ಬೈಂದೂರು: ದೋಣಿಯಿಂದ ಹೊಳೆಗೆ ಬಿದ್ದು ಮೃತ್ಯು
ಬೈಂದೂರು, ಎ.12: ಬಡಾಕೆರೆ ಗ್ರಾಮದ ಅರೆಹೊಳೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸೌಪರ್ಣಿಕ ನದಿಯಲ್ಲಿ ಎ.11ರಂದು ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ರಾಗಿಹಕ್ಲು ಹೆರಿಕೆರೆ ನಿವಾಸಿ ಮಹಾಬಲ ಪೂಜಾರಿ ಎಂಬವರ ಮಗ ರವೀಂದ್ರ ಪೂಜಾರಿ(40) ಎಂದು ಗುರುತಿಸಲಾಗಿದೆ.
ಇವರು ದೋಣಿ ಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಅಕಸ್ಮಿಕವಾಗಿ ಆಯತಪ್ಪಿಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story