Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪ್ರೀತಿಯನ್ನು ಉಸಿರಾಡುವ ‘ಜಟಾಯು ಪಕ್ಷಿ’

ಪ್ರೀತಿಯನ್ನು ಉಸಿರಾಡುವ ‘ಜಟಾಯು ಪಕ್ಷಿ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ10 May 2018 11:54 PM IST
share
ಪ್ರೀತಿಯನ್ನು ಉಸಿರಾಡುವ ‘ಜಟಾಯು ಪಕ್ಷಿ’

ಪ್ರೀತಿ ಅರಳಿದ ಮೇಲೆ
ಅರಳಲು ಇನ್ನೇನೂ ಬಾಕಿಯಿರುವುದಿಲ್ಲ
ಹೂವಿನ ಜೀವಿತೋದ್ದೇಶ ಈಡೇರಿದ ಮೇಲೆ
ಅರಳುವ ಮುನ್ನ ಮೊಗ್ಗು
ದಳದಳ ಮುಚ್ಚಿಕೊಂಡು
ಸಂಭ್ರಮವೋ ಸಂಕೋಚವೋ
ಯಾವುದನ್ನೂ ಬಾಯ್ಬಿಡದೆ
ಒಳಗೊಳಗೆ ಧ್ಯಾನಸ್ಥಲೀಯ....

ಇಂತಹ ಪರಿಮಳದ ಸಾಲುಗಳ ಮೂಲಕ ಕವಯಿತ್ರಿಯಾಗಿ ಈಗಾಗಲೇ ಗುರುತಿಸಿಕೊಂಡವರು ಜ್ಯೋತಿ ಗುರುಪ್ರಸಾದ್. ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’ ಅವರ 2017ರ ಮುದ್ದಣ ಕಾವ್ಯ ಪುರಸ್ಕೃತ ಕವನಸಂಕಲನ. ಒಟ್ಟು 103 ಕವಿತೆಗಳನ್ನು ಹೊಂದಿರುವ ಈ ಕಾವ್ಯ ಕೃತಿಗೆ ಜ್ಯೋತಿ ಗುರುಪ್ರಸಾದರು ತಮ್ಮ ಪ್ರತಿಭೆಗಳನ್ನೆಲ್ಲ ಧಾರೆಯೆರೆದಿದ್ದಾರೆ. ಅವರ ಕವಿತೆಗಳ ಪ್ರತಿ ಸಾಲುಗಳೂ ಪ್ರೀತಿಯನ್ನು ತುಂಬಿಕೊಂಡಿವೆ. ವರ್ತಮಾನದ ಕ್ರೌರ್ಯಗಳನ್ನು ನೋಡುತ್ತಾ, ಅದಕ್ಕೆ ಸಿನಿಕರಾಗಿ ಪ್ರತಿಕ್ರಿಯಿಸದೆ ಆಶಾಭಾವದಿಂದ ಅವರು ಬರೆಯುತ್ತಾರೆ. ಆದುದರಿಂದಲೇ ಪ್ರಿತಿಯ ಇಟ್ಟಿಗೆಗಳಿಂದ ಹೊಸ ನಾಡನ್ನು ಕಟ್ಟುವ ತುಡಿದ ಅವರ ಪ್ರತಿ ಕವಿತೆಗಳಲ್ಲಿವೆ.

‘ಕತ್ತಲೆಯ ತಪ್ತ ಹೃದಯವನ್ನು

ಸಂತೈಸಲು ಇರುವ ಏಕೈಕ

ಪ್ರಾಣ ದೀಪದಂತೆ
ಈ ದೀಪಾವಳಿಯ ಬೆಳಕು....’ ದೀಪಾವಳಿ ಪದ್ಯದಲ್ಲಿ ಕತ್ತಲು-ಬೆಳಕಿನ ನಡುವಿನ ಸಂಬಂಧವನ್ನು ಕವಯಿತ್ರಿ ಕಟ್ಟಿಕೊಡುತ್ತಾರೆ.
ಪದ್ಯದ ಸಾಂಗತ್ಯವನ್ನು ವಿವರಿಸುವ ‘ಪದ್ಯ’, ಒದ್ದೆ ಭಾಷೆಯಲ್ಲಿ ಮಾತನಾಡುವ, ಶುದ್ಧವಾಗುವ ‘ಕಣ್ಣಂಚಿನ ನೀರು’, ಜೋಡಿ ಹಕ್ಕಿಗಳು ಜೊತೆಯಾಗಿರಲಿ ಎಂದು ಹಾರೈಸುವ ‘ಪುರಾಣದ ನೆನಪು’, ಜಟಾಯುವಿನ ಮೂಲಕ ರಾಮನನ್ನು ನೋಡುವ ‘ಜಟಾಯು ಪಕ್ಷಿಗೆ ಶ್ರದ್ಧಾಂಜಲಿ’, ಮಗುವಿನ ಮುಗ್ಧತೆಯ ಅಗಾಧತೆಯನ್ನು ಹೇಳುವ ‘ಜ್ಞಾನ ಚಂದ್ರ’ ಬದುಕಿನ ಹತ್ತು ಹಲವು ಮುಖಗಳಿಗೆ ಮುಖಾಮುಖಿಯಾಗುವ ಹೃದ್ಯ ಕವಿತೆಗಳಿವೆ. ಬದುಕನ್ನು ಇನ್ನೂ ಗಾಢವಾಗಿ ಅಪ್ಪಿಕೊಳ್ಳಲು ಏಕೈಕ ದಾರಿ ಎಂದರೆ ಪ್ರೀತಿಯನ್ನು ಕೊಡುವುದು ಮತ್ತು ಪಡೆಯುವುದು ಎನ್ನುವುದನ್ನು ಇಲ್ಲಿರುವ ಎಲ್ಲ ಕವಿತೆಗಳು ಸಾರಿ ಸಾರಿ ಹೇಳುತ್ತದೆ.
ಸೃಷ್ಟಿ ಬೆಂಗಳೂರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 208. ಮುಖಬೆಲೆ 160 ರೂ.

 

share
-ಕಾರುಣ್ಯಾ
-ಕಾರುಣ್ಯಾ
Next Story
X