ದ.ಕ.: ಪ್ರಜಾಪ್ರಭುತ್ವ ಹಬ್ಬಕ್ಕೆ ಸಿದ್ಧಗೊಂಡಿದೆ ವೇದಿಕೆ
ಹಕ್ಕು ಚಲಾಯಿಸಲು ಆರಂಭವಾಗಿದೆ ಕ್ಷಣಗಣನೆ

ಮಂಗಳೂರು, ಮೇ 11: ಐದು ವರ್ಷಗಳಿಗೊಮ್ಮೆ ಪ್ರಜೆಗಳಿಗೆ ತಮ್ಮ ಜನಸೇವಕರನ್ನು ಆಯ್ಕೆ ಮಾಡಲು ಅವಕಾಶ ನೀಡುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಹಬ್ಬವಾಗಿ ಆಚರಿಸಲಾಗುತ್ತಿದೆ. ಇದೀಗ ಮೇ 12ರಂದು ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕ್ನಡ ಜಿಲ್ಲೆಯಲ್ಲೂ ವೇದಿಕೆ ಸಜ್ಜಾಗಿದೆ.
ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದ್ದು, ಮತದಾರರು ನಿರಾತಂಕವಾಗಿ ಮತ ಚಲಾಯಿಸಲು ಅಗತ್ಯವಾದ ಭದ್ರತಾ ವ್ಯವಸ್ಥೆಗಳನ್ನು ಒದಗಿಸಿರುವ ಬಗ್ಗೆ ಜಿಲ್ಲಾಡಳಿತ ಈಗಾಗಲೇ ಖಾತ್ರಿ ಪಡಿಸಿದೆ.
ಕಳೆದ ಸುಮಾರು ಒಂದು ತಿಂಗಳಿನಿಂದೀಚೆಗೆ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರ ಮನೆ ಮನೆ ಭೇಟಿ, ಬಹಿರಂಗ ಪ್ರಚಾರ ಮೂಲಕ ತಮ್ಮ ಪಕ್ಷಗಳ ಅಭ್ಯರ್ಥಿಗಳ ಮತ ಪ್ರಚಾರವನ್ನು ಕೈಗೊಂಡಿದ್ದು, ಇದೀಗ ಮತದಾರನ ಅಂತಿಮ ನಿರ್ಧಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆಯೂ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಕೊನೆಯ ಸುತ್ತಿನ ಪ್ರಯತ್ನವಾಗಿ ತಮ್ಮ ಕ್ಷೇತ್ರದ ಮನೆಗಳಿಗೆ ಭೇಟಿ ನೀಡಿ ಮತದಾರರನ್ನು ಮನವೊಲಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ.
ದ.ಕ.: 17,11,848 ಮತದಾರರಿಂದ 58 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ದ.ಕ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 17,11,848 ಮತದಾರರು ಅಂತಿಮವಾಗಿ ಕಣದಲ್ಲಿರುವ 58 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಶನಿವಾರ ಮತದಾನದ ಮೂಲಕ ನಿರ್ಧರಿಸಲಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ - ವಿಧಾನಸಭಾ ಕ್ಷೇತ್ರ ಮತದಾರರ ಸಂಖ್ಯೆ
ಕ್ಷೇತ್ರ | ಗಂಡಸರು | ಹೆಂಗಸರು | ಇತರೆ | ಒಟ್ಟು |
ಬೆಳ್ತಂಗಡಿ | 109372 | 109507 | 1 | 218880 |
ಮೂಡುಬಿದಿರೆ | 96733 | 103299 | 13 | 200045 |
ಮಂಗಳೂರು ಉತ್ತರ | 114694 | 120124 | 8 | 234826 |
ಮಂಗಳೂರು ದಕ್ಷಿಣ | 115017 | 124984 | 56 | 240057 |
ಮಂಗಳೂರು | 96186 | 99536 | 13 | 195735 |
ಬಂಟ್ವಾಳ | 109537 | 112192 | 6 | 221735 |
ಪುತ್ತೂರು | 100619 | 101262 | 3 | 201884 |
ಸುಳ್ಯ | 98915 | 99771 | 0 | 198686 |
ಒಟ್ಟು | 841073 | 870675 | 100 | 1711848 |
ಕ್ಷೇತ್ರಗಳ ಅಂತಿಮ ಅಭ್ಯರ್ಥಿಗಳು
ಬೆಳ್ತಂಗಡಿ ಕ್ಷೇತ್ರ (6 ಅಭ್ಯರ್ಥಿಗಳು)
ಕೆ. ವಸಂತ ಬಂಗೇರ(ಕಾಂಗ್ರೆಸ್),
ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್),
ಹರೀಶ್ ಪೂಂಜಾ (ಬಿ.ಜೆ.ಪಿ),
ವೆಂಕಟೇಶ್ ಬೆಂಡೆ (ಪಕ್ಷೇತರ),
ಜಗನ್ನಾಥ(ಎಂಇಪಿ),
ಸೈಯದ್ ಹಸನ್(ಪಕ್ಷೇತರ)
ಮೂಡಬಿದ್ರೆಕ್ಷೇತ್ರ (7 ಅಭ್ಯರ್ಥಿಗಳು)
ಕೆ. ಅಭಯಚಂದ್ರ(ಕಾಂಗ್ರೆಸ್),
ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ),
ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ),
ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ),
ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ),
ರೀನಾ ಪಿಂಟೋ (ಪಕ್ಷೇತರ),
ಅಬ್ದುಲ್ ರಹಿಮಾನ್ (ಎಂ.ಇ.ಪಿ).
