Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ30 April 2018 12:01 AM IST
share
ಓ ಮೆಣಸೇ...

ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣಗಳು ಸಾಮಾನ್ಯ -ಸಂತೋಷ್ ಗಂಗ್ವಾರ್, ಕೇಂದ್ರ ಸಚಿವ

ಅತ್ಯಾಚಾರಗಳನ್ನು ಅವಮಾನ ಎಂದು ಸರಕಾರ ಅರಿತುಕೊಳ್ಳುವವರೆಗೆ ಘಟನೆಗಳು ನಡೆಯುತ್ತಲೇ ಇರುತ್ತವೆ.

--------------------

ಕ್ರೈಸ್ತ ಧರ್ಮ ಪ್ರಚಾರ ಮಾಡುವ ಮಿಷನರಿಗಳು ಈ ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿ -ಭರತ್ ಸಿಂಗ್, ಸಂಸದ

ಅವರು ಮಾಡುವ ಸೇವೆಯನ್ನು ನೀವೇ ಯಾಕೆ ಮಾಡಬಾರದು?

---------------------

ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರತಿಭಟನೆಗಳು ಹೆಚ್ಚಿವೆ ಎಂದರೆ ಅದರರ್ಥ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದಲ್ಲವೇ? -ವೀರಪ್ಪ ಮೊಯ್ಲಿ, ಸಂಸದ

ಅದಕ್ಕಾಗಿ ಪ್ರತಿಭಟನೆಗಳನ್ನು ದಿಲ್ಲಿಯಲ್ಲಿ ಕುಳಿತು ಪ್ರಾಯೋಜಿಸಿದ್ದೀರಿ ಎಂದಾಯಿತು.

---------------------

ಬಿಜೆಪಿ ನಾಯಕರು ಅಸಂಬದ್ಧ ಮಾತುಗಳಿಂದ ಮೀಡಿಯಾಕ್ಕೆ ಮಸಾಲೆಯಾಗಬಾರದು - ನರೇಂದ್ರ ಮೋದಿ, ಪ್ರಧಾನಿ

ಕೋಳಿಯನ್ನು ಕೇಳಿ ಮಸಾಲೆ ಅರೆಯುವುದಿಲ್ಲ.

---------------------

ರಾಜ್ಯದಲ್ಲಿ ಸದ್ಯ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ಇದರಲ್ಲಿ ಪಾಂಡವರೇ ಗೆಲ್ಲಲಿದ್ದಾರೆ - ಶ್ರೀರಾಮುಲು, ಸಂಸದ

ಅದಕ್ಕೆ ಮೊದಲು ದ್ರೌಪದಿ ವಸ್ತ್ರಾಪಹರಣ, ವನವಾಸಗಳನ್ನೆಲ್ಲ ಪಾಂಡವರು ಅನುಭವಿಸುವುದಿದೆಯಲ್ಲ?

---------------------

ಜಾಣ ಕುರುಡು, ಜಾಣ ಕಿವುಡಿಗೆ ವಿಶ್ವದಲ್ಲಿ ಎಲ್ಲಿಯೂ ಔಷಧವಿಲ್ಲ - ಸಿಟಿ ರವಿ, ಶಾಸಕ

ಈಗಾಗಲೇ ಔಷಧಿಗಾಗಿ ಹುಡುಕಿ ನಿರಾಶನಾಗಿರುವ ರೋಗಿಯ ಅಳಲು.

---------------------
ಸದ್ಯದಲ್ಲೇ ನಕ್ಸಲ್ ಸಿದ್ಧಾಂತವನ್ನು ದೇಶದಿಂದ ನಿರ್ಮೂಲನ ಮಾಡಲಿದ್ದೇವೆ -ರಾಜನಾಥ್‌ಸಿಂಗ್, ಕೇಂದ್ರ ಸಚಿ

ಆಹಾರ, ಆರೋಗ್ಯ, ಶಿಕ್ಷಣ ಕೇಳಿದವರ ತಲೆಗೆ ನಕ್ಸಲೀಯರ ಹಣೆಪಟ್ಟಿ ಕಟ್ಟುವ ಹುನ್ನಾರವೇ?

