ಉಡುಪಿ ಜಿಲ್ಲೆ: 4 ನಾಮಪತ್ರಗಳು ತಿರಸ್ಕೃತ, 39 ಮಂದಿ ಕಣದಲ್ಲಿ

ಉಡುಪಿ, ಎ.25: ಮುಂದಿನ ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ್ದ ಒಟ್ಟು 43 ಅಭ್ಯರ್ಥಿಗಳಲ್ಲಿ 4 ಮಂದಿಯ ನಾಮಪತ್ರಗಳು ಇಂದು ಪರಿಶೀಲನೆಯ ವೇಳೆ ತಿರಸ್ಕೃತಗೊಂಡಿವೆ.
118. ಬೈಂದೂರು ಕ್ಷೇತ್ರದಿಂದ ಮದನ್ (ಕಾಂಗ್ರೆಸ್ ಪಕ್ಷ), 119. ಕುಂದಾಪುರ ಕ್ಷೇತ್ರದಿಂದ ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ), 122. ಕಾರ್ಕಳ ಕ್ಷೇತ್ರದಿಂದ ಎಸ್.ಸತೀಶ್ ಸಾಲಿಯಾನ್ (ಬಿಎಸ್ಪಿ) ಹಾಗೂ ಸೈಯದ್ ಆರಿಫ್ (ಪಕ್ಷೇತರ) ಇವರ ನಾಮಪತ್ರಗಳು ತಿರಸ್ಕೃತಗೊಂಡಿವೆ. 120. ಉಡುಪಿ ಹಾಗೂ 121. ಕಾಪು ಕ್ಷೇತ್ರದಲ್ಲಿ ಯಾವುದೇ ನಾಮಪತ್ರಗಳು ತಿರಸ್ಕೃತಗೊಂಡಿಲ್ಲ.
ಇದರಿಂದ ಸದ್ಯ ಒಟ್ಟು 39 ಮಂದಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ- 9, ಕುಂದಾಪುರ-7, ಉಡುಪಿ-10, ಕಾಪು-5 ಹಾಗೂ ಕಾರ್ಕಳ ಕ್ಷೇತ್ರದಲ್ಲಿ- 8 ಮಂದಿ ಸ್ಪರ್ಧಾಕಾಂಕ್ಷಿಗಳಾಗಿ ಉಳಿದುಕೊಂಡಿದ್ದಾರೆ.
ನಾಮಪತ್ರ ಹಿಂದೆಗೆದುಕೊಳ್ಳಲು ಎ.27 ಕೊನೆ ದಿನವಾಗಿದ್ದು, ಅಂದು ಸಂಜೆಯ ವೇಳೆಗೆ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಉಳಿದವರ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.
ಸದ್ಯಕ್ಕೆ ಸ್ಪರ್ಧೆಯಲ್ಲಿ ಉಳಿದವರ ವಿವರ ಹೀಗಿದೆ.
118.ಬೈಂದೂರು: 1.ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್), 2.ಸಿ. ರವೀಂದ್ರ (ಜಾತ್ಯತೀತ ಜನತಾ ದಳ), 3.ಬಿ.ಎಂ.ಸುಕುಮಾರ್ ಶೆಟ್ಟಿ (ಬಿಜೆಪಿ), 4.ಸುರೇಶ್ ಕಲ್ಲಾಗರ (ಸಿಪಿಐ(ಎಂ)), 5.ಅಬ್ದುಲ್ ಮಜೀದ್ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), 6.ಮಂಜುನಾಥ ಕೆ. (ಪಕ್ಷೇತರ), 7.ಮಂಜುನಾಥ ಬಸವ ಮರಕಾಲ (ಪಕ್ಷೇತರ), 8.ಸುಬ್ರಹ್ಮಣ್ಯ ಬಿ.(ಪಕ್ಷೇತರ), 9.ಎಚ್.ಸುರೇಶ್ ಪೂಜಾರಿ (ಪಕ್ಷೇತರ).