ಮಂಗಳೂರು ಉತ್ತರ ಕ್ಷೇತ್ರ (7 ಅಭ್ಯರ್ಥಿಗಳು)
ಸುರೇಶ್ ಬಿ ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ),
ಮೊಯ್ದಿನ್ ಬಾವಾ (ಕಾಂಗ್ರೆಸ್),
ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ),
ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ),
ಪಿ.ಎಂ. ಅಹಮ್ಮದ್ (ಎಂ.ಇ.ಪಿ),
ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),
ಮ್ಯಾಕ್ಸಿಂ ಪಿಂಟೋ (ಪಕ್ಷೇತರ)
ಮಂಗಳೂರು ದಕ್ಷಿಣ ಕ್ಷೇತ್ರ (11 ಅಭ್ಯರ್ಥಿಗಳು)
ಜೆ.ಆರ್.ಲೋಬೊ (ಕಾಂಗ್ರೆಸ್),
ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ),
ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ),
ರೀನಾ ಪಿಂಟೋ (ಪಕ್ಷೇತರ),
ಮದನ್ ಎಂ.ಸಿ (ಪೇತರ),
ಆರ್.ಶ್ರೀಕರ ಪ್ರಭು (ಪಕ್ಷೇತರ),
ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),
ರತ್ನಾಕರ ಸುವರ್ಣ (ಜೆ.ಡಿ.ಎಸ್),
ಮುಹಮ್ಮದ್ ಖಾಲಿದ್ (ಪಕ್ಷೇತರ),
ಮುಹಮ್ಮದ್ ಇಕ್ಬಾಲ್ (ಎಂಇಪಿ)
ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),
ಮಂಗಳೂರು ಕ್ಷೇತ್ರ (5 ಅಭ್ಯರ್ಥಿಗಳು)
ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),
ಸಂತೋಷ್ ಕುಮಾರ್ ರೈ (ಬಿ.ಜೆ.ಪಿ),
ಯು.ಟಿ.ಖಾದರ್ (ಕಾಂಗ್ರೆಸ್),
ಕೆ.ಅಶ್ರಫ್ (ಜೆ.ಡಿ.ಎಸ್),
ಉಸ್ಮಾನ್ (ಎಂ.ಇ.ಪಿ)
ಬಂಟ್ವಾಳ ಕ್ಷೇತ್ರ (5 ಅಭ್ಯರ್ಥಿಗಳು)
ಬಿ. ರಮಾನಾಥ ರೈ (ಕಾಂಗ್ರೆಸ್),
ರಾಜೇಶ್ ನಾಯಕ್(ಬಿ.ಜೆ.ಪಿ),
ಇಬ್ರಾಹಿಂ ಕೈಲಾರ್ (ಪಕ್ಷೇತರ),
ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ),
ಶಮೀರ್ (ಎಂ.ಇ.ಪಿ)
ಪುತ್ತೂರು ಕ್ಷೇತ್ರ (11 ಅಭ್ಯರ್ಥಿಗಳು)
ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್),
ಸಂಜೀವ ಮಟಂದೂರು (ಬಿ.ಜೆ.ಪಿ),
ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ),
ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ),
ಐ.ಸಿ.ಕೈಲಾಸ್ (ಜೆ.ಡಿ.ಎಸ್),
ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ),
ಶಬಾನ ಎಸ್.ಶೇಖ್ (ಎಂ.ಇ.ಪಿ),
ಮಜೀದ್ (ಸಂಯುಕತಿ ಜನತಾ ದಳ)
