Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ14 May 2018 12:39 AM IST
share
ಓ ಮೆಣಸೇ...

ಕಾಂಗ್ರೆಸ್‌ನವರು ಮುಧೋಳ ನಾಯಿ ನೋಡಿ ದೇಶಭಕ್ತಿ ತಿಳಿದುಕೊಳ್ಳಬೇಕು - ನರೇಂದ್ರಮೋದಿ, ಪ್ರಧಾನಿ

ನೀವು ಯಾವ ನಾಯಿ ನೋಡಿ ದೇಶಭಕ್ತಿ ಕಲಿತುಕೊಂಡಿರಿ?

---------------------

ನಾನು ನನ್ನ ಜೀವನವನ್ನು ರೈತರಿಗಾಗಿ ಮುಡುಪಾಗಿಟ್ಟವನು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ,

ಅಂದರೆ ರೈತರಿಗೆ ಗುಂಡು ಹಾರಿಸುವುದಕ್ಕಾಗಿ ಜೀವನ ಮುಡಿಪೇ?

---------------------
ಜೆಡಿಎಸ್‌ಗೆ ಬಹುಮತ ಬಾರದೇ ಇದ್ದಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ - ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ
ಅವರೇ ನಿಮ್ಮ ಬಾಗಿಲಿಗೆ ಬರುತ್ತಾರೆ ಎಂಬ ಧೈರ್ಯವೇ?
---------------------
ಬಾಲ್ಯ ವಿವಾಹ ನಿಷೇಧವೇ ಲವ್‌ಜಿಹಾದ್‌ಗೆ ಕಾರಣ - ಗೋಪಾಲ್ ಪಾರ್ಮರ್, ಮಧ್ಯಪ್ರದೇಶ ಶಾಸಕ

ಲವ್ ಜಿಹಾದ್ ನಡೆಸುವುದಕ್ಕಾಗಿಯೇ ಬಾಲ್ಯ ವಿವಾಹ ನಿಷೇಧಿಸಿರಬಹುದೆ?
---------------------
 
2019ರ ಲೋಕಸಭೆ ಚುನಾವಣೆ ಪಾಂಡವರು ಮತ್ತು ಕೌರವರ ನಡುವಿನ ಧರ್ಮಯುದ್ಧ - ಸುರೇಂದ್ರ ಸಿಂಗ್, ಬಿಜೆಪಿ ಶಾಸಕ

ಪಾಂಡವರು ಮತ್ತು ಕೌರವರ ನಡುವಿನ ಜೂಜಾಟ ಎಂದರೆ ಅರ್ಥಪೂರ್ಣ.

---------------------

ಎಲ್ಲರ ಕಲ್ಯಾಣಕ್ಕಾಗಿ ಜೆಡಿಎಸ್-ಬಿಎಸ್ಪಿ ಮಹಾಮೈತ್ರಿ- ಮಾಯಾವತಿ, ಬಿಎಸ್ಪಿ ಅಧ್ಯಕ್ಷೆ

ಆ ಎಲ್ಲರಲ್ಲಿ ಬಿಜೆಪಿಯೂ ಸೇರಿದೆ ಎಂಬ ಆರೋಪವಿದೆ.

---------------------
 
ರಾಜ್ಯದಲ್ಲಿ ಬದಲಾವಣೆಯ ಸಮಯ ಸಮೀಪಿಸುತ್ತಿದೆ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

ನಿಮ್ಮಲ್ಲಿ ಹೊಸದಾಗಿ ಬದಲಾವಣೆಗಳೇನಾದರೂ ಇದೆಯೇ?

---------------------
ಸಿದ್ದರಾಮಯ್ಯರ ದುರಹಂಕಾರದಿಂದ ಈ ಬಾರಿ ಕಾಂಗ್ರೆಸ್ ನೆಲಕಚ್ಚುತ್ತದೆ - ಶ್ರೀನಿವಾಸ್ ಪ್ರಸಾದ, ಮಾಜಿ ಸಚಿವ

ಒಟ್ಟಿನಲ್ಲಿ ಸಿದ್ದರಾಮಯ್ಯ ನೆಲಕಚ್ಚಿದರೆ ನಿಮ್ಮ ಆಸೆ ಈಡೇರಿದಂತೆ.

