Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದ.ಕ.: ಪ್ರಜಾಪ್ರಭುತ್ವ ಹಬ್ಬಕ್ಕೆ...

ದ.ಕ.: ಪ್ರಜಾಪ್ರಭುತ್ವ ಹಬ್ಬಕ್ಕೆ ಸಿದ್ಧಗೊಂಡಿದೆ ವೇದಿಕೆ

ಹಕ್ಕು ಚಲಾಯಿಸಲು ಆರಂಭವಾಗಿದೆ ಕ್ಷಣಗಣನೆ

ವಾರ್ತಾಭಾರತಿವಾರ್ತಾಭಾರತಿ11 May 2018 12:43 PM IST
share
ದ.ಕ.: ಪ್ರಜಾಪ್ರಭುತ್ವ ಹಬ್ಬಕ್ಕೆ ಸಿದ್ಧಗೊಂಡಿದೆ ವೇದಿಕೆ

ಮಂಗಳೂರು, ಮೇ 11: ಐದು ವರ್ಷಗಳಿಗೊಮ್ಮೆ ಪ್ರಜೆಗಳಿಗೆ ತಮ್ಮ ಜನಸೇವಕರನ್ನು ಆಯ್ಕೆ ಮಾಡಲು ಅವಕಾಶ ನೀಡುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಹಬ್ಬವಾಗಿ ಆಚರಿಸಲಾಗುತ್ತಿದೆ. ಇದೀಗ ಮೇ 12ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕ್ನಡ ಜಿಲ್ಲೆಯಲ್ಲೂ ವೇದಿಕೆ ಸಜ್ಜಾಗಿದೆ.

ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದ್ದು, ಮತದಾರರು ನಿರಾತಂಕವಾಗಿ ಮತ ಚಲಾಯಿಸಲು ಅಗತ್ಯವಾದ ಭದ್ರತಾ ವ್ಯವಸ್ಥೆಗಳನ್ನು ಒದಗಿಸಿರುವ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಖಾತ್ರಿ ಪಡಿಸಿದೆ.

ಕಳೆದ ಸುಮಾರು ಒಂದು ತಿಂಗಳಿನಿಂದೀಚೆಗೆ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರ ಮನೆ ಮನೆ ಭೇಟಿ, ಬಹಿರಂಗ ಪ್ರಚಾರ ಮೂಲಕ ತಮ್ಮ ಪಕ್ಷಗಳ ಅಭ್ಯರ್ಥಿಗಳ ಮತ ಪ್ರಚಾರವನ್ನು ಕೈಗೊಂಡಿದ್ದು, ಇದೀಗ ಮತದಾರನ ಅಂತಿಮ ನಿರ್ಧಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆಯೂ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಕೊನೆಯ ಸುತ್ತಿನ ಪ್ರಯತ್ನವಾಗಿ ತಮ್ಮ ಕ್ಷೇತ್ರದ ಮನೆಗಳಿಗೆ ಭೇಟಿ ನೀಡಿ ಮತದಾರರನ್ನು ಮನವೊಲಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.

ದ.ಕ.: 17,11,848 ಮತದಾರರಿಂದ 58 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17,11,848 ಮತದಾರರು ಅಂತಿಮವಾಗಿ ಕಣದಲ್ಲಿರುವ 58 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಶನಿವಾರ ಮತದಾನದ ಮೂಲಕ ನಿರ್ಧರಿಸಲಿದ್ದಾರೆ. 

8 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ - ವಿಧಾನಸಭಾ ಕ್ಷೇತ್ರ ಮತದಾರರ ಸಂಖ್ಯೆ 
                    

  ಕ್ಷೇತ್ರ   ಗಂಡಸರು   ಹೆಂಗಸರು   ಇತರೆ  ಒಟ್ಟು
ಬೆಳ್ತಂಗಡಿ 109372 109507   1 218880
ಮೂಡುಬಿದಿರೆ  96733 103299  13 200045
ಮಂಗಳೂರು ಉತ್ತರ 114694   120124   8  234826
ಮಂಗಳೂರು ದಕ್ಷಿಣ  115017  124984  56   240057
ಮಂಗಳೂರು 96186 99536  13  195735
ಬಂಟ್ವಾಳ    109537   112192   6   221735
ಪುತ್ತೂರು 100619 101262   3  201884
ಸುಳ್ಯ   98915 99771    0  198686
ಒಟ್ಟು 841073 870675  100  1711848