---------------------

ಮುಖ್ಯಮಂತ್ರಿ ಆಯ್ಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕರ್ನಾಟಕದ ಹೈಕಮಾಂಡ್ ಸಿದ್ದರಾಮಯ್ಯ ಎನ್ನುವ ಆರೋಪಗಳಿವೆ.

---------------------

ಮುಂದೆ ನಾನು ಕೂಡ ಮುಖ್ಯಮಂತ್ರಿಯಾಗುತ್ತೇನೆ - ಡಿ.ಕೆ. ಶಿವಕುಮಾರ್, ಸಚಿವ

ಯಾವ ಪಕ್ಷದಿಂದ ಎನ್ನುವುದನ್ನು ಹೇಳಿದ್ದರೆ ಚೆನ್ನಾಗಿತ್ತು.

---------------------

ಯಡಿಯೂರಪ್ಪರಿಗೆ ಮಠ, ವೀರಶೈವ, ಲಿಂಗಾಯತ ಬಗ್ಗೆ ಏನೂ ಗೊತ್ತಿಲ್ಲ - ಸಿ.ಎಂ. ಇಬ್ರಾಹೀಂ, ಮಾಜಿ ಸಚಿವ

ಅವೆಲ್ಲ ಓಟಿನ ಖಜಾನೆಗಳು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ.

---------------------

ಭಾರತೀಯರು ಮತ್ತು ಚೀನಿಯರು ಪರಸ್ಪರ ಭಾಷೆ ಕಲಿಯುವುದು ಅಗತ್ಯ - ಸುಶ್ಮ್ಮಾ ಸ್ವರಾಜ್, ಕೇಂದ್ರ ಸಚಿವೆ

ಪರಸ್ಪರ ನಿಂದಿಸಿಕೊಳ್ಳುವುದಕ್ಕಾಗಿಯಾದರೂ.

---------------------

ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ - ತನ್ವೀರ್ ಸೇಠ್, ಸಚಿವ

ಆಸೆ ದುಃಖಕ್ಕೆ ಮೂಲ ಎಂದಿದ್ದಾನೆ ಬುದ್ಧ.

---------------------

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾಲ ಸುಟ್ಟ ಬೆಕ್ಕು - ಪ್ರಹ್ಲಾದ್ ಜೋಷಿ, ಸಂಸದ

ಈ ಬೆಕ್ಕು ಸುಟ್ಟಿರುವುದು ಯಾರ ಬಾಲವನ್ನು ಎನ್ನುವುದನ್ನಾದರೂ ಹೇಳಬಾರದೇ?

---------------------

ಕಾಂಗ್ರೆಸ್ ಸಮುದ್ರ ಇದ್ದಂತೆ. ಈಜಲು ಸಾಧ್ಯವಿಲ್ಲದವರು ಮಾತ್ರ ಇಲ್ಲಿಂದ ಹೊರಹೋಗುತ್ತಾರೆ - ಎಚ್.ಎಂ. ರೇವಣ್ಣ, ಸಚಿವ

ಹೊರಹೋಗುವುದಲ್ಲ, ಸಮುದ್ರದೊಳಗಿರುವ ಶಾರ್ಕ್‌ಗಳ ಹೊಟ್ಟೆಯ ಒಳ ಹೋಗುವುದು.

---------------------

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದಾಗಲೇ ನನ್ನ ಯೋಗ್ಯತೆ ಗೊತ್ತಾಯಿತು - ಅಂಬರೀಷ್, ಮಾಜಿ ಸಚಿವ

ಈಗಲಾದರೂ ಗೊತ್ತಾದದ್ದು ಜನರ ಭಾಗ್ಯ.

---------------------

ನಾನು ಅವಕಾಶವಾದಿ ರಾಜಕಾರಣಿ ಅಲ್ಲ - ದೇವೇಗೌಡ, ಮಾಜಿ ಪ್ರಧಾನಿ

ಬರೇ ಅವಕಾಶವಾದಿ ಅಪ್ಪ ಎಂದು ಕರೆಯೋಣವೇ?