---------------------
ಸರಕಾರ ರಚನೆಗಾಗಿ ನಾವು ರಾಜಕೀಯ ಮಾಡುತ್ತಿಲ್ಲ - ರಾಜನಾಥ್‌ಸಿಂಗ್, ಕೇಂದ್ರ ಸಚಿವ

ರಾಜ್ಯದಲ್ಲಿ ಯಡಿಯೂರಪ್ಪರನ್ನು ಕಸದ ಬುಟ್ಟಿಗೆ ಹಾಕುವ ರಾಜಕೀಯ ನಡೆಯುತ್ತಿದೆಯಂತೆ.

---------------------
 
ಮೋದಿ ಬಿರುಗಾಳಿಯಾದರೆ ಕಾಂಗ್ರೆಸ್ ಹೆಬ್ಬಂಡೆ - ಡಾ.ಜಿ.ಪರಮೇಶ್ವರ್,ಕೆಪಿಸಿಸಿ ಅಧ್ಯಕ್ಷ

ಮತದಾರರು ಆ ಬಂಡೆಗೆ ತಲೆಚಚ್ಚಿಕೊಂಡಂತಾಯಿತು.

---------------------

ಕುಮಾರಸ್ವಾಮಿ ಸಿಎಂ ಆಗಿದ್ದಾರೆ ಅವರಪ್ಪ ಮುಖ್ಯಮಂತ್ರಿಯಾಗಿದ್ದಾರೆ, ನಾನೇಕೆ ಸಿಎಂ ಆಗಬಾರದು? - ಡಿ.ಕೆ.ಶಿವಕುಮಾರ್, ಸಚಿವ

ದೇವೇಗೌಡರ ಕುಟುಂಬದ ಸದಸ್ಯರಾಗಿದ್ದರೆ ನೀವು ಆಗಬಹುದಿತ್ತೇನೋ?

---------------------

ರಾಜ್ಯದಲ್ಲಿ ಬಿಜೆಪಿ ಗೆದ್ದರೆ ಆರು ತಿಂಗಳಲ್ಲಿ ಮಹಾದಾಯಿ ಸಮಸ್ಯೆಗೆ ಪರಿಹಾರ - ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಇಲ್ಲವಾದರೆ ಪರಿಹರಿಸಲು ಬಿಡುವುದಿಲ್ಲ ಎಂದಾಯಿತು.

---------------------
ಹಿಂದೆ ದ್ರೋಹ ಮಾಡಿದ ಜೆಡಿಎಸ್ ಜೊತೆ ಮೈತ್ರಿ ಇಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ದ್ರೋಹ ಮಾಡದ ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧ್ಯತೆ ಇದೆಯೇ?
---------------------
 
ಈ ಬಾರಿಯದು ನನ್ನ ಕಡೆಯ ಚುನಾವಣೆ ಪ್ರಚಾರ - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನೂ ಸೇರಿಸಬೇಕಾಗಿತ್ತು.

---------------------
ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ - ರಾಮ್‌ ಜೇಠ್ಮಲಾನಿ, ಹಿರಿಯ ನ್ಯಾಯವಾದಿ

ಅಡ್ವಾಣಿಯವರದೂ ಅದೇ ಅಳಲು.

---------------------

ಅವಕಾಶವಾದಿಗಳು ಪಕ್ಷದ ಒಳಗೆ ಇರುವ ಬದಲು ಹೊರಗಡೆ ಇರುವುದು ಒಳ್ಳೆಯದು - ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

ಹೊರಗೆ ಹೋಗುವವರೆಗೆ ಅವರು ಯಾವ ವಾದಿಗಳು ಎಂದು ಗೊತ್ತಾಗುವುದಿಲ್ಲ, ಬಿಡಿ.

---------------------

ಹಿಂದೂ ಸಮಾಜ ಒಂದು ವಿಚಿತ್ರವಾದ ಸ್ಥಿತಿಯಲ್ಲಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ

ಅದಕ್ಕೆ ನಿಮ್ಮ ಕೊಡುಗೆಯಂತೂ ಅಪಾರ.

