ಉಡುಪಿ: ವೈದ್ಯರ ರಾಷ್ಟ್ರೀಯ ‘ಸಿಲ್ವರ್ ಕ್ರಿಕೆಟ್’ ಪಂದ್ಯಾಟ ಉದ್ಘಾಟನೆ
ಕ್ಯಾಲಿಕಟ್ ವಿರುದ್ಧ ದಾವಣಗೆರೆ ಕನ್ನಡಿಗರಿಗೆ ಜಯ

ಉಡುಪಿ, ಎ.11: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲದ ಮಾಹೆ ಡೀಮ್ಡ್ ವಿವಿಯ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ರಾಷ್ಟ್ರೀಯ ವೈದ್ಯರುಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ‘ಸಿಲ್ವರ್ ಕ್ರಿಕೆಟ್ ಲೀಗ್-2018’ ಬುಧವಾರ ಮಣಿಪಾಲದಲ್ಲಿ ಉದ್ಘಾಟನೆಗೊಂಡಿತು.
ಪಂದ್ಯಾಟವನ್ನು ಮಾಹೆ ವಿವಿಯ ಪ್ರೊ ಚಾನ್ಸಲರ್ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣ ಪ್ರಸಾದ್, ಡಾ. ನವೀನ್ ಪಾಟೀಲ್, ಮೆಡಿಲ್ಯಾಬ್ ಸಂಸ್ಥೆಯ ಆಡಳಿತ ನಿರ್ದೇಶಕ ಜ್ಯೋತಿಪ್ರಸಾದ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಮಾಹೆಯ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಸ್ವಾಗತಿಸಿ, ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ವಂದಿಸಿ ದರು.ಡಾ.ಅಜಯ್ ಕಾರ್ಯಕ್ರಮ ನಿರ್ವಹಿಸಿದರು.
ದಾವಣಗೆರೆ ತಂಡಕ್ಕೆ ಜಯ: ದಿನದ ಮೊದಲ ಪಂದ್ಯದಲ್ಲಿ ದಾವಣಗೆರೆ ಬ್ಲೆಂಡೆಡ್ ಕನ್ನಡಿಗಾಸ್ ತಂಡವು ಕೇರಳದ ಕ್ಯಾಲಿಕಟ್ ಹರಿಕೇನ್ ತಂಡದ ವಿರುದ್ಧ 5 ವಿಕೆಟ್ಗಳ ಅಂತರದ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಕ್ಯಾಲಿಕಟ್ ತಂಡ, 20 ಓವರುಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 117 ರನ್ ಗಳಿಸಿದರೆ, ಉತ್ತರವಾಗಿ ಬ್ಲೆಂಡೆಡ್ ಕನ್ನಡಿಗ ತಂಡ ಆದರ್ಶ್ ಅವರ ಅಜೇಯ 57 ರನ್ಗಳ ನೆರವಿನಿಂದ 19.3 ಓವರುಗಳಲ್ಲಿ ಐದು ವಿಕೆಟ್ಗ ಳ ನಷ್ಟಕ್ಕೆ ವಿಜಯಿ ರನ್ ಗಳಿಸಿತು.
ದಿನದ ಮೊದಲ ಪಂದ್ಯದಲ್ಲಿ ದಾವಣಗೆರೆ ಬ್ಲೆಂಡೆಡ್ ಕನ್ನಡಿಗಾಸ್ ತಂಡವು ಕೇರಳದ ಕ್ಯಾಲಿಕಟ್ ಹರಿಕೇನ್ ತಂಡದ ವಿರುದ್ಧ 5 ವಿಕೆಟ್ಗಳ ಅಂತರದ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಕ್ಯಾಲಿಕಟ್ ತಂಡ, 20 ಓವರುಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 117 ರನ್ ಗಳಿಸಿದರೆ, ಉತ್ತರವಾಗಿ ಬ್ಲೆಂಡೆಡ್ ಕನ್ನಡಿಗ ತಂಡ ಆದರ್ಶ್ ಅವರ ಅಜೇಯ 57 ರನ್ಗಳ ನೆರವಿನಿಂದ 19.3 ಓವರುಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ ವಿಜಯಿ ರನ್ ಗಳಿಸಿತು.