Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎರಡು ತಿಂಗಳಲ್ಲಿ ದೇವಸ್ಥಾನವಾಗಿ ಬದಲಾದ...

ಎರಡು ತಿಂಗಳಲ್ಲಿ ದೇವಸ್ಥಾನವಾಗಿ ಬದಲಾದ ಗೋರಿ!

ಐತಿಹಾಸಿಕ ಕಟ್ಟಡಕ್ಕೆ ಕೇಸರಿ, ಬಿಳಿ ಬಣ್ಣ

ವಾರ್ತಾಭಾರತಿವಾರ್ತಾಭಾರತಿ4 May 2018 10:26 PM IST
share
ಎರಡು ತಿಂಗಳಲ್ಲಿ ದೇವಸ್ಥಾನವಾಗಿ ಬದಲಾದ ಗೋರಿ!

ಹೊಸದಿಲ್ಲಿ,ಮೇ 4: ಕಳೆದ ಮಾರ್ಚ್‌ವರೆಗೂ ಅದು ಅಪರಿಚಿತ ವ್ಯಕ್ತಿಯ ಗೋರಿಯಾಗಿತ್ತು. ನಂತರ ಬಿಳಿ ಮತ್ತು ಕೇಸರಿ ಬಣ್ಣಗಳ ಅಲಂಕರಣದೊಂದಿಗೆ ಶಿವ ಭೋಲಾ ಮಂದಿರವಾಗಿ ರೂಪಾಂತರಗೊಂಡಿದ್ದು,ಒಳಗಡೆ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ.

ದಿಲ್ಲಿಯ ಸಪ್ದರ್‌ಜಂಗ್ ಎನ್‌ಕ್ಲೇವ್‌ನ ಹುಮಾಯೂನಪುರ ಗ್ರಾಮದಲ್ಲಿರುವ ಗುಮ್ಟಿ ಎಂದು ಕರೆಯಲಾಗುವ ಗುಮ್ಮಟ ಸಹಿತ ಗೋರಿಯ ಕಟ್ಟಡದಲ್ಲಾಗಿರುವ ಬದಲಾವಣೆಗಳು ಇತ್ತೀಚಿಗೆ ಬೆಳಕಿಗೆ ಬಂದಿವೆ. ಆದರೆ 2017ರಲ್ಲಿ ತೆಗೆಯಲಾಗಿದ್ದ ಗುಮ್ಟಿಯ ಚಿತ್ರಗಳಲ್ಲಿ ಅದರ ನಾಲ್ಕು ಪ್ರವೇಶ ದ್ವಾರಗಳಲ್ಲಿ ಹಿಂದು ದೇವತೆಗಳ ಟೈಲ್‌ಗಳನ್ನು ಅಳವಡಿಸಲಾಗಿದ್ದು,ಇದು ಕೆಲವು ಸಮಯದಿಂದಲೇ ಬದಲಾವಣೆ ಕಾರ್ಯ ನಡೆಯುತ್ತಿತ್ತು ಎನ್ನುವುದನ್ನು ಸೂಚಿಸುತ್ತಿದೆ.

ಈ ಸ್ಥಳದಲ್ಲಿ ಯಾರನ್ನು ದಫನ್ ಮಾಡಲಾಗಿತ್ತು ಅಥವಾ ಗೋರಿಯನ್ನು ಯಾರು ನಿರ್ಮಿಸಿದ್ದರು ಎನ್ನುವುದು ಖಚಿತವಿಲ್ಲವಾದರೂ,ಅದರ ವಾಸ್ತುಶಿಲ್ಪವು... ಗುಮ್ಮಟದ ಚೂಪಾದ ತುದಿ ಮತ್ತು ಮಿಹ್‌ರಾಬ್‌ನ ಅನುಪಸ್ಥಿತಿ ಅದು ತುಘಲಕ್‌ನ ಆಡಳಿತದ ಕೊನೆಯ ಭಾಗದಲ್ಲಿ ಅಥವಾ ಲೋದಿ ಅರಸೊತ್ತಿಗೆಯ ಆರಂಭದ ದಿನಗಳಲ್ಲಿ ನಿರ್ಮಾಣಗೊಂಡಿರಬಹುದು ಎನ್ನುವುದನ್ನು ಬೆಟ್ಟುಮಾಡುತ್ತಿದೆ.

ದಿಬ್ಬವೊಂದರ ಮೇಲೆ ನಿರ್ಮಾಣಗೊಂಡಿರುವ ಈ ಸರಕಾರಿ ಅಧಿಸೂಚಿತ ಸ್ಮಾರಕದಲ್ಲಿ ಮಾಡಲಾಗಿರುವ ಬದಲಾವಣೆಗಳು ಪುರಾತತ್ವ ಇಲಾಖೆಯ ನಿಯಮಾವಳಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ.

