ಕಥುವಾ ಪ್ರಕರಣ: ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆಯಿಂದ ಪ್ರತಿಭಟನೆ

ಮುಡಿಪು, ಎ.16: ಜಮ್ಮುವಿನ ಕಥುವಾದಲ್ಲಿ ಬಾಲಕಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣವನ್ನು ಖಂಡಿಸಿ ಎಸ್ಸೆಸ್ಸೆಫ್ ಮುದುಂಗಾರುಕಟ್ಟೆ ಶಾಖೆಯ ವತಿಯಿಂದ ಮುದುಂಗಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಯಿತು.
ಜಮಾಅತ್ ಖತೀಬ್ ಹೈದರಲಿ ಹಿಮಮಿ ಮಾತನಾಡಿ ಅಮಾನವೀಯ ಕೃತ್ಯವನ್ನು ಖಂಡಿಸಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸದಸ್ಯ ಜಮಾಲುದ್ದೀನ್ ಸಖಾಫಿ ಸ್ವಾಗತ ಭಾಷಣ ಮಾಡಿದರು.
ಎಂಎಸ್.ಉಮರ್ ಸಅದಿ, ಅಬ್ದುಸ್ಸಮದ್ ಮದನಿ, ಮೂಸಾ ಕಲಿಂ ಮದನಿ, ಅಬ್ದುಲ್ಲ ಸಖಾಫಿ, ಅಹ್ಮದ್ ಕುಂಞಿ ಎಂ.ಕೆ., ಕೆ.ಜಿ.ಎನ್.ಉಮರ್ ಹಾಜಿ, ಸಿ.ಕೆ.ಮುಹಮ್ಮದ್, ಉಮರ್ ಎನ್., ಅಬೂಬಕರ್ ಎಂ.ಬಿ., ಅಬ್ಬಾಸ್ ಎನ್., ಹಸೈನಾರ್ಕೆ., ಹನೀಫ್ ಎಂ.ಪಿ., ಅಬೂಬಕರ್ ಎಂ.ಎಸ್., ಅಬೂಬಕರ್ ಕೆ., ಹಸೈನಾರ್ ಎಂ.ಎಂ., ಯಾಕ್ಹೂಬ್ ಎಂ., ಮುಹಮ್ಮದ್ ಪಿ., ಅಬ್ದುರ್ರಹ್ಮಾನ್ ಕೆ., ಅಶ್ರಫ್ ಜಿ., ನೌಶಾದ್ ಕೆ.ಎ., ಇಕ್ಬಾಲ್ ಡಿ., ಉಸ್ಮಾನ್ ಎಂ.ಎಂ., ಸಿದ್ದೀಕ್ ಎಂ.ಕೆ., ಅಬ್ದುಲ್ ಹಮೀದ್ ಎಂ.ಎಂ., ಅಬೂಬಕರ್ ಎಂ.ಪಿ., ಅಬ್ದುರ್ರಹ್ಮಾನ್ ಎಂ.ಕೆ., ಅಬ್ದುಲ್ ಅಝೀಝ್ ಡಿ., ಕಲಂದರ್ ಕೆ., ಇರ್ಫಾನ್ ಕೆ., ಆಸಿಫ್ ಕೆ., ಸಮೀರ್ ಜಿ., ಶಫೀಕ್ಎಂ. ಉಪಸ್ಥಿತರಿದ್ದರು.
ಕಾರ್ಯದರ್ಶಿ ಇಕ್ಬಾಲ್ ವಂದಿಸಿದರು.