ಕೃಷಿ ಸಂಸ್ಕೃತಿ ಮರೆಯಾಗುತ್ತಿರುವುದರಿಂದ ನಾಡಿನ ಪರಿಸರಕ್ಕೆ ಹಾನಿ : ನರೇಂದ್ರ ರೈ ದೇರ್ಲ

ಮಂಗಳೂರು,ಎ.17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಂಸ್ಕೃತಿ,ಭತ್ತದ ಗದ್ದೆಗಳು ಕಣ್ಮರೆಯಾಗುತ್ತಿದೆ ಇದರಿಂದ ಪರಿಸರದ ಮೇಲು ಹೆಚ್ಚಿನ ಹಾನಿಯಾಗುತ್ತಿದೆ ಎಂದು ಸಾಹಿತಿ ಉಪನ್ಯಾಸಕ ನರೇಂದ್ರ ರೈ ದೇರ್ಲ ತಿಳಿಸಿದ್ದಾರೆ.
ನಗರದ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ)ವತಿಯಿಂದ ಕುಡ್ಲಾ ಫೆವಿಲಿಯನ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಬಿಸು ಕೂಟದಲ್ಲಿ ಅವರು ಇಂದು ಬಿಸು ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ತುಳುವರ ಆಚರಣೆಗಳ ಮೂಲಕ ನಮ್ಮ ಮುಂದಿನ ಜನಾಂಗದಲ್ಲಿ ನಿಸರ್ಗದ ಜೊತೆಗಿನ ಒಡನಾಟದ ಬಗೆಗಿನ ಮಹತ್ವವನ್ನು ತಿಳಿಸಬಹುದಾಗಿದೆ ಜಾಗೃತಿಯನ್ನು ಮೂಡಿಸಬುದಾಗಿದೆ ಎಂದು ಸಾಹಿತಿ ಉಪನ್ಯಾಸಕ ನರೇಂದ್ರ ರೈ ದೇರ್ಲ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ನ ಅಧ್ಯಕ್ಷ ಸದಾನಂದ ಶೆಟ್ಟಿ ವಹಿಸಿದ್ದರು.ಬಿಸಿಕಣಿಯನ್ನು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ನ ಆಡಳಿತ ನಿರ್ದೇಶಕಿ ಮೈನಾ ಎ.ಶೆಟ್ಟಿ ಇಡುವ ಮೂಲಕ ಬಿಸು ಆಚರಣೆಗೆ ಚಾಲನೆ ನೀಡಿದರು.
ಟ್ರಸ್ಟ್ ಮೂಲಕ ಪ್ರಕಟಗೊಳ್ಳುತ್ತಿರುವ ಸದಾಶಯ ಪತ್ರಿಕೆಯ ಬಿಸು ಸಂಚಿಕೆಯ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಬಿಡುಗಡೆಗೊಳಿಸಿದರು.ಸಂಘಟನೆಯ ಮೂಲಕ ಸಮುದಾಯ ಸುಪ್ತ ಪ್ರತಿಭೆಗಳ ಶೈಕ್ಷಣಿಕ,ಸಾಂಸ್ಕೃತಿಕ ಹಾಗೂ ಸಮಗ್ರ ಬೆಳವಣಿಗೆಗೆ ಸಂಕುಚಿತ ಮನೋಬಾವವನ್ನು ತೊರೆದು ವೇದಿಕೆಯನ್ನು ಕಲ್ಪಿಸಬೇಕು.ಸಾಂಪ್ರದಾಯಿಕ ಆಚರಣೆಗಳ ಮಹತ್ವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ತುಳು ನಾಡಿನ ಹೊರಗೆ ಇರುವವರಿಗೂ ತಿಳಿಸುವ ಕೆಲಸ ಆಗಬೇಕಾಗಿದೆ. ತುಳುವರಲ್ಲಿ ಅತ್ಯಂತ ಎತ್ತರದ ಸ್ಥಾನವನ್ನು ತಲುಪುವ ಸಾಮರ್ಥ್ಯ ಇರುವವರು ಇದ್ದಾರೆ ಎಂದು ವಸಂತ ಶೆಟ್ಟಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಖ್ಯಾತ ಚಲನ ಚಿತ್ರ ನಿರ್ದೇಶಕ ಗುರುಕಿರಣ್,ಉದ್ಯಮಿ ಲಕ್ಷ್ಮೀಶ ಭಂಡಾರಿ, ಮನಪಾ ಮೇಯರ್ ಭಾಸ್ಕರ್, ಕೆ.ಟ್ರಸ್ಟ್ನ ಪದಾಧಿಕಾರಿಗಳಾದ ದೇವಿ ಚರಣ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ,ವಿಶ್ವ ನಾಥ ಶೆಟ್ಟಿ ತೀರ್ಥಹಳ್ಳಿ,ವಸಂತ ಕುಮಾರ್ ಶೆಟ್ಟಿ,ವಿಜಯ ಲಕ್ಷ್ಮೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಸಂಘಟನಾ ಕಾರ್ಯದರ್ಶಿ ರಾಜ ಗೋಪಾಲ ರೈ ಸ್ವಾಗತಿದರು.ಇದೇ ಸಂದರ್ಭದಲ್ಲಿ ಬಿಸುಕೂಟದ ಕವಿಗೊಷ್ಠಿ ನಡೆಯಿತು.