ಇಸ್ಪೀಟ್ ಜುಗಾರಿ: 11 ಮಂದಿ ಬಂಧನ
ಶಂಕರನಾರಾಯಣ, ಎ.16: ಅಂಪಾರು ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಎ.15ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಅಂಪಾರಿನ ಪೀರು ಸಾಹೇಬ್(58), ರಮೇಶ ಪೂಜಾರಿ(41), ಬಾಬು ಪೂಜಾರಿ(55), ಬೋಜು ನಾಯ್ಕ(62), ನೆಲ್ಲಿಕಟ್ಟೆಯ ವೆಂಕಪ್ಪ ಕುಲಾಲ್ (70) ಎಂಬವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, 1240ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ: ಮಿಯ್ಯರು ಗ್ರಾಮದ ಗ್ಲೋರಿಯಸ್ ಆಯಿಲ್ ಮಿಲ್ ಬಳಿ ಎ.15ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮಿಯ್ಯಿರು ಜೋಡುಕಟ್ಟೆಯ ಯುವರಾಜ(25), ಪ್ರಸನ್ನ(28), ಮಹೇಶ(25), ಆರ್. ಪ್ರಭು(34), ರಂಜಿತ್(23), ದೇವಣ್ಣ(35) ಎಂಬವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ, 3,730ರೂ. ನಗದು ವಶಪಡಿಸಿಕೊಂಡಿದ್ದಾರೆ.
Next Story