ದ.ಕ. ಜಿಲ್ಲೆ: 7 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮಂಗಳೂರು, ಎ.20: ರಾಜ್ಯ ವಿಧಾನ ಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಏಳು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಕೆ. ವಸಂತ ಬಂಗೇರ (ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ (ಜೆಡಿಎಸ್). ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ನಿತಿನ್ ಕುತ್ತಾರ್ (ಸಿಪಿಎಂ), ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ರಾಜೇಶ್ ನಾಕ್ (ಬಿ.ಜೆ.ಪಿ.), ಮುಹಮ್ಮದ್ ರಿಯಾಝ್ (ಎಸ್ಡಿಪಿಐ), ಅಬ್ದುಲ್ ಮಜೀದ್ ಖಾನ್(ಎಸ್ಡಿಪಿಐ), ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಅಂಗಾರ ಎಸ್. (ಬಿ.ಜೆ.ಪಿ) ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
Next Story