ತರೀಕೆರೆ: ಹಾವು ಕಚ್ಚಿ ಬಾಲಕ ಮೃತ್ಯು
![ತರೀಕೆರೆ: ಹಾವು ಕಚ್ಚಿ ಬಾಲಕ ಮೃತ್ಯು ತರೀಕೆರೆ: ಹಾವು ಕಚ್ಚಿ ಬಾಲಕ ಮೃತ್ಯು](https://www.varthabharati.in/sites/default/files/images/articles/2018/04/14/dc-Cover-652ovhkibhg82kh6on274ihkn1-20180220010751.Medi_.jpeg)
ತರೀಕೆರೆ, ಎ.14: ತಲೂಕಿನ ಲಿಂಗದಹಳ್ಳಿ ಹೋಬಳಿಯ ತಣಿಗೆಬೈಲು ಗ್ರಾಮದಲ್ಲಿ ಗುರುವಾರ ರಾತ್ರಿ ಹಾವು ಕಡಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಗ್ರಾಮದ ಪುಟ್ಟರಾಮ ಎಂಬವರ ಮಗ ಅನೂಪ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ಅನೂಪ್ ಗುರುವಾರ ರಾತ್ರಿ ತಮ್ಮ ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದ ವೇಳೆ ವಿಷಕಾರಿ ಹಾವು ಕಡಿದಿದೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story