ವಿದ್ಯಾಶ್ರೀ (ಪಕ್ಷೇತರ)
ಬಿ.ಎಸ್. ಚೇತನ ಕುಮಾರ್ (ಪಕ್ಷೇತರ)
ಅಮರನಾಥ ಬಿ.ಕೆ(ಪಕ್ಷೇತರ)
ಸುಳ್ಯ ಕ್ಷೇತ್ರ (6 ಅಭ್ಯರ್ಥಿಗಳು)
ಅಂಗಾರ ಎಸ್.(ಬಿ.ಜೆ.ಪಿ)
ಡಾ. ಬಿ. ರಘು (ಕಾಂಗ್ರೆಸ್),
ಸಂಜೀವ ಬಾಬುರಾವ್ ಕುರಾನ್ಡ್ವಾಡ್(ಪಕ್ಷೇತರ),
ಸುಂದರ ಕೆ. (ಪಕ್ಷೇತರ),
ರಘು (ಬಹುಜನ ಸಮಾಜ ಪಾರ್ಟಿ),
ಚಂದ್ರಶೇಖರ ಕೆ (ಪಕ್ಷೇತರ)
ಮತಗಟ್ಟೆಯ ಬಳಿ ಚುನಾವಣಾ ಪ್ರಚಾರಕ್ಕೆ ಅವಕಾಶವಿಲ್ಲ
ಮತದಾನದ ದಿನದಂದು ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರವನ್ನು ನಿಷೇಧಿಸಲಾಗಿದೆ. ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಅನುಮತಿ ಪಡೆದು ಅಭ್ಯರ್ಥಿಯ ಬೂತು ನಿರ್ಮಿಸಲು ಅವಕಾಶವಿರುತ್ತದೆ. ಬೂತ್ನಲ್ಲಿ ಒಂದು ಮೇಜು, 2 ಕುರ್ಚಿಗಳು ಮತ್ತು 3 X 1.5 ಅಡಿ ಅಗಲದ ಬ್ಯಾನರ್ ಉಪಯೋಗಿಸಬಹುದು. ಈ ಬೂತುಗಳ ರಚನೆಗೆ ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಬೊಂದೇಲ್ನ ಎಂಜಿಸಿ ಶಿಕ್ಷಣ ಸಂಸ್ಥೆಯಲ್ಲಿ ಮತ ಎಣಿಕೆ
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆ ಬೊಂದೇಲ್ನ ಮಹಾತ್ಮಗಾಂಧಿ ಶತಾಬ್ಧಿ ಹಿರಿಯ ಪ್ರಾಥಮಿಕ ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜು ಇಲ್ಲಿನ ಕೊಠಡಿಗಳಲ್ಲಿ ನಡೆಯಲಿದೆ.
12ರಂದು ಮತದಾನ ಮುಕ್ತಾಯವಾದ ಬಳಿಕ ಎಂಟು ವಿಧಾನಸಭಾ ಕ್ಷೇತ್ರಗಳಿಂದ ಮತ ಚಲಾಯಿಸಲಾದ ಇವಿಎಂ/ ವಿವಿ ಪ್ಯಾಟ್ ಹಾಗೂ ಇತರ ಚುನಾವಣಾ ದಾಖಲೆಗಳನ್ನು ಈ ಸಂಸ್ಥೆಯ ಈಗಾಗಲೇ ನಿಗದಿಪಡಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಿ ಮೊಹರು ಹಾಕಲಾಗುವುದು. ನಂತರ ಭದ್ರತೆಯನ್ನು ನಿಯೋಜಿತ ಕೇಂದ್ರ ಭದ್ರತಾ ಪಡೆಯವರು ಮಾಡಲಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಅಥವಾ ಏಜೆಂಟರು ಪ್ರತಿಯೊಂದು ಚುನಾವಣಾ ಕ್ಷೇತ್ರದಿಂದ ಮತ ಎಣಿಕೆ ಕೇಂದ್ರಕ್ಕೆ ಸಾಗಿಸಲಾಗುವ ಮತ ಚಲಾಯಿಸಲಾದ ಇವಿಎಂ ಸೇರಿದಂತೆ ದಾಖಲೆಗಳನ್ನು ಸಾಗಿಸುವ ವಾಹನವನ್ನು ಹಿಂಬಾಲಿಸುವ ಅವಕಾಶವಿರುತ್ತದೆ. ಅಲ್ಲದೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯವಲ್ಲಿ ಇವುಗಳನ್ನು ಇಟ್ಟು ಮೊಹರು ಮಾಡುವಾಗ ಅಭ್ಯರ್ಥಿಗಳು ಅವರ ಏಜೆಂಟರು ಹಾಜರಿದ್ದು, ಭದ್ರತಾ ಕೊಠಡಿಯ ಬೀಗಕ್ಕೆ ತಮ್ಮ ಮೊಹರು/ಸಹಿಯನ್ನು ಹಾಕಬಹುದು.