Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪದಕಗಳಿಕೆಯಲ್ಲಿ ಮಹಾರಾಷ್ಟ್ರದ...

ಪದಕಗಳಿಕೆಯಲ್ಲಿ ಮಹಾರಾಷ್ಟ್ರದ ಕ್ರೀಡಾಪಟುಗಳು ಅಗ್ರಸ್ಥಾನ, ಕರ್ನಾಟಕ ದ್ವಿತೀಯ

ಹಿರಿಯ ನಾಗರಿಕರ 38ನೆ ರಾಷ್ಟ್ರೀಯ ಕ್ರೀಡಾಕೂಟ ಅಂತ್ಯ ► ಆ.18-19 ಶ್ರೀಲಂಕಾದಲ್ಲಿ ಏಷ್ಯಾ ಖಂಡದ ಹಿರಿಯ ನಾಗರಿಕ ಕ್ರೀಡಾಕೂಟ

ವಾರ್ತಾಭಾರತಿವಾರ್ತಾಭಾರತಿ15 April 2018 10:01 PM IST
share
ಪದಕಗಳಿಕೆಯಲ್ಲಿ ಮಹಾರಾಷ್ಟ್ರದ ಕ್ರೀಡಾಪಟುಗಳು ಅಗ್ರಸ್ಥಾನ, ಕರ್ನಾಟಕ ದ್ವಿತೀಯ

ಮಂಗಳೂರು, ಎ.15: ಕಳೆದ ನಾಲ್ಕು ದಿನಗಳಿಂದ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಇಂಡಿಯನ್ ಮಾಸ್ಟ್ರರ್ಸ್‌ ಎಸೋಶಿಯೇಶನ್ಸ್ ,ಕರ್ನಾಟಕ ರಾಜ್ಯ ಮತ್ತು ದ.ಕ ಜಿಲ್ಲಾ ಮಟ್ಟದ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡ 38ನೆ ರಾಷ್ಟ್ರೀಯ ಹಿರಿಯ ನಾಗರಿಕರ ಕ್ರೀಡಾಕೂಟ ಇಂದು ಸಂಜೆ ಸಮಾರೋಪ ಗೊಂಡಿತು.

ವಿಜೇತರು ಆಗಸ್ಟ್ 18 ಮತ್ತು 19ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಖಂಡದ ವ್ಯಾಪ್ತಿಯ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ ಎಂದು ಕ್ರೀಡಾ ಕೂಟದ ಸಂಘಟಕರು ತಿಳಿಸಿದ್ದಾರೆ.

ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ ದೇಶದ 18 ರಾಜ್ಯಗಳ ಹಾಗೂ ಅತಿಥಿ ರಾಷ್ಟ್ರ ಶ್ರೀಲಂಕಾದ 47 ಕ್ರೀಡಾ ಪಟುಗಳು ಸೇರಿ 1600 ಕ್ರೀಡಾ ಪಟುಗಳು 357ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದರು.ನಾಲ್ಕನೆ ದಿನವೂ ಮಹಾರಾಷ್ಟ್ರದ ಕ್ರೀಡಾ ಪಟುಗಳು ಪದಕಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದು ಒಟ್ಟು ಪದಕಗಳಿಕೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕರ್ನಾಟಕ, ಕೇರಳ ಹಾಗೂ ಗುಜರಾತ್ ಪ್ರದೇಶದ ಕ್ರೀಡಾಪಟುಗಳು ಪದಕಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಗಳಿಸಿಕೊಂಡಿದ್ದಾರೆ.

ಸಮಾರೋಪ:- ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಪತ್ರ ವಿತರಿಸಿದರು.

ಐಎಂಎ ಅಧ್ಯಕ್ಷ ಅಮರೇಂದ್ರ ರೆಡ್ಡಿ, ಉಪಾಧ್ಯಕ್ಷ ಧರ್ಮಪಾಲ ಶರ್ಮ ಜಿಲ್ಲಾ ಮಾಸ್ಟರ್ಸ್‌ ಎಸೋಶಿಯೇಶನ್ಸ್ ಅಧ್ಯಕ್ಷ ಕೆ.ಎಸ್.ಕೋದಂಡ ರಾಮೇಗೌಡ, ಐಎಂಎ ಮಹಾ ಪ್ರಧಾನ ಕಾರ್ಯದರ್ಶಿ ಜೆರಾಲ್ಡ್ ಡಿ ಸೋಜ, ಶ್ರೀಲಂಕಾದ ತಂಡದ ವ್ಯವಸ್ಥಾಪಕ ಸುಂದರ್ ರಾಜನ್, ಸಂಘಟನಾ ಸಮಿತಿಯ ಅಧ್ಯಕ್ಷ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.

