Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರೆಸ್ಟೋರೆಂಟ್‌ಗಳು ನಿಮ್ಮನ್ನು ಹೀಗೆ...

ರೆಸ್ಟೋರೆಂಟ್‌ಗಳು ನಿಮ್ಮನ್ನು ಹೀಗೆ ಮೂರ್ಖರನ್ನಾಗಿಸುತ್ತಿವೆ...ಎಚ್ಚರವಿರಲಿ

ವಾರ್ತಾಭಾರತಿವಾರ್ತಾಭಾರತಿ26 April 2018 10:31 PM IST
share
ರೆಸ್ಟೋರೆಂಟ್‌ಗಳು ನಿಮ್ಮನ್ನು ಹೀಗೆ ಮೂರ್ಖರನ್ನಾಗಿಸುತ್ತಿವೆ...ಎಚ್ಚರವಿರಲಿ

ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ವಿಧಿಸುವ ಸರ್ವಿಸ್ ಚಾರ್ಜ್ ಅಥವಾ ಸೇವಾ ಶುಲ್ಕ ಕಡ್ಡಾಯವಲ್ಲ ಮತ್ತು ಗ್ರಾಹಕರು ಅದನ್ನು ಪಾವತಿಸಲು ನಿರಾಕರಿಸಬಹುದು ಅಥವಾ ಭಾಗಶಃ,ತಮಗೆ ಇಷ್ಟ ಬಂದಷ್ಟು ಪಾವತಿಸಬಹುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ವರ್ಷದ ಹಿಂದೆಯೇ ಸ್ಪಷ್ಟಪಡಿಸಿದೆ. ಆದರೆ ಈಗಲೂ ಹಲವಾರು ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್ ಗಳು ಗ್ರಾಹಕರ ಒಪ್ಪಿಗೆ ಪಡೆದುಕೊಳ್ಳದೆ ಬಿಲ್‌ನಲ್ಲಿ ಶೇ.5ರಿಂದ ಶೇ.20ರವರೆಗೂ ಸೇವಾಶುಲ್ಕವನ್ನು ಸೇರಿಸುತ್ತಿವೆ. ಶೇ.36ರಷ್ಟು ಗ್ರಾಹಕರು ಈ ಬಗ್ಗೆ ಅರಿವಿಲ್ಲದೆ ಸೇವಾಶುಲ್ಕವನ್ನು ಪಾವತಿಸುತ್ತಿದ್ದಾರೆ ಮತ್ತು ಕೇವಲ ಶೇ.10ರಷ್ಟು ಗ್ರಾಹಕರು ತಕರಾರು ಎತ್ತಿ ಬಿಲ್‌ನಿಂದ ಸೇವಾಶುಲ್ಕವನ್ನು ಹಿಂದೆಗೆದುಕೊಳ್ಳುವಂತೆ ಮಾಡುತ್ತಾರೆ ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಸೇವಾಶುಲ್ಕದ ಕುರಿತು ಸರಕಾರದ ಹೇಳಿಕೆಯು ಒಂದು ನಿರ್ದೇಶ ವಾಗಿದೆಯೇ ಹೊರತು ಅದು ಕಾನೂನಲ್ಲ,ಹೀಗಾಗಿ ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾಶುಲ್ಕವನ್ನು ಸೇರಿಸುವದು ಸಂಪೂರ್ಣವಾಗಿ ಕಾನೂನು ಬಾಹಿರವೇನಲ್ಲ. ಆದರೆ ನೀವು ಇದರ ವಿರುದ್ಧ ಧ್ವನಿಯೆತ್ತಲು ಮತ್ತು ಬಿಲ್‌ನಿಂದ ಸೇವಾಶುಲ್ಕವನ್ನು ವಜಾಗೊಳಿಸಲು ನಿರ್ಧರಿಸಿದರೆ ರೆಸ್ಟೋರೆಂಟ್‌ಗಳು ನಿರಾಕರಿಸುವಂತಿಲ್ಲ.

