Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ

ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ

ವಾರ್ತಾಭಾರತಿವಾರ್ತಾಭಾರತಿ24 April 2018 12:12 AM IST
share
ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ

ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ.
ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತಿದೆ; ಇದ ನಾನೊಲ್ಲೆ.
ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ.
ಎನ್ನ ಬಡತನಕ್ಕೆ ಬೇಡುವಡೆ ಏನೂ ಇಲ್ಲ
ಆತುರವೈರಿ ಮಾರೇಶ್ವರ

                                 -ನಗೆಯ ಮಾರಿತಂದೆ

ನಗೆಯ ಮಾರಿತಂದೆಯ ವಚನಗಳು 12ನೇ ಶತಮಾನದ ಶರಣರ ಚಳವಳಿಯಲ್ಲಿನ ಭವ್ಯತೆ ಮತ್ತು ನ್ಯೂನತೆಗಳಿಗೆ ಕನ್ನಡಿ ಹಿಡಿದಂತಿವೆ. ಯಾವುದೇ ಸಮೂಹ ಚಳವಳಿಯಲ್ಲಿ ಭವ್ಯತೆ ಮತ್ತು ಕೊರತೆಗಳು ಸಹಜವಾಗಿರುತ್ತವೆ.
ನಗೆಯ ಮಾರಿತಂದೆ ನಗಿಸುವ ಕಾಯಕದವ. ಸೂಕ್ಷ್ಮಮತಿಯ ಈ ಬಡ ಬೀದಿಕಲಾವಿದ ಭಾರೀ ಕನಸುಗಳನ್ನು ಹೊತ್ತು ಶರಣರ ಚಳವಳಿಯಲ್ಲಿ ಧುಮುಕಿದವ. ನಗಿಸುತ್ತಲೇ ನೋವಿನ ನೆಲೆಗಳನ್ನು ಗುರುತಿಸುತ್ತ ಸಾಗಿದವ. ಕನಸು ಮತ್ತು ವಾಸ್ತವಗಳ ಮಧ್ಯದ ಅಂತರದಿಂದ ನೊಂದುಕೊಂಡವ. ಕೈಗೆ ಕೊಟ್ಟ ಇಷ್ಟಲಿಂಗವನ್ನು ದೇವರೆಂದು ಪವಿತ್ರಭಾವದಿಂದಲೇ ಕಂಡು ಪೂಜಿಸಿದಾತ. ತನ್ನ ಕಷ್ಟದ ಬದುಕಿನಲ್ಲಿ ಬದಲಾವಣೆಯಾಗುವುದೆಂದು ಭಾವಿಸಿ ಮುಗ್ಧತೆಯಿಂದ ಕಾದವ. ಸುಧಾರಣೆ ಕಂಡುಬರದಿದ್ದಾಗ ಇಷ್ಟಲಿಂಗದ ಮೇಲಿನ ಆತನ ನಂಬಿಕೆ ದಿನಗಳೆದಂತೆ ಕರಗತೊಡಗುತ್ತದೆ. ಕರಸ್ಥಲದಲ್ಲಿ ಕಲ್ಲಾಗಿ ಕಾಣತೊಡಗುತ್ತದೆ. ಆಗ ‘ಇದ ನಾನೊಲ್ಲೆ’ ಎಂದು ನಗೆಯ ಮಾರಿತಂದೆ ಹೇಳುವಲ್ಲಿ ನೋವಿದೆ ಹೊರತಾಗಿ ತಿರಸ್ಕಾರವಿಲ್ಲ. ಇದಕ್ಕೆ ಬಾಯಿಲ್ಲ, ಕಣ್ಣಿಲ್ಲ. ಬಡತನ ನೀಗಿಸುವುದಕ್ಕಾಗಿ ಕೇಳಿದ್ದಕ್ಕೆ ಏನನ್ನೂ ಕೊಡುತ್ತಿಲ್ಲ ಎಂದು ಹತಾಶನಾಗುತ್ತಾನೆ. ಲಿಂಗರಹಸ್ಯವನ್ನು ಅರಿತವರು ಹೇಳಿ ಎಂದು ತೋಡಿಕೊಳ್ಳುತ್ತಾನೆ.
