ಬೆಳ್ತಂಗಡಿ: ವಿವಿಧ ಪಕ್ಷಗಳ ಪ್ರಮುಖರ ಸಭೆ

ಬೆಳ್ತಂಗಡಿ, ಎ. 10: ಮೇ 12ರಂದು ನಡೆಯುವ ಚುನಾವಣೆಯ ಅಂಗವಾಗಿ ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಮಂಗಳವಾರ ವಿವಿಧ ಪಕ್ಷಗಳ ಮುಖಂಡರುಗಳ ಸಭೆಯನ್ನು ಚುನಾವಣಾಧಿಕಾರಿ ಎಚ್.ಆರ್.ನಾಯ್ಕ ನಡೆಸಿದರು.
ವಿವಿಧ ಪಕ್ಷಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ನೀತಿ ಸಂಹಿತೆ ಜಾರಿಯಾಗಿದ್ದು ಪಕ್ಷಗಳು ಅನುಸರಿಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರ್ ತಮ್ಮಣ್ಣ ಚಿನ್ನಪ್ಪ ಹಾದಿಮನಿ, ನೋಡೆಲ್ ಅಧಿಕಾರಿ ಸಣ್ಣರಂಗಯ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಅಯ್ಯಣ್ಣನವರ್ ಉಪಸ್ಥಿತರಿದ್ದರು.
Next Story