2010ರಲ್ಲಿ ಗುಮ್ಟಿಯನ್ನು 767 ಪರಂಪರಾ ತಾಣಗಳಲ್ಲೊಂದಾಗಿ ಅಧಿಸೂಚಿಸಲಾಗಿತ್ತು ಮತ್ತು ಗ್ರೇಡ್-1 ಪಟ್ಟಿಯಲ್ಲಿ ಸೇರಿಸಲಾಗಿತ್ತು. ನಾಲ್ಕು ವರ್ಷಗಳ ಬಳಿಕ 2014ರಲ್ಲಿ ಪುರಾತತ್ವ ಇಲಾಖೆಯು ಮತ್ತೊಮ್ಮೆ ಅದನ್ನು ಪರಂಪರಾ ತಾಣವೆಂದು ಅಧಿಸೂಚಿಸಿತ್ತು.

ತನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಮತ್ತು ಈ ಬಗ್ಗೆ ವಿಚಾರಣೆ ನಡೆಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸುವುದಾಗಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಷ ಸಿಸೋದಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್(ಇನ್‌ಟ್ಯಾಕ್)ನ ದಿಲ್ಲಿ ಘಟಕ ಮತ್ತು ಪುರಾತತ್ವ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ 15ನೇ ಶತಮಾನದ ಈ ಸ್ಮಾರಕದ ನವೀಕರಣ ಕಾರ್ಯ ಕಳೆದ ವರ್ಷ ನಡೆಯಬೇಕಿತ್ತು. ಆದರೆ ಸ್ಥಳೀಯರ ಪ್ರತಿರೋಧದಿಂದಾಗಿ ವಿಳಂಬವಾಗಿದೆ ಎಂದು ಇನ್‌ಟ್ಯಾಕ್ ದಿಲ್ಲಿಯ ಯೋಜನಾ ನಿರ್ದೇಶಕ ಅಜಯ ಕುಮಾರ ತಿಳಿಸಿದರು. ನಾವು ಪೊಲೀಸರೊಂದಿಗೆ ತೆರಳಿದ್ದೆವಾದರೂ ಯಶಸ್ವಿಯಾಗಿರಲಿಲ್ಲ. ಆ ಸ್ಥಳವೀಗ ದೇವಸ್ಥಾನವಾಗಿದೆ ಮತ್ತು ಸ್ಮಾರಕವೊಂದನ್ನು ನಾವು ಕಳೆದುಕೊಂಡಿದ್ದೇವೆ ಎಂದರು.

ಇದೊಂದು ‘ಭೂ ಕಬಳಿಕೆ ಪ್ರಕರಣ’ ಎಂದು ಹೇಳಿದ ಇನ್‌ಟ್ಯಾಕ್ ದಿಲ್ಲಿಯ ಸಂಚಾಲಕಿ ಸ್ವಪ್ನಾ ಲಿಡ್ಲೆ ಅವರು,ಸರಕಾರವು ಸ್ಮಾರಕವನ್ನು ರಕ್ಷಿಸಿ ನಮಗೆ ಹಸ್ತಾಂತರಿಸಿದರೆ ನಾವು ಅದನ್ನು ಪುನರುಜ್ಜೀವನಗೊಳಿಸುತ್ತೇವೆ ಎಂದರು.

ಕಟ್ಟಡದ ಆವರಣದಲ್ಲಿರುವ ಎರಡು ಕೇಸರಿ ಬಣ್ಣದ ಬೆಂಚುಗಳ ಮೇಲೆ ಸಪ್ದರ್‌ಜಂಗ್ ಎನ್‌ಕ್ಲೇವ್‌ನ ಬಿಜೆಪಿ ಕೌನ್ಸಿಲರ ರಾಧಿಕಾ ಫೋಗಟ್ ಅವರ ಹೆಸರಿದೆಯಾದರೂ ವಿಷಯ ತನಗೆ ಗೊತ್ತಿತ್ತು ಎನ್ನುವುದನ್ನು ಅವರು ನಿರಾಕರಿಸಿದ್ದಾರೆ. ತನಗೆ ಗೊತ್ತಿಲ್ಲದೆ ತನ್ನ ಒಪ್ಪಿಗೆ ಅಥವಾ ಬೆಂಬಲವಿಲ್ಲದೆ ಈ ಕಟ್ಟಡವು ದೇವಸ್ಥಾನವಾಗಿದೆ. ಹಿಂದಿನ ಬಿಜೆಪಿ ಕೌನ್ಸಿಲರ್ ಶಾಮೀಲಾತಿಯೊಂದಿಗೆ ಈ ಕೆಲಸ ನಡೆದಿದೆ. ತಾನು ಅದನ್ನು ಆಕ್ಷೇಪಿಸಿದ್ದೆ. ಆದರೆ ಇದು ಸೂಕ್ಷ್ಮ ವಿಷಯವಾಗಿದೆ. ದೇಶದಲ್ಲಿ ಏನೇ ನಡೆಯುತ್ತಿರಲಿ,ಆದರೆ ದೇವಸ್ಥಾನಕ್ಕೆ ಯಾರೂ ಕೈಹಚ್ಚುವಂತಿಲ್ಲ. ತನ್ನ ಹೆಸರಿರುವ ಬೆಂಚುಗಳು ಮೊದಲು ಸಮೀಪದ ಪಾರ್ಕ್‌ನಲ್ಲಿದ್ದವು ಎಂದು ಅವರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X