ಬೈಂದೂರು ಸಿಪಿಎಂ ಚುನಾವಣಾ ಕಛೇರಿ ಉಧ್ಘಾಟನೆ

ಬೈಂದೂರು, ಎ.11: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವ ಸಿಪಿಎಂ ಪಕ್ಷದ ಚುನವಣಾ ಕಛೇರಿಯನ್ನು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಇತ್ತೀಚೆಗೆ ಉಧ್ಘಾಟಿಸಿದರು.
ಬಳಿಕ ಮಾತನಾಡಿದ ಕೆ.ಶಂಕರ್, ಈ ಬಾರಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂ ಸ್ಪರ್ಧಿಸುತ್ತಿದ್ದು ಜನಸಾಮಾನ್ಯರ ಅಭಿವೃದ್ಧಿ, ಕಾರ್ಮಿಕ ವರ್ಗದ ಹಿತ ಬಹಳ ಪ್ರಮುಖವಾಗಿದೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಅಭಿವೃದ್ಧಿ ಹೆಸರಿನಲ್ಲಿ ಕೆಲವೇ ಕೆಲವು ಜನರ ಹಿತ ಕಾಪಾಡುತ್ತಿದೆ. ಬೈಂದೂರು ಕ್ಷೇತ್ರದ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ. ನಿವೇಶನ, ಮರಳು ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲು ಇಲ್ಲಿನ ಶಾಸಕರು ಸೋತಿದ್ದಾರೆ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸಿಪಿಎಂ ಪಕ್ಷಕ್ಕೆ ಅಧಿಕಾರವಿಲ್ಲದಿದ್ದರೂ ಹಲವಾರು ಹೋರಾಟಗಳ ಜನಸಾಮಾನ್ಯರಿಗೆ ಪರಿ ಹಾರ ಒದಗಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಿಪಿಎಂ ಪಕ್ಷದ ಮುಖಂಡ ಕೆ.ಮಹಾಂತೇಶ್, ಅಭ್ಯರ್ಥಿ ಸುರೇಶ್ ಕಲ್ಲಾಗರ ಮಾತನಾಡಿದರು. ಅಧ್ಯಕ್ಷೆಯನ್ನು ದಾಸ ಭಂಡಾರಿ ವಹಿಸಿದ್ದರು. ವೆಂಕಟೇಶ ಕೋಣಿ ಸ್ವಾಗತಿಸಿದರು. ನಾಗರತ್ನ ನಾಡ, ಗಣೇಶ್ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್, ರಮೇಶ್ ಗುಲ್ವಾಡಿ ಮೊದಲಾದವರು ಉಪಸ್ಥಿತರಿದ್ದರು.