ಕೊನೆಯ ದಿನವು ಮಹಾರಾಷ್ಟ್ರ ಅಗ್ರಸ್ಥಾನದಲ್ಲಿ:- ಕೊನೆಯ ದಿನವಾದ ರವಿವಾರ ನಡೆದ 64 ವಿವಿಧ ಸ್ಪರ್ಧೆಗಳಲ್ಲಿ ಮಹಾರಾಷ್ಟ್ರದ ಕ್ರೀಡಾ ಪಟುಗಳು ಗರಿಷ್ಠ ಸಂಖ್ಯೆಯ ಪದಕಗಳನ್ನು ಪಡೆದು ಕ್ರೀಡಾಕೂಟದಲ್ಲಿ ಅಗ್ರ ಸ್ಥಾನವನ್ನು ಪಡೆದರು.

ನಾಲ್ಕನೆ ದಿನ ವಿವಿಧ ಸ್ಪರ್ಧೆಗಳಲ್ಲಿ ಪದಕ ವಿಜೇತರು:- 55ರ ಮೇಲಿನ ಮಹಿಳೆಯರ ಟ್ರಿಫಲ್ ಜಂಪ್ ವಿಭಾಗದಲ್ಲಿ ಮಹಾರಾಷ್ಟ್ರದ ಒಂದೇ ರಾಜ್ಯದವರಾದ ಸುಶ್ಮಾ,ಕಾಂತಿರಾವ್, ಚಿತ್ರಾನಲ್‌ಬಾಡಿ ಚಿನ್ನ ಬೆಳ್ಳಿ ಕಂಚಿನ ಪದಕ ಗಳಿಸಿದರು.

55ರ ಮೇಲಿನ ಪುರುಷರ 10000ಮೀಟರ್ ಓಟದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಪಾಂಡುರಂಗ ಪಾಟೀಲ್ ಚಿನ್ನ, ಕರ್ನಾಟಕದ ಚಂದ್ರಶೇಖರ್ ಬೆಳ್ಳಿ ಹಾಗೂ ಕರ್ನಾಟಕದ ಅಣ್ಣಪ್ಪ ಕಂಚಿನ ಪದಕ ಗಳಿಸಿದ್ದಾರೆ. 60ವರ್ಷ ಮೇಲಿನ ಪುರುಷರ 10000 ಮೀಟರ್ ಒಟದ ಸ್ಪರ್ಧೆಯಲ್ಲಿ ಕರ್ನಾಟಕದ (ಮಂಗಳೂರಿನ ಸರಿಪಲ್ಲದವರು) ಮಾಧವ ಸರಿಪಲ್ಲ ಚಿನ್ನ, ಮಹಾರಾಷ್ಟ್ರದ ಹರಿಶ್ಚಂದ್ರ ತೋರಾಟ್ ಬೆಳ್ಳಿ ಹಾಗೂ ಕರ್ನಾಟಕದ ಲಕ್ಷ್ಮಣ್ ರಾವ್ ಕಂಚು ಪಡೆದಿದ್ದಾರೆ.

60 ವರ್ಷದ ಮೇಲಿನ ಮಹಿಳೆಯರ ಜ್ಯಾವೆಲಿನ್ ತ್ರೋ ವಿಭಾಗದಲ್ಲಿ ಕರ್ನಾಟಕದ ಕಾಂಚನ ನಾಯಕ್ ಚಿನ್ನ,ಮಹಾರಾಷ್ಟ್ರದ ಚೆಮೆಲಿನಾ ಪ್ರಾನ್ಸಿಸ್ ಬೆಳ್ಳಿ, ಮಹಾರಾಷ್ಟ್ರದ ಮಿತ್ರಾ ಕತ್ವಾರ ಕಂಚಿನ ಪದಕಗಳಿಸಿದ್ದಾರೆ. 65ರ ಮೇಲಿನ ಮಹಿಳೆಯರ ಜ್ಯಾವೆಲಿನ್ ತ್ರೋ ವಿಭಾಗದಲ್ಲಿ ಗುಜರಾತಿನ ಸವಿತಾ ಬೆನ್ ಮನ್ವಾರ ಚಿನ್ನ, ಕರ್ನಾಟಕದ ನಾಗರತ್ನಮ್ಮ ಬೆಳ್ಳಿ, ಗುಜರಾತಿನ ಉಷಾ ಬೆನ್ ಎ.ಗೋಸ್ವಾಮಿ ಕಂಚಿನ ಪದಕಗಳಿಸಿದ್ದಾರೆ.

