ಶಿಗಳಾಗಿದ್ದು, ಎಲ್ಲರೂ ಮೇ 12ರಂದು ಮತದಾನವನ್ನು ತಪ್ಪದೇ ಮಾಡುವಂತೆ ಬೇರೆ ಬೇರೆ ರೀತಿಯಲ್ಲಿ ನೆನಪಿಸುತಿದ್ದಾರೆ.

ಸ್ವೀಪ್ ಸಮಿತಿಯಡಿ ನಿರ್ಮಾಣಗೊಂಡ ಈ ಚಿತ್ರಗಳು ಅತ್ಯಾಕರ್ಷಕವಾಗಿವೆ. ಚಿತ್ರಕ್ಕೆ ಬಳಸಲಾದ ಘೋಷ ವಾಕ್ಯಗಳೂ ಸಹ ಆಯಾ ಪ್ರದೇಶದ ಆಡುಭಾಷೆಯ ಸೊಗಡನ್ನು ಹೊಂದಿವೆ. ತುಳು ಆಡು ಮಾತಿನ, ಕುಂದಾಪ್ರ ಆಡುಬಾಷೆಯ ಸೊಗಡನ್ನು ಕೆಲವು ಘೋಷ ವಾಕ್ಯಗಳು ಒಳಗೊಂಡಿವೆ. ಸ್ವೀಪ್ ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ ಮತ್ತು ಸಮಿತಿಯಲ್ಲಿರುವ ಪಿಡಿಒಗಳಾದ ಮಹೇಶ್ ಹಾಗೂ ಪ್ರಮೀಳಾ ಈ ಪೋಸ್ಟರ್‌ಗಳ ಹಿಂದಿರುವ ರೂವಾರಿಗಳು.

‘ಪ್ರತಿ ಹೆಜ್ಜೆಗೂ ಬೇಕು ಎಚ್ಚರಿಕೆ, ಪ್ರತಿ ಮತವೂ ಮುಖ್ಯ ಬನ್ನಿ ಮತದಾನಕ್ಕೆ’, ‘ಕನಸು, ವಿಕಾಸ, ಸುರಕ್ಷತೆಗಾಗಿ ನಮ್ಮ ಮತದಾನ’, ‘ಸಂತಸದಿ ಮತದಾನಕ್ಕೆ ತಯಾರಾಗಿ’, ‘ಕತ್ತಲಿನಿಂದ ಬೆಳಕಿನೆಡೆಗೆ ಮತದಾನದಿಂದ ಮಂದಹಾಸದೆಡೆಗೆ’, ‘ಎಂಥ ಕೆಲ್ಸಿದ್ರೂ ವೋಟ್ ಹಾಕೂದೊಂದು ಮರೂಕಾಗ’, ‘ಓಟ್ ಪಾಡೆರೆ ಉಂಡು, ಬೇಗ ಪೋಯಿಯೇ?’ ಮುಂತಾದ ಅರ್ಥಗರ್ಭಿತ ಘೋಷವಾಕ್ಯ ಹಾಗೂ ಚಿತ್ರಗಳನ್ನೊಳಗೊಂಡ ಪೋಸ್ಟರ್‌ಗಳು ಮತದಾನದ ಜಾಗೃತಿಯಲ್ಲಿ ಪರಿಣಾಮಕಾರಿಯಾಗಲಿವೆ ಎಂಬ ಬಗ್ಗೆ ಶಿವಾನಂದ ಕಾಪಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಾತ್ರ ನಾವು ಮತದಾನ ಜಾಗೃತಿಗಾಗಿ ಸ್ಥಳೀಯ ಸಂಸ್ಕೃತಿ, ಜನರನ್ನು ಬಳಸಿಕೊಂಡಿದ್ದೇವೆ. ಎಲ್ಲಾ ಪೋಟೊಗಳು ಸ್ವಾಭಾವಿಕವಾಗಿ ಬರುವಂತೆ, ಎಲ್ಲೂ ಕೃತಕೃತತೆ ಎನಿಸದಂತೆ ತುಂಬಾ ಜಾಗೃತೆ ವಹಿಸಿದ್ದೇವೆ. ಎಲ್ಲಾ ಪೋಟೊಗಳನ್ನು ಅವರವರ ಸ್ಥಳಗಳಿಗೇ ಹೋಗಿ, ಎಲ್ಲರೂ ವೃತ್ತಿಯಲ್ಲಿ ನಿರತರಾಗಿದ್ದಾಗಲೇ ತೆಗೆಯಲಾಗಿದೆ. ಹೀಗಾಗಿ ಎಲ್ಲವೂ ಅತ್ಯಂತ ನೈಜವಾಗಿ ಮೂಡಿ ಬಂದಿದೆ ಎಂದು ಕಾಪಶಿ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X