Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅನನ್ಯ ಹಾದಿಯ ನಾಗಾಭರಣ ಹೆಜ್ಜೆಗಳು

ಅನನ್ಯ ಹಾದಿಯ ನಾಗಾಭರಣ ಹೆಜ್ಜೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯ-ಕಾರುಣ್ಯ16 April 2018 12:08 AM IST
share
ಅನನ್ಯ ಹಾದಿಯ ನಾಗಾಭರಣ ಹೆಜ್ಜೆಗಳು

ಸಾಧಾರಣವಾಗಿ ಅಧ್ಯಯನಕ್ಕಾಗಿ ಸಿನೆಮಾದಂತಹ ಜನಪ್ರಿಯ ಮಾಧ್ಯಮಗಳನ್ನು ಆಯ್ದುಕೊಳ್ಳುವುದು ಅಪರೂಪ. ಸಿನೆಮಾದಲ್ಲೂ ಗಂಭೀರ ಎಂದಾಗ ಕಲಾತ್ಮಕ ಚಿತ್ರಗಳಿಗೆ ಮತ್ತು ಚಿತ್ರ ನಿರ್ದೇಶಕರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಡಾ. ಎನ್. ಕೆ. ಪದ್ಮನಾಭ ಅವರು ಖ್ಯಾತ ನಿರ್ದೇಶಕ ಟಿ. ಎಸ್. ನಾಗಾಭರಣ ಅವರ ಸಿನೆಮಾಗಳ ಅಧ್ಯಯನವನ್ನು ಮಾಡಿ ಸಂಶೋಧನಾ ಪ್ರಬಂಧವನ್ನು ಹೊರತಂದಿದ್ದಾರೆ. ಜನಪ್ರಿಯ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಸಮನ್ವಯತೆಯನ್ನು ಸಾಸಿದವರು ನಾಗಾಭರಣ. ‘ಅವರ ಅನನ್ಯ ಹಾದಿಯ ಹೆಜ್ಜೆ’ಗಳನ್ನು ಈ ಪ್ರಬಂಧದ ಮೂಲಕ ನಮ್ಮದಾಗಿಸಿಕೊಳ್ಳಬಹುದು. ನಾಗಾಭರಣ ಅವರ ಅಧ್ಯಯನವೆಂದರೆ ಕೇವಲ ಕನ್ನಡ ಚಿತ್ರೋದ್ಯಮ ಮಾತ್ರವಲ್ಲ, ಕಿರು ತೆರೆಯ ಕುರಿತ ಅಧ್ಯಯನವೂ ಹೌದು. ಒಂದು ರೀತಿಯಲ್ಲಿ, ನಾಗಾಭರಣ ಅವರ ಜೊತೆ ಜೊತೆಗೇ ಕನ್ನಡ ಸಿನೆಮಾಗಳ ಪರಂಪರೆ, ಸೂಕ್ಷ್ಮತೆ, ಕಲಾತ್ಮಕತೆ, ಜನಪ್ರಿಯತೆ, ಸಂವೇದನೆಗಳ ಬಗ್ಗೆ ಲೇಖಕರು ಚರ್ಚಿಸುತ್ತಾರೆ. ಈ ಕೃತಿಯಲ್ಲಿ ಒಟ್ಟು 10 ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಸಿನೆಮಾ ಪರಂಪರೆಯನ್ನು ಚರ್ಚಿಸಿದ್ದಾರೆ. ಅದಕ್ಕೆ ಕಲಾತ್ಮಕವಾಗಿ ನಾಗಾಭರಣ ಅವರ ಕೊಡುಗೆಗಳನ್ನು ವಿವರಿಸಿದ್ದಾರೆ. ಎರಡನೆ ಅಧ್ಯಾಯದಲ್ಲಿ ನಾಗಾಭರಣ ಅವರ ಸಿನೆಮಾ ಕರ್ತೃತ್ವ ಶಕ್ತಿ ಮತ್ತು ಸೃಜನಶೀಲ ಸಾಧ್ಯತೆಗಳನ್ನು ಅವಲೋಕಿಸಿದ್ದಾರೆ. ಹಾಗೆಯೇ ನಾಗಾಭರಣ ಅವರು ತಮ್ಮ ಸಿನೆಮಾಗಳಲ್ಲಿ ಎತ್ತಿಕೊಂಡ ಜಾತಿ ಧರ್ಮಸೂಕ್ಷ್ಮತೆಗಳು ಮತ್ತು ವೌಲಿಕ ಆಶಯಗಳನ್ನು ಮೂರನೇ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ಹಾಗೆಯೇ ಆಧುನಿಕತೆ, ಅಭಿವೃದ್ಧಿ ಮತ್ತು ವಿವಿಧ ತಲ್ಲಣಗಳು ಹೇಗೆ ನಾಗಾಭರಣ ಅವರ ಸಿನೆಮಾದಲ್ಲಿ ಕಲಾತ್ಮಕವಾಗಿ ಅಭಿವೃಕ್ತಿಗೊಂಡಿವೆ ಎನ್ನುವುದನ್ನು ಮನಗಾಣಿಸುತ್ತಾರೆ. ನಾಗಾಭರಣ ಅವರದು ಬರೇ ಬೌದ್ಧಿಕ ಹುಡುಕಾಟವಲ್ಲ. ಹೃದಯ ಮತ್ತು ಬುದ್ಧಿಯ ನಡುವೆ ಸಮನ್ವಯತೆಯನ್ನು ನಾವು ಅವರ ಸಿನೆಮಾಗಳಲ್ಲಿ ಕಾಣಬಹುದಾಗಿದೆ. ಆದುದರಿಂದಲೇ ಅವರ ಸಿನೆಮಾಗಳು ಬರೇ ಬುದ್ಧಿವಂತ ಜನರು ನೋಡುವ ಅಪ್ಪಟ ಕಲಾತ್ಮಕ ಚಿತ್ರಗಳಲ್ಲ. ಜನಸಾಮಾನ್ಯರನ್ನೂ ಅವರು ದೃಷ್ಟಿಯಲ್ಲಿಟ್ಟುಕೊಂಡು ಸಿನೆಮಾ ಮಾಡುತ್ತಾರೆ. ಮನರಂಜನೆಯೇ ಅವರ ಗುರಿಯಲ್ಲ. ಹಾಗೆಂದು ರಂಜನೆ ಕಲೆಯ ಒಂದು ಭಾಗ ಎನ್ನುವುದನ್ನು ತಮ್ಮ ಸಿನೆಮಾಗಳಲ್ಲಿ ಅವರು ಮರೆಯುವುದಿಲ್ಲ. ಲೇಖಕರು ಈ ಕೃತಿಯ ಮೂಲಕ ನಾಗಾಭರಣ ಸಿನೆಮಾಗಳು ಧ್ವನಿಸುವ ಒಟ್ಟು ಆಶಯಗಳನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯಕ ಸತ್ವ, ಸಾಮಾಜಿಕ ವಾಸ್ತವ, ಮಾನವೀಯ ಸಂವೇದನೆ, ದೇಸಿ ಸಂಸ್ಕೃತಿಯ ಸೊಗಡು ಮತ್ತು ಅಭಿವ್ಯಕ್ತಿ ವೈಶಿಷ್ಟತೆಯೊಂದಿಗೆ ಗಮನ ಸೆಳೆಯುವ ಅವರ ಚಿತ್ರಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಬಗೆಯನ್ನು ತೆರೆದುಕೊಟ್ಟಿದ್ದಾರೆ. ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು ಹೊರತಂದಿರುವ ಕೃತಿಯ ಪುಟಗಳು 340. ಮುಖಬೆಲೆ 300 ರೂಪಾಯಿ. ಆಸಕ್ತರು 080 23409512 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯ
-ಕಾರುಣ್ಯ
Next Story
X