Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹಲಗೆ ಮತ್ತು ಮೆದು ಬೆರಳು: ಮುಚ್ಚಿದ...

ಹಲಗೆ ಮತ್ತು ಮೆದು ಬೆರಳು: ಮುಚ್ಚಿದ ಬಾಗಿಲ ಸಂದಿನಿಂದ....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ3 May 2018 11:59 PM IST
share
ಹಲಗೆ ಮತ್ತು ಮೆದು ಬೆರಳು: ಮುಚ್ಚಿದ ಬಾಗಿಲ ಸಂದಿನಿಂದ....

ಹಿರಿಯ ಕವಿಗಳಿಗೆ ಸಾಮಾಜಿಕ ತಾಣಗಳ ಕುರಿತಂತೆ ಒಂದು ಕೀಳರಿಮೆಯಿದೆ. ಅಥವಾ ಇದೊಂದು ಜನರೇಶನ್ ಗ್ಯಾಪ್ ಕೂಡ ಆಗಿರಬಹುದು. ‘ಫೇಸ್‌ಬುಕ್ ಕವಿಗಳು’ ‘ಫೇಸ್ ಬುಕ್ ಬರಹಗಾರರು’ ಎಂದ ಹಣೆಪಟ್ಟಿಯನ್ನು ತಗಲಿಸಿ ಸಾಮಾಜಿಕ ತಾಣಗಳಿಂದ ತಾವು ದೂರ ಉಳಿದಿರುವುದು ತಮ್ಮ ಹಿರಿಮೆಯೆಂಬಂತೆ ಬಿಂಬಿಸಿಕೊಳ್ಳುತ್ತಾರೆ. ಪತ್ರಿಕೆಗಳಲ್ಲಿ ಬರೆದಿರುವುದಷ್ಟೇ ಪ್ರಸಾದ ಎಂಬಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ. ಇಂದು ಇಂತಹ ಕವಿಗಳ ಪುಸ್ತಕಗಳು ಕನ್ನಡ ನಾಡಿನ ಎರಡು ಸಾವಿರ ಜನರನ್ನು ತಲುಪಿಸಿದರೆ ಅದೇ ದೊಡ್ಡ ಸಾಧನೆ. ಆದರೆ ಇದೇ ಸಂದರ್ಭದಲ್ಲಿ, ಸಾಮಾಜಿಕ ತಾಣಗಳು ಓದುಗರು ಮತ್ತು ಬರಹಗಾರರ ನಡುವಿನ ಪತ್ರಿಕೆ ಎಂಬ ದೊಡ್ಡ ಗೋಡೆಯನ್ನು ಕೆಡವಿ ಹಾಕಿದೆ. ಇಲ್ಲವಾದರೆ ಬರಹಗಾರರು ಪತ್ರಿಕೆಗಳ ದೊಣ್ಣೆನಾಯಕನ ಅಪ್ಪಣೆ ಪಡೆದೇ ಓದುಗರನ್ನು ತಲುಪಬೇಕಾಗಿತ್ತು. ಇಂದು ಸಾಮಾಜಿಕ ತಾಣಗಳ ಮೂಲಕ ಓದುಗರನ್ನು ನೇರವಾಗಿ ತಲುಪುವ ಸ್ವಾತಂತ್ರ ಕವಿಗೆ, ಬರಹಗಾರರಿಗೆ ದೊರಕಿದೆ. ಓದುಗರೇ ಲೇಖಕನನ್ನು ರೂಪಿಸುತ್ತಿದ್ದಾರೆ. ಹೀಗೆ ರೂಪಿಸಿದ ಅತ್ಯುತ್ತಮ ಕವಯತ್ರಿಯರಲ್ಲಿ ಕಾದಂಬಿನಿ ಹೆಸರನ್ನು ಪಟ್ಟಿ ಮಾಡಬಹುದು. ಸಾಮಾಜಿಕ ತಾಣಗಳ ಮೂಲಕ ಹೊರಹೊಮ್ಮಿದ ಕಾದಂಬಿನಿ ಎನ್ನುವ ಕವಯತ್ರಿ, ಹೊಸ ತಲೆಮಾರಿನ ಬಹುಮುಖ್ಯ ಬರಹಗಾರ್ತಿಯಾಗಿದ್ದಾರೆ. ಅವರ ‘ಹಲಗೆ ಮತ್ತು ಮೆದುಬೆರಳು’ ಕೃತಿ ಇದೀಗ ಹೊರ ಬಂದಿದೆ. ‘‘ತಾಯಿಯ ಕುರಿತು ಹೇಳು ಎಂದರು

ಉರಿಯದ ಒಲೆಯ ಮುಂದೆ
ಕೊತಕೊತನೆ ಕುದಿದವಳು ಎಂದೆ’’