ಹೆಚ್ಚಿನ ಪ್ರಕರಣಗಳಲ್ಲಿ ಕೆಲವು ರೆಸ್ಟೋರಂಟ್‌ಗಳು ಸೇವಾಶುಲ್ಕವನ್ನು ವಜಾಗೊಳಿಸುವ ಗ್ರಾಹಕರ ಮನವಿಗಳನ್ನು ನಿರಾಕರಿಸುವ ಉಪಾಯ ವಾಗಿ ‘ಸೇವಾಶುಲ್ಕವನ್ನು ವಿಧಿಸಲಾಗುತ್ತದೆ’ ಎಂದು ಫಲಕವನ್ನು ಪ್ರದರ್ಶಿಸಿರುತ್ತವೆ ಅಥವಾ ಮೆನುಕಾರ್ಡ್‌ನಲ್ಲಿ ಮುದ್ರಿಸಿರುತ್ತವೆ. ಇಂತಹ ಪ್ರಕರಣಗಳಲ್ಲಿ ಸಹ ಗ್ರಾಹಕರು ಸೇವಾಶುಲ್ಕವನ್ನು ಪಾವತಿಸ ದಿರುವ ಹಕ್ಕನ್ನು ಹೊಂದಿರುತ್ತಾರೆ.

ಹೆಚ್ಚಿನ ರೆಸ್ಟೋರೆಂಟ್‌ಗಳು ಈಗಲೂ ಬಿಲ್‌ನಲ್ಲಿ ಸೇವಾಶುಲ್ಕವನ್ನು ಸೇರಿಸುತ್ತವೆ ಮತ್ತು ಅದನ್ನು ಪಾವತಿಸುವಂತೆ ಗ್ರಾಹಕರನ್ನು ಬಲವಂತಗೊಳಿಸುತ್ತವೆ. ಸೇವಾಶುಲ್ಕವನ್ನು ಪಾವತಿಸಲು ನಿರಾಕರಿಸುವವರ ಸಂಖ್ಯೆ ಪ್ರತಿ ತಿಂಗಳೂ ಹೆಚ್ಚುತ್ತಿದೆಯಾದರೂ ಅದು ಈಗಲೂ ತುಂಬ ಕಡಿಮೆಯೇ ಇದೆ. ಸಮೀಕ್ಷೆಗೊಳಪಟ್ಟ 8,013 ಜನರಲ್ಲಿ ಶೇ.36ರಷ್ಟು ಜನರಿಗೆ ಸರ್ವ ಮಾಡಿದ ವ್ಯಕ್ತಿಗೆ ಟಿಪ್ಸ್ ನೀಡಿದ ಬಳಿಕ ಬಿಲ್‌ನಲ್ಲಿಯೂ ತಾವು ಸೇವಾಶುಲ್ಕನ್ನು ಪಾವತಿಸುತ್ತಿದ್ದೇವೆ ಎನ್ನುವುದೇ ಗೊತ್ತಿಲ್ಲ. ಶೇ.27 ರಷ್ಟು ಜನರು ಬಿಲ್‌ನಲ್ಲಿ ಸೇವಾಶುಲ್ಕವನ್ನು ಗಮನಿಸಿಯೂ ಅದನ್ನು ಪಾವತಿಸಿದ್ದಾರೆ.

  ಆರಾಮವಾಗಿ ಕಾಲ ಕಳೆಯುವ ಉದ್ದೇಶದಿಂದ ರೆಸ್ಟೋರೆಂಟ್‌ಗಳಿಗೆ ಕುಟುಂಬ ಸಹಿತ ತೆರಳುವ ಹೆಚ್ಚಿನವರು ಜಗಳ ಮಾಡುವ ಗೋಜಿಗೆ ಹೋಗುವುದಿಲ್ಲ,ಸುಮ್ಮನೆ ಸೇವಾಶುಲ್ಕವನ್ನು ಪಾವತಿಸುತ್ತಾರೆ. ಕೇಂದ್ರ ಸರಕಾರದ ಸ್ಪಷ್ಟ ನಿರ್ದೇಶವಿದ್ದರೂ ಸೇವಾಶುಲ್ಕ ಕುರಿತು ಈಗಲೂ ವಾಗ್ವಾದಗಳು ಉಂಟಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಹೊಸ ಗ್ರಾಹಕ ರಕ್ಷಣಾ ಮಸೂದೆ ಅಂಗೀಕಾರಗೊಂಡ ಬಳಿಕ ಇದಕ್ಕೊಂದು ಬ್ರೇಕ್ ಬೀಳಬಹುದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಸಮೀಕ್ಷೆಯನ್ನು ಕೈಗೊಂಡಿದ್ದ ‘ಲೋಕಲ್ ಸರ್ಕಲ್ಸ್’ನ ಸಚಿನ್ ತಪಾರಿಯಾ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X