ಅಂದರ್ ಬಾಹರ್: 10 ಮಂದಿ ಸೆರೆ
ಉಡುಪಿ, ಎ.17: ಉದ್ಯಾವರ ಶಂಭುಕಲ್ಲು ದೇವಸ್ಥಾನದ ಬಳಿ ಮೇಲ್ಪೇಟೆ ಎಂಬಲ್ಲಿ ಎ.16ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊರಂಗ್ರಪಾಡಿಯ ಕೃಷ್ಣ ಗಾಣಿಗ(45), ಸುನಿಲ್ ಸಾಲಿ ಯಾನ್(28), ಮಲ್ಪೆ ಪಡುಕೆರೆಯ ಬಾಲಕೃಷ್ಣ ಸುವರ್ಣ(35), ಶಂಕರ(34), ಮಲ್ಪೆ ಕೊಳದ ಶರೀಫ್(34), ಉದ್ಯಾವರದ ಅಶೋಕ(38), ಶಿವ(24), ಮಾರುತಿ(32), ಅಂಕುದ್ರುವಿನ ಗಂಗಾಧರ ಪೂಜಾರಿ(32), ಬೊಳ್ಜೆಯ ಪ್ರಶಾಂತ್(35) ಎಂದು ಗುರುತಿಸಲಾಗಿದೆ. ಇವರಿಂದ 27,250ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story