ಕ್ಷೇತ್ರಗಳ ಅಂತಿಮ ಅಭ್ಯರ್ಥಿಗಳು
ಬೆಳ್ತಂಗಡಿ ಕ್ಷೇತ್ರ (6 ಅಭ್ಯರ್ಥಿಗಳು)
ಕೆ. ವಸಂತ ಬಂಗೇರ(ಕಾಂಗ್ರೆಸ್),
ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್),
ಹರೀಶ್ ಪೂಂಜಾ (ಬಿ.ಜೆ.ಪಿ),
ವೆಂಕಟೇಶ್ ಬೆಂಡೆ (ಪಕ್ಷೇತರ),
ಜಗನ್ನಾಥ(ಎಂಇಪಿ),
ಸೈಯದ್ ಹಸನ್(ಪಕ್ಷೇತರ)

ಮೂಡಬಿದ್ರೆಕ್ಷೇತ್ರ (7 ಅಭ್ಯರ್ಥಿಗಳು)
ಕೆ. ಅಭಯಚಂದ್ರ(ಕಾಂಗ್ರೆಸ್),
ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ),
ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ),
ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ),
ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ),
ರೀನಾ ಪಿಂಟೋ (ಪಕ್ಷೇತರ),
ಅಬ್ದುಲ್ ರಹಿಮಾನ್ (ಎಂ.ಇ.ಪಿ).

ಮಂಗಳೂರು ಉತ್ತರ ಕ್ಷೇತ್ರ (7 ಅಭ್ಯರ್ಥಿಗಳು)
ಸುರೇಶ್ ಬಿ ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ),
ಮೊಯ್ದಿನ್ ಬಾವಾ (ಕಾಂಗ್ರೆಸ್),
ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ),
ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ),
ಪಿ.ಎಂ. ಅಹಮ್ಮದ್ (ಎಂ.ಇ.ಪಿ),
ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),
ಮ್ಯಾಕ್ಸಿಂ ಪಿಂಟೋ (ಪಕ್ಷೇತರ)

ಮಂಗಳೂರು ದಕ್ಷಿಣ ಕ್ಷೇತ್ರ (11 ಅಭ್ಯರ್ಥಿಗಳು)
ಜೆ.ಆರ್.ಲೋಬೊ (ಕಾಂಗ್ರೆಸ್),
ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ),
ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ),
ರೀನಾ ಪಿಂಟೋ (ಪಕ್ಷೇತರ),
ಮದನ್ ಎಂ.ಸಿ (ಪೇತರ),
ಆರ್.ಶ್ರೀಕರ ಪ್ರಭು (ಪಕ್ಷೇತರ),
ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),
ರತ್ನಾಕರ ಸುವರ್ಣ (ಜೆ.ಡಿ.ಎಸ್),
ಮುಹಮ್ಮದ್ ಖಾಲಿದ್ (ಪಕ್ಷೇತರ),
ಮುಹಮ್ಮದ್ ಇಕ್ಬಾಲ್ (ಎಂಇಪಿ)
ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),

ಮಂಗಳೂರು ಕ್ಷೇತ್ರ (5 ಅಭ್ಯರ್ಥಿಗಳು)
ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),
ಸಂತೋಷ್ ಕುಮಾರ್ ರೈ (ಬಿ.ಜೆ.ಪಿ),
ಯು.ಟಿ.ಖಾದರ್ (ಕಾಂಗ್ರೆಸ್),
ಕೆ.ಅಶ್ರಫ್ (ಜೆ.ಡಿ.ಎಸ್),
ಉಸ್ಮಾನ್ (ಎಂ.ಇ.ಪಿ)

ಬಂಟ್ವಾಳ ಕ್ಷೇತ್ರ (5 ಅಭ್ಯರ್ಥಿಗಳು)
ಬಿ. ರಮಾನಾಥ ರೈ (ಕಾಂಗ್ರೆಸ್),
ರಾಜೇಶ್ ನಾಯಕ್(ಬಿ.ಜೆ.ಪಿ),
ಇಬ್ರಾಹಿಂ ಕೈಲಾರ್ (ಪಕ್ಷೇತರ),
ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ),
ಶಮೀರ್ (ಎಂ.ಇ.ಪಿ)

ಪುತ್ತೂರು ಕ್ಷೇತ್ರ (11 ಅಭ್ಯರ್ಥಿಗಳು)
ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್),
ಸಂಜೀವ ಮಟಂದೂರು (ಬಿ.ಜೆ.ಪಿ),
ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ),
ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ),
ಐ.ಸಿ.ಕೈಲಾಸ್ (ಜೆ.ಡಿ.ಎಸ್),
ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ),
ಶಬಾನ ಎಸ್.ಶೇಖ್ (ಎಂ.ಇ.ಪಿ),
ಮಜೀದ್ (ಸಂಯುಕತಿ ಜನತಾ ದಳ)
ವಿದ್ಯಾಶ್ರೀ (ಪಕ್ಷೇತರ)
ಬಿ.ಎಸ್. ಚೇತನ ಕುಮಾರ್ (ಪಕ್ಷೇತರ)
ಅಮರನಾಥ ಬಿ.ಕೆ(ಪಕ್ಷೇತರ)