30 ವರ್ಷದ ಮೇಲಿನ ಪುರುಷರ ಪೋಲ್‌ವಾಲ್ಟ್ ವಿಭಾಗದಲ್ಲಿ ಆಂಧ್ರದ ಡಿ ಗೋಪಿ ಚಿನ್ನ, ಮಹಾರಾಷ್ಟ್ರದ ವಿಷ್ಣು ಪ್ರಸಾದ್ ಬೆಳ್ಳಿ ಹಾಗೂ ಕರ್ನಾಟಕದ ಶರವಣ ಕಂಚಿನ ಪದಕ ಗಳಿಸಿದ್ದಾರೆ. 45ವರ್ಷದ ಮೇಲಿನ ಪುರುಷರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ಮಹಾರಾಷ್ಟ್ರದ ಕ್ರೀಡಾಪಟುಗಳಾದ ಅಮರಶೀಲ ಪವಾರ್ ಚಿನ್ನ,ರಾಮ್ ಜಗದೇ ಬೆಳ್ಳಿ , ಜೋರ್ಜ್ ಕಂಚು ಪಡೆದಿದ್ದಾರೆ.

50 ವರ್ಷದ ಮೇಲಿನ ಮಹಿಳೆಯರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಕರ್ನಾಟಕದ ವಿಜಯ ಕುಮಾರಿ ಚಿನ್ನ, ಶ್ರೀಲಂಕಾದ ಡಿಎಸ್‌ಎಸ್ ಪ್ರೀದರ್ಶಿನಿ ಬೆಳ್ಳಿ, ಮಹಾರಾಷ್ಟ್ರದ ಪುರ್ಣಿಮಾ ರಾಣಿ ಕಂಚಿನ ಪದಕಗಳಿಸಿದ್ದಾರೆ.

30 ವರ್ಷದ ಮೇಲಿನ ಪುರುಷರ ಹ್ಯಾಮರ್ ತ್ರೋ ವಿಭಾಗ ದಲ್ಲಿ ಕೇರಳದ ಜಾಕೋಬ್ ಥೋಮಸ್ ಚಿನ್ನ, ಹರ್ಯಾಣದ ವಿನೋದ್ ಕುಮಾರ್ ಬೆಳ್ಳಿ ಹಾಗೂ ತಮಿಳು ನಾಡಿನ ವರುವೇಶನ್ ಕಂಚಿನ ಪದಕ ಗಳಿಸಿದ್ದಾರೆ. 50ವರ್ಷದ ಮೇಲಿನ ಮಹಿಳೆಯರ ಜ್ಯಾವೆಲಿನ್ ಎಸೆತದಲ್ಲಿ ಶ್ರೀಲಂಕಾದ ಡಿಎಸ್‌ಎಸ್ ಪ್ರೀಯದರ್ಶಿನಿ ಚಿನ್ನ,ಕರ್ನಾಟಕದ ಪದ್ಮಾವತಿ ಬೆಳ್ಳಿ, ಶ್ರೀಲಂಕಾದ ಪದ್ಮ ಶೀಲೆ ಕಂಚು ಗಳಿಸಿದ್ದಾರೆ. 35 ವರ್ಷದ ಮೇಲಿನ ಪುರುಷರ ಹ್ಯಾಮರ್‌ ತ್ರೋ ವಿಭಾಗದಲ್ಲಿ ಹರ್ಯಾಣದ ಪ್ರವಿಣ್ ಕುಮಾರ್ ಚಿನ್ನ,ಮಹಾರಾಷ್ಟ್ರದ ಸಂಜಯ್ ಕುಮಾರ್ ಬೆಳ್ಳಿ, ಮಹಾರಾಷ್ಟ್ರದ ಭೀಮ್ ಸಿಂಗ್ ಶೇಖಾವತ್ ಕಂಚಿನ ಪದದಕಗಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X