Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕ್ಯೂರಿಯಾಸಿಟಿಯ ಅಂಚಿಗೆ ತರುವ...

ಕ್ಯೂರಿಯಾಸಿಟಿಯ ಅಂಚಿಗೆ ತರುವ 'ಮರ್ಕ್ಯುರಿ'

ಕನ್ನಡ ಸಿನೆಮಾ

ಶಶಿಕರಶಶಿಕರ15 April 2018 12:00 AM IST
share
ಕ್ಯೂರಿಯಾಸಿಟಿಯ ಅಂಚಿಗೆ ತರುವ ಮರ್ಕ್ಯುರಿ

'ಮರ್ಕ್ಯುರಿ' ಎಂದೊಡನೆ ನೆನಪಾಗುವುದು ಪಾದರಸ ಎನ್ನುವ ಕನ್ನಡದ ಅರ್ಥ. ಪಾದರಸ ಎನ್ನುವುದನ್ನು ಚುರುಕು ಎಂಬುವುದಕ್ಕೆ ಪರ್ಯಾಯವಾಗಿ ಬಳಸುತ್ತಾರೆ. ಚಿತ್ರದಲ್ಲಿ ಎರಡು ಅರ್ಥವನ್ನು ಕೂಡ ನೀಡುವ ಪ್ರಯತ್ನ ನಡೆದಿದೆ. ಐದು ಮಂದಿ ಯುವ ಸ್ನೇಹಿತರು ಒಂದು ರಾತ್ರಿ ಪಾರ್ಟಿ ನಡೆಸುತ್ತಾರೆ. ಅವರಲ್ಲಿ ಒಬ್ಬಳು ಹುಡುಗಿ. ಉಳಿದ ನಾಲ್ವರಲ್ಲಿ ಒಬ್ಬಾತ ಆಕೆಯ ಪ್ರಿಯಕರ. ವಿಪರ್ಯಾಸ ಎಂದರೆ ಅಷ್ಟು ಮಂದಿಯೂ ಕಿವಿ ಕೇಳದ, ಮಾತು ಬಾರದ ವ್ಯಕ್ತಿಗಳು. ಇವರೆಲ್ಲ ಆ ರಾತ್ರಿ ಒಂದು ಔಟಿಂಗ್ ಹೋಗುತ್ತಾರೆ. ಆ ಪ್ರಯಾಣ ಒಂದು ಅಪಘಾತಕ್ಕೆ ಕಾರಣವಾಗುತ್ತದೆ. ಅಪಘಾತ ಅಪರಿಚಿತನ ಸಾವಿನೊಂದಿಗೆ ಅವಸಾನವಾಗುತ್ತದೆ. ಆದರೆ ನಿಜಕ್ಕೂ ಆತ ಸಾಯುತ್ತಾನೋ? ಸತ್ತಿಲ್ಲವಾದರೆ ಆತನ ಹೆಣ ಎಲ್ಲಿ ಹೋಗುತ್ತದೆ? ಈ ಐದು ಜನರೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ವ್ಯಕ್ತಿ ಯಾರು ಎನ್ನುವುದನ್ನು ತಿಳಿಯಬೇಕಾದರೆ ನೀವು ಚಿತ್ರ ನೋಡಬೇಕು.

ಮೂಕಚಿತ್ರ ಎಂಬ ಹೆಸರಿನಿಂದ ತೆರೆಕಂಡಿರುವ ಮರ್ಕ್ಯುರಿ ನಿಜದಲ್ಲಿ ನೋಡಿದರೆ ಮೂಕರ ಚಿತ್ರ. ಅದು ವಿಭಿನ್ನತೆ ಹೌದಾದರೂ ಪುಷ್ಪಕ ವಿಮಾನದಂಥ ವಿಶಾಲಾರ್ಥದ ಮೂಕ ಚಿತ್ರದ ನಿರೀಕ್ಷೆ ಇದ್ದವರಿಗೆ ಸೀಮಿತವಾದ ಘಟನೆ ಹೇಳುತ್ತದೆ ಚಿತ್ರ. ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಈಗಾಗಲೇ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರಣ, ಇದು ಮರ್ಕ್ಯುರಿ ಎಫೆಕ್ಟ್ ಮೇಲಿನ ಕತೆ ಎಂದು ಹೇಳಿದಾಗ ಸಹಜವಾಗಿ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಇರಿಸಲಾಗಿತ್ತು. ಆದರೆ ಚಿತ್ರದಲ್ಲಿ ವೈಕಲ್ಯತೆಗೆ ಪಾದರಸ ಕಾರಣ ಎಂಬ ಅಂಶವನ್ನು ಬಲವಂತವಾಗಿ ತುರುಕಿದಂತೆ ಅನಿಸುತ್ತದೆ. ನಿರೀಕ್ಷೆಯಂತೆ ಚಿತ್ರದಲ್ಲಿ ಪ್ರಭುದೇವ್ ಪ್ರಮುಖ ಪಾತ್ರಧಾರಿ. ತೀರ ಸರಳವಾಗಿ ಆರಂಭವಾಗುವ ಕತೆ, ಪ್ರಭುದೇವ್ ಎಂಟ್ರಿಯೊಂದಿಗೆ ಪ್ರೇಕ್ಷಕರು ಮೈಮರೆತು ಚಿತ್ರ ನೋಡುವಂತೆ ಮಾಡುತ್ತದೆ.