ಸುಳ್ಯ ಕ್ಷೇತ್ರ (6 ಅಭ್ಯರ್ಥಿಗಳು)
ಅಂಗಾರ ಎಸ್.(ಬಿ.ಜೆ.ಪಿ)
ಡಾ. ಬಿ. ರಘು (ಕಾಂಗ್ರೆಸ್),
ಸಂಜೀವ ಬಾಬುರಾವ್ ಕುರಾನ್ಡ್‌ವಾಡ್(ಪಕ್ಷೇತರ),
ಸುಂದರ ಕೆ. (ಪಕ್ಷೇತರ),
ರಘು (ಬಹುಜನ ಸಮಾಜ ಪಾರ್ಟಿ),
ಚಂದ್ರಶೇಖರ ಕೆ (ಪಕ್ಷೇತರ)

ಮತಗಟ್ಟೆಯ ಬಳಿ ಚುನಾವಣಾ ಪ್ರಚಾರಕ್ಕೆ ಅವಕಾಶವಿಲ್ಲ

ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿದೆ. ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಅನುಮತಿ ಪಡೆದು ಅಭ್ಯರ್ಥಿಯ ಬೂತು ನಿರ್ಮಿಸಲು ಅವಕಾಶವಿರುತ್ತದೆ. ಬೂತ್‌ನಲ್ಲಿ ಒಂದು ಮೇಜು, 2 ಕುರ್ಚಿಗಳು ಮತ್ತು 3 X 1.5 ಅಡಿ ಅಗಲದ ಬ್ಯಾನರ್ ಉಪಯೋಗಿಸಬಹುದು. ಈ ಬೂತುಗಳ ರಚನೆಗೆ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಬೊಂದೇಲ್‌ನ ಎಂಜಿಸಿ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ

ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆ ಬೊಂದೇಲ್‌ನ ಮಹಾತ್ಮಗಾಂಧಿ ಶತಾಬ್ಧಿ ಹಿರಿಯ ಪ್ರಾಥಮಿಕ ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜು ಇಲ್ಲಿನ ಕೊಠಡಿಗಳಲ್ಲಿ ನಡೆಯಲಿದೆ.

12ರಂದು ಮತದಾನ ಮುಕ್ತಾಯವಾದ ಬಳಿಕ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಮತ ಚಲಾಯಿಸಲಾದ ಇವಿಎಂ/ ವಿವಿ ಪ್ಯಾಟ್ ಹಾಗೂ ಇತರ ಚುನಾವಣಾ ದಾಖಲೆಗಳನ್ನು ಈ ಸಂಸ್ಥೆಯ ಈಗಾಗಲೇ ನಿಗದಿಪಡಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಿ ಮೊಹರು ಹಾಕಲಾಗುವುದು. ನಂತರ ಭದ್ರತೆಯನ್ನು ನಿಯೋಜಿತ ಕೇಂದ್ರ ಭದ್ರತಾ ಪಡೆಯವರು ಮಾಡಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಏಜೆಂಟರು ಪ್ರತಿಯೊಂದು ಚುನಾವಣಾ ಕ್ಷೇತ್ರದಿಂದ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲಾಗುವ ಮತ ಚಲಾಯಿಸಲಾದ ಇವಿಎಂ ಸೇರಿದಂತೆ ದಾಖಲೆಗಳನ್ನು ಸಾಗಿಸುವ ವಾಹನವನ್ನು ಹಿಂಬಾಲಿಸುವ ಅವಕಾಶವಿರುತ್ತದೆ. ಅಲ್ಲದೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯವಲ್ಲಿ ಇವುಗಳನ್ನು ಇಟ್ಟು ಮೊಹರು ಮಾಡುವಾಗ ಅಭ್ಯರ್ಥಿಗಳು ಅವರ ಏಜೆಂಟರು ಹಾಜರಿದ್ದು, ಭದ್ರತಾ ಕೊಠಡಿಯ ಬೀಗಕ್ಕೆ ತಮ್ಮ ಮೊಹರು/ಸಹಿಯನ್ನು ಹಾಕಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X