ಮೈಸೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಮೈಸೂರು,ಎ.13: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿದ ಕಳ್ಳರು 160ಗ್ರಾಂ ಚಿನ್ನಾಭರಣ ಕಳವುಗೈದ ಘಟನೆ ವಿದ್ಯಾಶಂಕರ ಬಡಾವಣೆಯಲ್ಲಿ ನಡೆದಿದೆ.
ವಿದ್ಯಾಶಂಕರ ಬಡಾವಣೆಯ ನಿವಾಸಿ ಟಾಮ್ ಜೋಸೆಫ್ ಎಂಬವರು ಏ.8ರಂದು ಕುಟುಂಬ ಸಮೇತ ಕೇರಳಕ್ಕೆ ತೆರಳಿದ್ದರು. ಮನೆಯ ಒಂದು ಕೀಯನ್ನು ಮನೆಗೆಲಸದಾಕೆ ವಿಜಯಾ ಎಂಬವರಿಗೆ ನೀಡಿದ್ದರು. ಗುರುವಾರ ಬೆಳಿಗ್ಗೆ ವಿಜಯಾ ಕೆಲಸಕ್ಕೆಂದು ಮನೆಗೆ ಬರುವಾಗ ಬಾಗಿಲು ಮುರಿದಿತ್ತು. ಈ ವಿಚಾರವನ್ನು ನೆರೆಮನೆಯ ನಿವಾಸಿಗೆ ತಿಳಿಸಿದ್ದು, ಅವರು ಬಂದು ಪರಿಶೀಲಿಸಿದಾಗ ಮನೆಯ ಬೀರು ಬಾಗಿಲು ತೆರೆದಿದ್ದು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story