Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು: ಅಭಿವೃದ್ಧಿಗೆ ತೊಡಕಾದ ಗುಂಪು...

ಕಾಸರಗೋಡು: ಅಭಿವೃದ್ಧಿಗೆ ತೊಡಕಾದ ಗುಂಪು ಗ್ರಾಪಂಗಳ ಸಮಸ್ಯೆ

ಸಣ್ಣ ಪುಟ್ಟ ಕೆಲಸಕ್ಕೂ ಕಿ.ಮೀ. ಕ್ರಮಿಸುತ್ತಿರುವ ಗ್ರಾಮಸ್ಥರು!

ಸ್ಟೀಫನ್ ಕಯ್ಯರ್ಸ್ಟೀಫನ್ ಕಯ್ಯರ್12 April 2018 12:38 PM IST
share
ಕಾಸರಗೋಡು: ಅಭಿವೃದ್ಧಿಗೆ ತೊಡಕಾದ ಗುಂಪು ಗ್ರಾಪಂಗಳ ಸಮಸ್ಯೆ

► ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ವ್ಯಾಪಕ ಅಸಮಾಧಾನ

ಕಾಸರಗೋಡು, ಎ.11: ಅಭಿ ವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳಲ್ಲಿ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯಲ್ಲಿ ಗುಂಪು ಗ್ರಾಮ ಪಂಚಾಯತ್ (ಹಲವು ಗ್ರಾಮಗಳು ಒಂದು ಗ್ರಾಮ ಪಂಚಾಯತನ್ನು ಹೊಂದಿರುವುದು)ಗಳ ಸಮಸ್ಯೆ ಜಿಲ್ಲೆಯನ್ನು ಇನ್ನಷ್ಟು ಹಿಂದುಳಿಯುವಂತೆ ಮಾಡಿದೆ. ಕಾಸರಗೋಡು ಜಿಲ್ಲೆಯಲ್ಲಿ ದಶಕ ಗಳಿಂದ

ಗ್ರಾಮಗಳು ಹಾಗೂ ಗ್ರಾಪಂಗಳ ವಿಂಗಡಣೆಯಾಗಿಲ್ಲ.ರಾಜ್ಯದಲ್ಲೇ ಅತೀ ಹೆಚ್ಚು ಗುಂಪು ಗ್ರಾಪಂ ಇರುವ ಜಿಲ್ಲೆಯಲ್ಲಿ ಕಾಸರಗೋಡು ಮೊದಲ ಸಾಲಿನಲ್ಲಿದೆ ಎನ್ನಲಾಗಿದೆ. ನಾಲ್ಕು ತಾಲೂಕುಗಳನ್ನು ಹೊಂದಿರುವ ಕಾಸರಗೋಡು ಜಿಲ್ಲೆಯಲ್ಲಿ 127 ಗ್ರಾಮಗಳಿವೆ. ಆದರೆ ಗ್ರಾಪಂಗಳು ಮಾತ್ರ 83 ಇರುವುದು. ಅದರಲ್ಲೂ ಕಾಸರಗೋಡು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯ ಕನ್ನಡ ಭಾಷಾ ಅಲ್ಪಸಂಖ್ಯಾತರು ಇರುವ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನಲ್ಲಿ ಅತ್ಯಧಿಕ ಗುಂಪು ಗ್ರಾಮ ಪಂಚಾಯತ್‌ಗಳಿವೆ.

ಮಂಜೇಶ್ವರ ತಾಲೂಕಿನ ಇಚ್ಲಂಗೋಡು ಗ್ರಾಮ ಪಂಚಾಯತ್‌ಗೆ ಬೇಕೂರು, ಇಚ್ಲಂಗೋಡು, ಹೇರೂರು, ಶಿರಿಯ, ಕುಬಣೂರು ಸೇರಿದಂತೆ ಐದು ಗ್ರಾಮಗಳು ಸೇರಿವೆ. ಮಿಂಜ ಗ್ರಾಪಂಗೆ ಕಳಿಯೂರು, ಕೊಳ್ಯೂರು, ತಲೆಕ್ಕಳ, ಕಡಂ ಬಾರಿಗೆ ಕಡಂಬಾರ್, ಕೂಳೂರು, ಮೂಡಂಬೈಲ್, ಮಜಿಬೈಲ್, ಉಪ್ಪಳಕ್ಕೆ ಕೋಡಿಬೈಲು, ಮಂಗಲ್ಪಾಡಿ, ಹೊಸಬೆಟ್ಟುಗೆ ಬಂಗ್ರ ಮಂಜೇಶ್ವರ, ಬಡಾಜೆ, ಹೊಸಬೆಟ್ಟು ಮೊದಲಾದ ಗ್ರಾಮಗಳು ಸೇರುತ್ತಿವೆ. ಅಲ್ಲದೆ ಮಂಜೇಶ್ವರ ತಾಲೂಕಿನ ಕುಂಜತ್ತೂರು, ಹೊಸಬೆಟ್ಟು, ಕಡಂಬಾರ್, ಮಿಂಜ, ಕೊಡ್ಲ ಮೊಗರು, ವರ್ಕಾಡಿ, ಇಚ್ಲಂಗೋಡು, ಉಪ್ಪಳ, ಪೈವಳಿಕೆ ಕಯ್ಯಿರ್, ಬಂಬ್ರಾಣ, ಕೊಯಿಪಾಡಿ, ಎಡನಾಡು, ಬಾಡೂರು, ಪಡ್ರೆ, ಕಾಸರಗೋಡು ತಾಲೂಕಿನ ಕಾಸರಗೋಡು, ಚೆಂಗಳ, ಪಾಡಿ, ಕೂಡ್ಲು, ಆದೂರು, ಕುಂಬ್ಡಾಜೆ, ತೆಕ್ಕಿಲ್, ಕಳ್ನಾಡ್, ನೆಟ್ಟಣಿಗೆ, ಹೊಸದುರ್ಗ ತಾಲೂಕಿನ ಪಿಲಿಕ್ಕೋಡ್, ಪಳ್ಳಿಕೆರೆ, ಕ್ಲಾಯಿಕ್ಕೋಡ್, ವೆಳ್ಳರಿ ಕುಂಡು ತಾಲೂಕಿನ ಕರಿಂದಲ ಗುಂಪು ಗ್ರಾಪಂಗಳಾಗಿವೆ. ಜಿಲ್ಲೆ ಅಭಿವೃದ್ಧಿಯಲ್ಲಿ ಹಾಗೂ ಮೂಲ ಭೂತ ಸೌಕರ್ಯಗಳಲ್ಲಿ ಹಿಂದುಳಿಯಲು ಇದೂ ಒಂದು ಪ್ರಮುಖ ಕಾರಣವಾಗಿದೆ.ಅಲ್ಲದೆ ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ತಾಳಿರುವ ನಿರ್ಲಕ್ಷದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. 