ನಗೆಯ ಮಾರಿತಂದೆಯ ಈ ಹತಾಶ ಭಾವಕ್ಕೆ ಇಷ್ಟಲಿಂಗವು ಬರಿ ನೆಪವಾಗಿದೆ ಎಂಬುದು ಆತನ ಇನ್ನಿತರ ವಚನಗಳಿಂದ ಕಂಡುಬರುವುದು. ವಿಟರು, ಸೂಳೆಯರು, ದಾಸಿಯರು, ಜೂಜುಕೋರರು ಮತ್ತು ಪ್ರಾಣಿಹತ್ಯೆ ಮಾಡುವ ಭಂಡರ ಜೊತೆ ಇರುತ್ತ ಲಿಂಗಾಂಗಸಾಮರಸ್ಯದ ಶರಣರ ವಚನಾನುಭಾವದ ಕುರಿತು ಮಾತನಾಡುವವರ ವಿಚಾರ ಬೇಡ ಎನ್ನುತ್ತಾನೆ. ‘ಗುಂಡ ವೇಶಿ ದಾಸಿ ಜೂಜು ಬೇಂಟೆ ಭಂಡರ ಸಂಸರ್ಗದಲ್ಲಿರುತ್ತ ಮತ್ತೆ ಲಿಂಗಾಂಗಸಂಗ ಶರಣರ ವಚನಾನುಭಾವದ ಸುದ್ದಿಯೇಕೊ’ ಎಂದು ಹೇಳುವಲ್ಲಿ ಆತನ ಮನನೊಂದುದಕ್ಕೆ ಕಾರಣ ತಿಳಿಯುತ್ತದೆ. ಸಮಾನತೆಯ ಭರವಸೆ ನೀಡುವ ತಾಡೋಲೆಯ ಕಟ್ಟುಗಳನ್ನು ಜಂಗಮ ಊರಿಂದೂರಿಗೆ ಎತ್ತಿನ ಮೇಲೆ ಹೇರಿಕೊಂಡು ಹೋಗಿ ಜನರಿಗೆ ಶರಣಸಮಾಜದ ಅರಿವು ಮೂಡಿಸುತ್ತಿದ್ದ. ಕೈಯಲ್ಲಿ ರಕ್ಷಣೆಗಾಗಿ ದೊಣ್ಣೆ ಇರುತ್ತಿತ್ತು. ಈತನ ಸ್ಥಿತಿ ಒಳ್ಳೆಯದಾಗಿತ್ತು. ಈತನ ಮಾತಿನಲ್ಲಿ ಧರ್ಮಶಾಸ್ತ್ರವಿದೆ. ಆದರೆ ಮನದಲ್ಲಿ ಕಾಮವಿಕಾರಗಳಿವೆ. ‘ಸಮತೆಯ ಸಮಾಧಾನ ಹೇಳುವ ಪುಸ್ತಕ ಎತ್ತಿನ ಮೇಲೆ, ಹೊಯಿವ ದೊಣ್ಣೆ ಕೈಯಲ್ಲಿ, ಲೇಸಾಯಿತ್ತು ಈತನಿರವು. ಮಾತಿನಲ್ಲಿ ಆಗಮ, ಮನದಲ್ಲಿ ತೂತಿನ ಕುಡುಕೆಯ ಆಶೆ.’ ಎಂದು ನಗೆಯ ಮಾರಿತಂದೆ ಈ ರೀತಿಯಲ್ಲಿ ಕಂಡ ಜಂಗಮನೊಬ್ಬನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. ಇದು ಸಾರ್ವತ್ರಿಕವಾದುದಲ್ಲ. ಆದರೆ ನಗೆಯ ಮಾರಿತಂದೆ ಕಂಡದ್ದನ್ನು ಕಂಡಹಾಗೇ ಹೇಳಿ ಸತ್ಯವನ್ನು ಮೆರೆದಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X