ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ
ಸಿಜೆಐ ವಿರುದ್ಧದ ಪದಚ್ಯುತಿ ನೋಟಿಸ್ ತಿರಸ್ಕೃತ
ಹೊಸದಿಲ್ಲಿ, ಎ. 23: ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಸಲ್ಲಿಸಲಾದ ದೋಷಾರೋಪಣೆಯ ನಿಲುವಳಿ ಸೂಚನೆಯನ್ನು ರಾಜ್ಯ ಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿರುವುದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ವೆಂಕಯ್ಯ ನಾಯ್ಡು ಅವರ ಆದೇಶ ದೇಶದ ಕಾನೂನು ವ್ಯವಸ್ಥೆಯನ್ನು ಅಪಾಯದಲ್ಲಿ ಸಿಲುಕಿಸಿದೆ. ಲೋಯಾ ಪ್ರಕರಣದ ತನಿಖೆ ನಡೆಸಲು ಕೇಂದ್ರ ಸರಕಾರಕ್ಕೆ ಉತ್ಸಾಹ ಇಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಎಂದೆಂದೂ ಕಂಡಿರದ, ಕಾನೂನು ಬಾಹಿರ, ಆತುರದ ಆದೇಶ ಇದಾಗಿದೆ. ಪೂರ್ಣ ವಿಚಾರಣೆ ನಡೆಸದೆ ಈ ಆದೇಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಆದೇಶ ಜನರ ಭರವಸೆಯನ್ನು ಛಿದ್ರಗೊಳಿಸಿದೆ ಹಾಗೂ ಕಾನೂನು ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಕಬಿಲ್ ಸಿಬಲ್ ಹೇಳಿದ್ದಾರೆ.
Next Story