Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಟ್ಟೆಯ ಚುಚ್ಚುವ ಉಳಿ

ಅಟ್ಟೆಯ ಚುಚ್ಚುವ ಉಳಿ

ವಾರ್ತಾಭಾರತಿವಾರ್ತಾಭಾರತಿ5 May 2018 12:01 AM IST
share
ಅಟ್ಟೆಯ ಚುಚ್ಚುವ ಉಳಿ

ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ,
ಪ್ರತ್ಯಕ್ಷವಾದ ಪರಮೇಶ್ವರನ ಕಂಡು,
ಇತ್ತಲೇಕಯ್ಯ, ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು.
ನೀ ಹೊತ್ತ ಬಹುರೂಪದಿ ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು,
ನಿನ್ನ ಭಕ್ತರ ಮುಕ್ತಿಯ ಮಾಡು.
 ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದಕು.

                                                          -ಮಾದಾರ ಧೂಳಯ್ಯ
ಪಾದರಕ್ಷೆ ಹೊಲಿಯುವ ಕಾಯಕದಲ್ಲಿ ತಲ್ಲೀನನಾಗಿ ವಚನ ರಚನೆ ಮಾಡಿದಾತ ಮಾದಾರ ಧೂಳಯ್ಯ. ದೇವರು ಒಬ್ಬನೇ. ಆತ ಸಕಲ ಚರಾಚರಗಳಲ್ಲಿ ಇರುವ ಹಾಗೆ ನಮ್ಮಳಗೂ ಇದ್ದಾನೆ. ಅವನನ್ನು ಕಾಯಕ ದಾಸೋಹದ ಮೂಲಕ ನಮ್ಮಾಳಗೇ ಕಂಡುಕೊಳ್ಳಬೇಕು ಎಂಬುದು ಆತನ ದೃಢನಿರ್ಧಾರವಾಗಿದೆ. ನಮ್ಮಾಳಗಿನ ದೇವರೇ ನಿಜವಾದ ದೇವರು. ಉಳಿದ ದೇವರುಗಳು ಮುಕ್ತಿ ಹೊಂದಿ ಸ್ವರ್ಗ ಸೇರುವ ಆಸೆಯುಳ್ಳ ಭಕ್ತರ ದೇವರುಗಳು. ಶರಣ ಸಂಕುಲದಲ್ಲಿನ ಭಕ್ತರು ಸ್ವರ್ಗ, ನರಕಗಳನ್ನು ನಂಬುವುದಿಲ್ಲ. ಕೈಲಾಸ ಎಂಬುದು ಕಲ್ಲುಗುಡ್ಡ ಎಂದು ಬಸವಣ್ಣನವರು ಹೇಳಿದರೆ, ಅಲ್ಲಿರುವ ಚಂದ್ರಶೇಖರ ಹೆಡ್ಡ ಎಂದು ಸಿದ್ಧರಾಮ ತಿಳಿಸಿದ್ದಾರೆ. ಹೀಗೆ ಶರಣರು ಹೊರಗಿನ ದೇವರುಗಳನ್ನು ತಿರಸ್ಕರಿಸಿ ಒಳಗಿನ ದೇವರನ್ನು ಆರಾಧಿಸಿದ್ದಾರೆ. ಮಾದಾರ ಧೂಳಯ್ಯನ ಉದ್ದೇಶ ಕೂಡ ಇದೇ ಆಗಿತ್ತು.
 ಪಾದರಕ್ಷೆಯ ಅಟ್ಟೆಯನ್ನು ಚುಚ್ಚುವ ಉಳಿಯ ತುದಿಯಲ್ಲಿ ಕೈಲಾಸವೆಂಬ ರಜತಗಿರಿಯ ಪರಮೇಶ್ವರ ಪ್ರತ್ಯಕ್ಷವಾದುದನ್ನು ಮಾದಾರ ಧೂಳಯ್ಯ ಕಾಣುತ್ತಾನೆ. ಇಂಥ ಕಾಣುವ ದೇವರುಗಳ ಅವಶ್ಯಕತೆ ತಮಗಿಲ್ಲ ಎನ್ನುವ ರೀತಿಯಲ್ಲಿ ‘‘ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವವನ ಮುಂದೆ?’’ ಎಂದು ಕೇಳುತ್ತಾನೆ. (ಕಾಯವನ್ನು ‘ಚರ್ಮದ ತಿದಿ’ ಎಂದು ಕರೆಯುವಲ್ಲಿ ಆತನ ಕಲ್ಪನಾಶಕ್ತಿಯನ್ನು ಅರಿತುಕೊಳ್ಳಬಹುದು. ಉಸಿರಾಡುವ ಜೀವಿಗಳ ಶರೀರವೆಂಬುದೊಂದು ಕಮ್ಮಾರನ ತಿದಿ ಇದ್ದ ಹಾಗೆಯೆ.) ಇಂಥ ಶರೀರವನ್ನು ಹೊತ್ತು ತಿರುಗುತ್ತ ಹೊಟ್ಟೆಹೊರೆಯುವ ತನ್ನ ಮುಂದೆ ಬಂದ ಕಾರಣವೇನೆಂದು ಮಾದಾರ ಧೂಳಯ್ಯ ದೇವರನ್ನು ಪ್ರಶ್ನಿಸುವುದರ ಮೂಲಕ ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮೇಯ ಶೂನ್ಯದೇವನಲ್ಲಿ ನಿಷ್ಠೆ ವ್ಯಕ್ತಪಡಿಸಿದ್ದಾನೆ. ‘ನಿನ್ನ ಆಸೆಬುರುಕ ಭಕ್ತರಿರುವ ಕಡೆ ಹೋಗಿ ಮುಕ್ತಿಯನ್ನು ದಯಪಾಲಿಸು ಎಂದು ವ್ಯಂಗ್ಯವಾಡಿದ್ದಾನೆ. ಬಹುರೂಪಗಾರನಾದ ನೀನು ಕೈಲಾಸಕ್ಕೆ ಹೋಗಿ ಭಕ್ತರು ಮುಕ್ತರಾಗುವಂತೆ ಮಾಡು’ ಎಂದು ಹೇಳುತ್ತ, ‘ನನ್ನೊಳಗೆ ನಿರಾಕಾರ ದೇವನಾದ ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದಕು’ ಎಂದು ಹೊರಗಿನ ದೇವರನ್ನು ಮೂದಲಿಸಿದ್ದಾನೆ.
 ‘‘ಸತ್ಯಶುದ್ಧಕಾಯಕವ ಮಾಡಿ ತಂದು, ವಂಚನೆಯಿಲ್ಲದೆ ಪ್ರಪಂಚಳಿದು, ನಿಚ್ಚಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪಕಾಮಧೂಮ ಧೂಳೇಶ್ವರ.’’ ಎಂದು ಇನ್ನೊಂದು ವಚನದಲ್ಲಿ ನಿಜವಾದ ದೇವರು ಕಾಯಕ-ದಾಸೋಹಿಗಳ ಒಳಗೇ ಇರುವುದಾಗಿ ತಿಳಿಸಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X