119.ಕುಂದಾಪುರ: 1.ತೆಕ್ಕಟ್ಟೆ ಪ್ರಕಾಶ ಶೆಟ್ಟಿ (ಜಾತ್ಯತೀತ ಜನತಾದಳ), 2.ರಾಕೇಶ್ ಮಲ್ಲಿ (ಕಾಂಗ್ರೆಸ್), 3.ಹಾಲಾಡಿ ಶ್ರೀನಿವಾಸ ಶೆಟ್ಟಿ (ಬಿಜೆಪಿ), 4.ರಾಜೀವ್ ಕೋಟ್ಯಾನ್ (ಸಂಯುಕ್ತ ಜನತಾದಳ), 5.ಸುಧಾಕರ ಸೂರ್ಗೊಳಿ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), 6.ರಾಕೇಶ ಮಲ್ಯ (ಪಕ್ಷೇತರ), 7.ವಿಕಾಸ್ ಹೆಗ್ಡೆ (ಪಕ್ಷೇತರ).
120.ಉಡುಪಿ: 1.ಗಂಗಾಧರ ಬಿರ್ತಿ (ಜಾತ್ಯತೀತ ಜನತಾದಳ), 2.ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್), 3.ರಘುಪತಿ ಭಟ್ (ಬಿಜೆಪಿ), 4. ಮಧುಕರ ಮುದ್ರಾಡಿ (ಶಿವಸೇನೆ), 5.ವೈ.ಎಸ್.ವಿಶ್ವನಾಥ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), 6.ಶೇಖರ ಹಾವಂಜೆ (ಭಾರತೀಯ ರಿಪಬ್ಲಿಕನ್ ಪಕ್ಷ), 7.ಮಹೇಶ್ (ಪಕ್ಷೇತರ), 8.ರಮೇಶ ಮರಕಾಲ (ಪಕ್ಷೇತರ), ಲಕ್ಷ್ಮಿವರ ತೀರ್ಥ ಸ್ವಾಮೀಜಿ (ಪಕ್ಷೇತರ), 10. ಸುಧೀರ್ ಕಾಂಚನ್ (ಪಕ್ಷೇತರ).
121.ಕಾಪು: 1.ಮನ್ಸೂರ್ ಇಬ್ರಾಹೀಂ (ಜಾತ್ಯತೀತ ಜನತಾದಳ), 2.ಲಾಲಾಜಿ ಆರ್.ಮೆಂಡನ್ (ಬಿಜೆಪಿ), 3.ವಿನಯಕುಮಾರ್ ಸೊರಕೆ (ಕಾಂಗ್ರೆಸ್), 4.ಅನುಪಮಾ ಶೆಣೈ (ಭಾರತೀಯ ಜನಶಕ್ತಿ ಕಾಂಗ್ರೆಸ್), 5. ಅಬ್ದುರ್ರಹ್ಮಾನ್ (ಆಲ್ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ).
122.ಕಾರ್ಕಳ: 1.ಉದಯಕುಮಾರ್ (ಬಹುಜನ ಸಮಾಜ ಪಾರ್ಟಿ), 2.ಗೋಪಾಲ ಭಂಡಾರಿ (ಕಾಂಗ್ರೆಸ್), 3.ವಿ.ಸುನೀಲ್ ಕುಮಾರ್ (ಬಿಜೆಪಿ), 4.ಮನ್ಸೂದ್ ಅಹ್ಮದ್ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ), 5.ಅಬ್ದುಲ್ ಅಝೀಝ್ (ಪಕ್ಷೇತರ), 6.ಅಶ್ರಫ್ ಅಲಿ (ಪಕ್ಷೇತರ), 7.ಮುಹಮ್ಮದ್ ಶರೀಫ್ (ಪಕ್ಷೇತರ), 8.ಸುಮಂತ ಕೆ. ಪೂಜಾರಿ (ಪಕ್ಷೇತರ).