ಹೀಗೆ ಧಗ್ಗೆಂದು ಬೆಳಗುವ ಒಲೆಯಂತೆ ಎದೆಯನ್ನು ಆವರಿಸುವ ಸುಮಾರು 200 ಕವಿತೆಗಳು ಇಲ್ಲಿವೆ. ಉದಯೋನ್ಮುಖ ಕವಯತ್ರಿಯೊಬ್ಬರು ಮೊದಲ ಪ್ರಯತ್ನದಲ್ಲೇ ದೊಡ್ಡ ಕೃತಿಯೊಂದನ್ನು ನೀಡಿದ್ದಾರೆ. ಕೃತಿಯನ್ನು ಮೂರು ಭಾಗವಾಗಿಸಿದ್ದಾರೆ. ಮೊದಲನೆ ಭಾಗವನ್ನು ‘ಜ್ವಾಲ ಮಾಲಾ’ ಎಂದು ಕರೆದಿದ್ದರೆ, ಎರಡನೆ ಭಾಗವನ್ನು ‘ಕಿಡಿ ಚುಕ್ಕೆ ಸಾಲು’ ಎಂದು ಗುರುತಿಸಿದ್ದಾರೆ. ಮೂರನೆಯದು ಸುಡುಸುಯ್ಲುಗಳು. ಪ್ರತಿಭಾನಂದ ಕುಮಾರ್ ಬಳಿಕ ಇಷ್ಟು ತೀವ್ರವಾಗಿ ಬರೆದ ಕವಯತ್ರಿ ಬಹುಶಃ ಕಾದಂಬಿನಿಯೇ ಇರಬೇಕು. ಅಶೋಕ್ ಶೆಟ್ಟರ್ ಹೇಳುವಂತೆ, ಕಾದಂಬಿನಿಯ ಕವಿತೆಗಳು ಎಲ್ಲಿದ್ದರೂ ಗುರುತಿಸಬಹುದು. ಅಲ್ಲಿ, ಕಾದಂಬಿನಿಯ ಹೆಸರಿಲ್ಲದೇ ಇದ್ದರೂ. ಮುನ್ನುಡಿಯಲ್ಲಿ ಅವರ ಕಾವ್ಯದ ಕುರಿತಂತೆ ಶಿವಾರೆಡ್ಡಿಯವರು ಹೀಗೆ ಹೇಳಿದ್ದಾರೆ ‘‘ಕಾದಂಬಿನಿ ಅವರ ಕಾವ್ಯದ ಅನನ್ಯತೆ ಎಂದರೆ ಅದರಲ್ಲಿರುವ ಆಲೋಚನೆಯ ಕ್ರಮ. ಅಭಿವ್ಯಕ್ತಿಯ ಭಾಷೆ, ಸ್ಥಳೀಯ ಅನುಭವಗಳ ಚಿತ್ರಣ ಮತ್ತು ಅಂಥ ಅನುಭವಗಳನ್ನು ರೂಪಕವಾಗಿಸುವ ಕ್ರಮ, ಸರಳ, ನೇರ ಭಾಷೆಯನ್ನು ಕಾವ್ಯವಾಗಿಸುವ ಕಲೆ. ಅನೇಕ ಚಳವಳಿಗಳು ಮುಂಚೂಣಿಯಲ್ಲಿರುವ ಸಂದರ್ಭದಲ್ಲಿ ಇವರ ಕಾವ್ಯ ಪ್ರಕಟಗೊಳ್ಳುತ್ತಿದ್ದರೂ, ಯಾವುದೇ ಒಂದು ಚಳವಳಿಯ ಸೆಳೆತಕ್ಕೆ ಸಿಲುಕದೇ ಎಲ್ಲ ಬಗೆಯ ಕ್ರೌರ್ಯಗಳನ್ನು ಸಂಕೀರ್ಣ ನೆಲೆಯಲ್ಲಿ ಅಭಿವ್ಯಕ್ತಿಸುತ್ತಿದ್ದಾರೆ’’ ಗೀತಾಂಜಲಿ ಪುಸ್ತಕ ಪ್ರಕಾಶನ ಶಿವಮೊಗ್ಗ ಈ ಕೃತಿಯನ್ನು ಹೊರತಂದಿದೆ. ಒಟ್ಟು ಪುಟಗಳು 384. ಮುಖಬೆಲೆ 300 ರೂಪಾಯಿ. ಆಸಕ್ತರು 9449886390 ದೂರವಾಣಿಯನ್ನು ಸಂಪರ್ಕಿಸಬಹುದು.
-ಕಾರುಣ್ಯಾ

share
-ಕಾರುಣ್ಯಾ
-ಕಾರುಣ್ಯಾ
Next Story
X