ಬಹುಶಃ ಮೂಕ ಸಿನೆಮಾವೊಂದನ್ನು ವೀಕ್ಷಕರೆಲ್ಲರೂ ಮೂಕಪ್ರೇಕ್ಷಕರಂತೆ ಆಸಕ್ತಿಯಿಂದ ನೋಡುವುದು ಇದೇ ಪ್ರಥಮ ಬಾರಿ ಇರಬಹುದು. ಚಿತ್ರದಲ್ಲಿನ ಪಾತ್ರಗಳು ಮಾತನಾಡುವುದಿಲ್ಲ ಎಂಬ ಕಾರಣಕ್ಕಾಗಿ ಮಾತ್ರ ಇದು ಕನ್ನಡದ ಚಿತ್ರವಾಗಿಲ್ಲ. ಪ್ರಭುದೇವ್ ಮೂಲತಃ ಕನ್ನಡಿಗ ಎನ್ನುವ ಅಂಶದ ಜೊತೆಗೆ ಕನ್ನಡದ ಯುವ ನಟ ಶಶಾಂಕ್ ಅವರ ಸಾನಿಧ್ಯವೂ ಚಿತ್ರದಲ್ಲಿದೆ. ಮಾತ್ರವಲ್ಲ, ಚಿತ್ರವನ್ನು ಕನ್ನಡದಲ್ಲೇ ಸೆನ್ಸಾರ್ ಮಾಡಿರುವುದರಿಂದ ಶಾಸನ ವಿಧಿಸಿದ ಎಚ್ಚರಿಕೆಗಳು ಕೂಡ ಕನ್ನಡದಲ್ಲೇ ಇವೆ. ಪ್ರಭುದೇವ್ ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಮತ್ತು ಗ್ರಾಫಿಕ್ ಕೆಲಸಗಳು ಚಿತ್ರದ ಪ್ರಮುಖ ಆಕರ್ಷಣೆ. ನವ ನಾಯಕಿ ಇಂದುಜಾ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನೀಡಿದ ನಟನೆಯನ್ನು ಕೂಡ ಮರೆಯುವಂತಿಲ್ಲ. ಕ್ಲೈಮ್ಯಾಕ್ಸ್ ತನಕ ಆಸಕ್ತಿ ಹುಟ್ಟಿಸುತ್ತಾ ಸಾಗುವ ಚಿತ್ರದ ಅಂತಿಮ ದೃಶ್ಯಗಳು ಮಾತ್ರ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವಂತಿವೆ ಎನ್ನಬಹುದು. ಆದರೆ ಒಂದು ಪ್ರಯೋಗಾತ್ಮಕ ಚಿತ್ರ ಎಂಬ ನಿಟ್ಟಿನಲ್ಲಿ ನಿರ್ದೇಶಕರ ಪ್ರಯತ್ನವನ್ನು ಶ್ಲಾಘಿಸಲೇಬೇಕು.

ತಾರಾಗಣ: ಪ್ರಭುದೇವ್, ರಮ್ಯಾ ನಂಬೀಶನ್
ನಿರ್ದೇಶನ: ಕಾರ್ತಿಕ್ ಸುಬ್ಬರಾಜು
ನಿರ್ಮಾಣ: ಸ್ಟೋನ್ ಬೆಂಚ್ ಬ್ಯಾನರ್

share
ಶಶಿಕರ
ಶಶಿಕರ
Next Story
X