Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯ

ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯ

ವಾರ್ತಾಭಾರತಿವಾರ್ತಾಭಾರತಿ12 May 2018 12:07 AM IST
share
ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯ

ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ

ವ್ಯಾಧಿಯ ಚಿಕಿತ್ಸೆಯನಾರು ಅರಿಯರಲ್ಲಾ!

ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ; ಆತ್ಮಂಗೆ ಆಣವ, ಮಾಯಾ, ಕಾರ್ಮಿಕ.

ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ

ಬಂಧನದಲ್ಲಿ ಸಾವುತ್ತಿದೆ ಅಂಗ.

ಆರೋಗ್ಯ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ.

ಒಂದು ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ,

ಒಂದು ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು.

ಇದಕ್ಕನುಪಾನ ಇದಿರೆಡೆಯಿಲ್ಲ,

ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.

 -ವೈದ್ಯ ಸಂಗಣ್ಣ

ವಾತ, ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳು ಶರೀರಕ್ಕೆ ರೋಗವನ್ನು ಆಹ್ವಾನಿಸುತ್ತವೆ. ಆಣವ, ಮಾಯಾ ಮತ್ತು ಕಾರ್ಮಿಕ ಎಂಬ ಮಲತ್ರಯಗಳು ಆತ್ಮಕ್ಕೆ ಹಾನಿಯನ್ನುಂಟುಮಾಡುತ್ತವೆ. ವಚನಕಾರರ ದೇವರು ನಿರಾಕಾರ ಆದರೆ ನಿರ್ಗುಣನಲ್ಲ. ಶಕ್ತಿ ಅವನ ಗುಣ. ಆತನ ಶಕ್ತಿ ಮೂರು ಪ್ರಕಾರಗಳಲ್ಲಿ ವ್ಯಕ್ತವಾಗುವುದು. ಸೃಷ್ಟಿಸಬೇಕೆಂಬ ಇಚ್ಛಾಶಕ್ತಿ, ಯಾವರೀತಿ ಸೃಷ್ಟಿಸಬೇಕೆಂಬ ಜ್ಞಾನಶಕ್ತಿ, ಇಚ್ಛೆ ಮತ್ತು ಜ್ಞಾನಕ್ಕನುಗುಣವಾಗಿ ಕಾರ್ಯೋನ್ಮುಖವಾಗುವುದೇ ಕ್ರಿಯಾಶಕ್ತಿ. ಈ ಮೂರೂ ಶಕ್ತಿಗಳು ಮಾನವನಲ್ಲಿ ಇದ್ದರೂ ಅವಿದ್ಯೆಯ ಕಾರಣ ಆತ ಇಚ್ಛಾಶಕ್ತಿಯನ್ನು ಕಳೆದುಕೊಂಡು ತನ್ನನ್ನು ಅಣು (ಅಲ್ಪ) ಎಂದು ತಿಳಿದಿದ್ದಾನೆ. ಅವಿದ್ಯೆ ಎಂದರೆ ತನ್ನೊಳಗೆ ದೇವರಿದ್ದಾನೆ ಎಂಬುದರ ಮರೆವು. ಹೀಗೆ ತನ್ನನ್ನು ಕನಿಷ್ಠ ಎಂದು ತಿಳಿಯುವುದೂ ಒಂದು ಮಲವೇ. ಈ ಮಲಕ್ಕೆ ‘ಆಣವಮಲ’ ಎನ್ನುವರು. ಸಂಕುಚಿತ ಭಾವದಿಂದ ತನ್ನ ಜ್ಞಾನಶಕ್ತಿಯನ್ನು ಅರಿಯದೆ ತಾನು, ತನ್ನ ಜನ, ತನ್ನ ಜಾತಿ, ತನ್ನ ಧರ್ಮ ಎಂದು ಮೋಹಕ್ಕೆ ಒಳಗಾಗುವುದಕ್ಕೆ ‘ಮಾಯಾಮಲ’ ಎನ್ನುವರು. ಕ್ರಿಯಾಶಕ್ತಿಯನ್ನು ಕುಂಠಿತಗೊಳಿಸುವ ಮಲಕ್ಕೆ ಕಾರ್ಮಿಕ ಮಲ ಎನ್ನುವರು. ಈ ದೋಷಗಳಿಂದ ರೋಗರುಜಿನಗಳು ಬಂದು ಶರೀರವು ಅವುಗಳಿಂದ ಬಂಧನಕ್ಕೊಳಗಾಗಿ ಸಾವಿನ ದಾರಿ ಹಿಡಿಯುವುದು. ಆರೋಗ್ಯವನ್ನು ಕಾಪಾಡುವುದಕ್ಕಾಗಿ ಮೂರು ಬೇರು ತಂದೆ. ಕ್ರಿಯಾಚಾರವೆಂಬ ಬೇರನ್ನು ಶರೀರಕ್ಕೆ ತಿಕ್ಕಿದಾಗ ಕಾಮನೆಗಳು ನಾಶವಾಗಿ ಇಚ್ಛಾಶಕ್ತಿ ಬರುವುದು. ಭಾವಾಚಾರವೆಂಬ ಬೇರಿನಿಂದ ಆತ್ಮಮಥನ ಮಾಡಿದಾಗ ಮಾಯೆ ಹರಿದು ಜ್ಞಾನಶಕ್ತಿ ಬರುವುದು. ಜ್ಞಾನಾಚಾರವೆಂಬ ಬೇರನ್ನು ಅರಿವಿನಲ್ಲಿ ಕೂಡಿಸಿ ಕುಡಿದಾಗ ಕರ್ಮ ಹರಿದು ಕ್ರಿಯಾಶಕ್ತಿ ಬರುವುದು. ಇದಕ್ಕೆ ಪಥ್ಯವಿಲ್ಲ ಎಂದು ದೇವರ ಸಾಕ್ಷಿಯಾಗಿ ವೈದ್ಯ ಸಂಗಣ್ಣನವರು ಹೇಳಿದ್ದಾರೆ.

ಪರಿಶುದ್ಧವಾದ ಮನಸ್ಸು ಪರಿಶುದ್ಧವಾದ ದೇಹವನ್ನು ಹೊಂದುವುದು. ಹೀಗೆ ಶರೀರಕ್ಕೆ ಬರುವ ತ್ರಿದೋಷಗಳ ಮೂಲವು ಮಲತ್ರಯಗಳಿಂದ ಕೂಡಿದ ಮನಸ್ಥಿತಿಯಲ್ಲೇ ಇದೆ ಎಂಬ ರಹಸ್ಯವನ್ನು ಭೇದಿಸಿದವರು ಬಸವಣ್ಣನವರ ಸಮಕಾಲೀನರಾದ ವೈದ್ಯ ಸಂಗಣ್ಣನವರು. ಆರೋಗ್ಯಪೂರ್ಣ ಮನಸ್ಸು ಆರೋಗ್ಯಪೂರ್ಣ ಶರೀರವನ್ನು ಬಯಸುತ್ತದೆ. ದುರ್ಬಲ ಮನಸ್ಸು ಶರೀರವನ್ನು ದುರ್ಬಲಗೊಳಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X