---------------------

ನನಗೆ ಭ್ರಮೆಯೇ ಇಷ್ಟ - ಉಪೇಂದ್ರ, ನಟ
ಭ್ರಮೆ ಹರಿದ ಬಳಿಕದ ಹತಾಶೆಯ ಮಾತು.

---------------------

ಪಾಶ್ಚಾತ್ಯ ಪ್ರೇರಿತ ಆರ್ಥಿಕ ಚಿಂತನೆಗಳು ಭಾರತಕ್ಕೆ ಒಗ್ಗಲಾರದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಮನು ಪ್ರೇರಿತ ಆರ್ಥಿಕ ಚಿಂತನೆಗಳ ಮರು ಅನುಷ್ಠಾನದ ಸಂಚು.

---------------------

ಮಹಿಳೆಯರ ಲೈಂಗಿಕ ದುರ್ಬಳಕೆಗೆ ಸಂಸತ್ ಕೂಡ ಹೊರತಾಗಿಲ್ಲ - ರೇಣುಕಾ ಚೌಧರಿ, ಮಾಜಿ ಕೇಂದ್ರ ಸಚಿವೆ

ರಾಜಕಾರಣವೆಂದರೆ ದುರ್ಬಳಕೆಯ ಇನ್ನೊಂದು ಹೆಸರು.

---------------------

ಟಿಕೆಟ್ ಕೈ ತಪ್ಪಿದಾಗ ಕಾರ್ಯಕರ್ತರು ಆಕ್ರೋಶಗೊಳ್ಳುವುದು ಸಹಜ - ನಳಿನ್ ಕುಮಾರ್ ಕಟೀಲು, ಸಂಸದ

ಜಿಲ್ಲೆಗೆ ಬೆಂಕಿ ಹಚ್ಚಿದಷ್ಟು ಸುಲಭವಲ್ಲ, ಆ ಆಕ್ರೋಶವನ್ನು ತಣಿಸುವುದು.

---------------------

ಝಮೀರ್ ಅಹ್ಮದ್ ಖಾನ್ ಒಬ್ಬ ಅನಾಗರಿಕ. ಆತನ ಮಾತುಗಳಿಗೆ ಉತ್ತರಿಸಿದರೆ ನಾನೂ ಅನಾಗರಿಕನಾಗುತ್ತೇನೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಎಲ್ಲ ಒಂದು ಕಾಲದಲ್ಲಿ ತಮ್ಮ ಬಳಿಕ ಕಲಿತ ಮಾತುಗಳಂತೆ.

---------------------

ಭ್ರಷ್ಟಾಚಾರದಲ್ಲಿ ಯಡಿಯೂರಪ್ಪರಿಗೆ ಗೋಲ್ಡ್ ಮೆಡಲ್, ಸಿ.ಟಿ. ರವಿಗೆ ಸಿಲ್ವರ್ ಮೆಡಲ್ ಸಿಗಬೇಕು - ಜೈರಾಮ್ ರಮೇಶ್, ಕೇಂದ್ರದ ಮಾಜಿ ಸಚಿವ

ನನಗೊಂದು ಕಂಚಿನ ಮೆಡಲ್ ಇರಲಿ ಎಂದರಂತೆ ಈಶ್ವರಪ್ಪ.

---------------------

ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದೇ ಸಂಸದ ಪ್ರಹ್ಲಾದ್ ಜೋಷಿ ಮತ್ತವರ ತಂಡ - ವಿನಯ್ ಕುಲಕರ್ಣಿ, ಸಚಿವ

ಅದಕ್ಕಾಗಿ ಪ್ರಹ್ಲಾದ್ ಜೋಷಿ ತಂಡಕ್ಕೆ ಮತ ಹಾಕೋಣವೇ?

---------------------

ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ. -ಮಾಯಾವತಿ, ಬಿಎಸ್ಪಿ ನಾಯಕಿ

ದಲಿತರ ಹಕ್ಕುಗಳನ್ನು ಜೆಡಿಎಸ್ ಎಲ್ಲಿ, ಹೇಗೆ ರಕ್ಷಿಸಿದೆ ಎನ್ನುವುದನ್ನೂ ವಿವರಿಸಿ..
 

share
ಪಿ.ಎ.ರೈ
ಪಿ.ಎ.ರೈ
Next Story
X