ಅನುಷ್ಠಾನಕ್ಕೆ ಬಾರದ ಆಯೋಗ ವರದಿ

ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ವರದಿ ನೀಡಲು ನೇಮಿಸಿದ ಡಾ. ಪ್ರಭಾಕರನ್ ಆಯೋಗ ವರದಿಯಲ್ಲೂ ಗುಂಪು ಗ್ರಾಮ ಪಂಚಾಯತ್‌ಗಳ ವಿಭಜನೆಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಅದರಲ್ಲೂ ಮಂಜೇಶ್ವರ, ಕಾಸರಗೋಡು ತಾಲೂಕಿನಲ್ಲಿರುವ 13 ಗ್ರಾಮ ಪಂಚಾಯತ್‌ಗಳನ್ನು ಅತೀ ಶೀಘ್ರದಲ್ಲೇ ವಿಭಜಿಸಬೇಕು ಎಂದು ಆಯೋಗ 2012ರಲ್ಲಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಆರು ವರ್ಷ ಕಳೆದರೂ ಇನ್ನೂ ಈ ಬಗ್ಗೆ ಕ್ರಮ ಸರಕಾರ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಗಳು ಕೂಡಾ ವೌನ ವಹಿಸಿದ್ದಾರೆ.

ಕೆಲಸ ಕಾರ್ಯಗಳಿಗೆ ತೊಂದರೆ

ಹಲವು ಗ್ರಾಮಗಳು ಒಂದೇ ಗ್ರಾಮ ಪಂಚಾಯತ್ ಹೊಂದಿರುವುದರಿಂದ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರು ತಮ್ಮ ಸಣ್ಣ ಪುಟ್ಟ ಕೆಲಸ ಕಾರ್ಯವನ್ನು ಅಥವಾ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಹತ್ತಾರು ಕಿಲೋ ಮೀಟರ್ ಕ್ರಮಿಸಬೇಕಾದ ಪರಿಸ್ಥಿತಿ ಇದೆ. ಅದರಲ್ಲೂ ಕೆಲವು ಗ್ರಾಪಂಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆಯೂ ಇದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

ಕಂದಾಯ ಸಚಿವರ ಜಿಲ್ಲೆಯಲ್ಲೇ ಸಮಸ್ಯೆ

ಜಿಲ್ಲೆಯ ಗುಂಪು ಗ್ರಾಮ ಪಂಚಾಯತ್‌ಗಳನ್ನು ವಿಂಗಡಣೆ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ನಾಗರಿಕರು, ಹಲವು ಸಂಘಟನೆಗಳು ಹೋರಾಟಗಳನ್ನು ಮಾಡುತ್ತಾ ಬಂದಿದೆ. ಆದರೆ ಸರಕಾರ ಮಾತ್ರ ಈ ಬಗ್ಗೆ ವೌನ ತಾಳಿದೆ. ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಯವರೇ ಕಂದಾಯ ಸಚಿವರಾಗಿದ್ದಾರೆ. ಇನ್ನಾದರೂ ಗ್ರಾಮ ಪಂಚಾಯತ್‌ಗಳ ವಿಂಗಡಣೆಗೆ ಮುಹೂರ್ತ ಕೂಡಿ ಬರಲಿದೆಯೇ ಎಂಬ ಕಾತರದಲ್ಲಿ ಜಿಲ್ಲೆಯ ಜನರು ಇದ್ದಾರೆ.

share
ಸ್ಟೀಫನ್ ಕಯ್ಯರ್
ಸ್ಟೀಫನ್ ಕಯ್ಯರ್
Next Story
X