ಕಥುವಾ ಪ್ರಕರಣ : ಎಸ್ಸೆಸ್ಸೆಫ್ ಕಿನ್ಯ ಶಾಖೆ ಪ್ರತಿಭಟನೆ

ಕಿನ್ಯ,ಎ.16: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ನಿರ್ದೇಶನ ಮೇರೆಗೆ, ಇತ್ತೀಚೆಗೆ ಜಮ್ಮುವಿನಲ್ಲಿ 8ರ ಹರೆಯದ ಬಾಲಕಿಯ ಮೇಲಿನ ಅತ್ಯಾಚಾರ, ಹತ್ಯೆಯ ಸಮಗ್ರ ತನಿಖೆ ಹಾಗೂ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ನ ಖುತುಬಿನಗರ, ಬೆಳರಿಂಗೆ, ಕುರಿಯ, ಮೀಂಪ್ರಿ, ಉಕ್ಕುಡ ಶಾಖಾ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮೆಹಬೂಬ್ ಸಖಾಫಿ ಕಿನ್ಯರವರು 'ಭಾರತದಲ್ಲಿ ಹಿಂದೂ, ಮುಸ್ಲಿಂ, ಕೈಸ್ತ ಹಾಗೂ ಇನ್ನಿತರ ಧರ್ಮದ ಜನರು ಪರಸ್ಪರ ಹೊಂದಾಣಿಕೆಯಿಂದ ಬಾಳಿ ಬದುಕಬೇಕಾಗಿದೆ. ಅದೇ ರೀತಿ ಈ ದೇಶದಲ್ಲಿ ಆಡಳಿತ ನಡೆಸುವ ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳು ದೇಶದಲ್ಲಿ ನಡೆಯುವ ಎಲ್ಲಾ ದುಷ್ಕೃತ್ಯದ ಆರೋಪಿಗಳಿಗೆ ಯಾವುದೇ ರೀತಿಯ ಬೆಂಬಲ ನೀಡಬಾರದು. ಬಾಲಕಿಯ ಪ್ರಕರಣವನ್ನು ಎಲ್ಲಾ ಜಾತಿಯ ಜನರು ಒಟ್ಟುಗೂಡಿ ಪ್ರತಿಭಟಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೈಯ್ಯದ್ ಅಲವಿ ತಂಙಳ್, ಇಸ್ಮಾಯಿಲ್ ಸಹದಿ ಕಿನ್ಯ, ಮುಹಮ್ಮದ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಶರೀಫ್ ಸಹದಿ, ಉಸ್ಮಾನ್ ಮುಸ್ಲಿಯಾರ್, ಇಲ್ಯಾಸ್ ಮದನಿ, ಮುಹಮ್ಮದ್ ಉಳ್ಳಾಲ್, ಅಬೂಬಕ್ಕರ್ ಮೀನಾದಿ, ಹಮೀದ್ ಮೀಂಪ್ರಿ, ಮೂಸಕುಂಞ ಬದ್ರಿಯ ನಗರ ಕಿನ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸಿರಾಜ್ ಕಿನ್ಯ, ಸದಸ್ಯರಾದ ಮುಹಮ್ಮದ್ ಕುರಿಯ, ಫಾರೂಕ್ ಬೆಳರಿಂಗೆ, ಹಿರಿಯರಾದ ವಾಮನ ಪೂಜಾರಿ ಕಿನ್ಯ ಹಾಗೂ ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ವ್ಯಾಪ್ತಿಯ ಶಾಖಾ ನಾಯಕರು ಹಾಗೂ ಇತರರು ಭಾಗವಹಿಸಿದ್ದರು.