---------------------
 
ಕರ್ನಾಟಕ ಜಿಹಾದಿಗಳ ಅಡ್ಡೆ - ಆದಿತ್ಯನಾಥ್, ಉ.ಪ್ರದೇಶ ಮುಖ್ಯಮಂತ್ರಿ

ಉತ್ತರ ಪ್ರದೇಶದ ಬೀದಿನಾಯಿಗಳ ಕಡೆಗೆ ಗಮನ ಹರಿಸಿ.

---------------------
 
ಬಿಜೆಪಿ ಗಟ್ಟಿಯಾಗಲು ಕಾಂಗ್ರೆಸ್ಸೇ ಕಾರಣ - ಅಸದುದ್ದೀನ್ ಉವೈಸಿ, ಎಐಎಂಐಎಂ ಸ್ಥಾಪಕ

ನೀವು ಗಟ್ಟಿಯಾಗಲು ಬಿಜೆಪಿ ಕಾರಣ ಎಂದು ಆರೋಪವಿದೆ.

---------------------
ನರೇಂದ್ರ ಮೋದಿ ಪಿಎಂ ಅಂದರೆ, ಪಂಚಾಯತ್ ಮೆಂಬರ್ ಅನ್ನುವಷ್ಟರ ಮಟ್ಟಿಗೆ ಇಳಿದಿದ್ದಾರೆ - ಬಿ.ಕೆ.ಹರಿಪ್ರಸಾದ್, ಎಐಸಿಸಿ ಪ್ರ.ಕಾರ್ಯದರ್ಶಿ

ತಳಮಟ್ಟದ ನಾಯಕ ಎಂದು ಹೊಗಳಿದಂತಾಯಿತು.

---------------------
 
ಐಟಿ ಅಧಿಕಾರಿಗಳು ಗುಡ್ಡ ಅಗೆದು ಇಲಿ ಹಿಡಿದಿದ್ದಾರೆ - ಸಿ.ಎಂ.ಇಬ್ರಾಹೀಂ, ವಿ.ಪ.ಸದಸ್ಯ

ಗುಡ್ಡದ ಬದಲು, ಕೆಲವರ ಮನೆಗಳನ್ನು ಅಗೆದರೆ ಹುಲಿಯೂ ಸಿಗಬಹುದು.

---------------------
ಮೋದಿಯ ಬಣ್ಣದ ಮಾತುಗಳಿಂದ ಬಡವರ ಹೊಟ್ಟೆ ತುಂಬುವುದಿಲ್ಲ - ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ಗೆದ್ದರೆ ರೇಷನ್ ಅಂಗಡಿಗಳಲ್ಲಿ ಮೋದಿ ಭಾಷಣದ ಸಿಡಿಗಳನ್ನು ತೂಕ ಮಾಡಿ ಬಡವರಿಗೆ ಹಂಚಲಿದ್ದಾರಂತೆ.

---------------------
ಮತದಾನ ಮಾಡದಿರುವುದು ಮಹಾಪಾಪ - ರಾಘವೇಶ್ವರ ಸ್ವಾಮೀಜಿ , ರಾಮಚಂದ್ರಾಪುರ ಮಠ

ಹಾಗಾದರೆ ಅತ್ಯಾಚಾರ?
---------------------
 
ದಲಿತ ಅನ್ನುವ ಕಾರಣಕ್ಕೆ ಪುನಃ ಪುನಃ ಮುಖ್ಯಮಂತ್ರಿ ಸ್ಥಾನ ಕೇಳುವುದು ಮುಜುಗರದ ವಿಚಾರ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಬೇರೆ ಕಾರಣವನ್ನು ಮುಂದೊಡ್ಡಿ ಮುಖ್ಯಮಂತ್ರಿ ಸ್ಥಾನ ಕೇಳುತ್ತೀರಿ ಎಂದಾಯಿತು.

share
ಪಿ.ಎ.ರೈ
ಪಿ.ಎ.ರೈ
Next Story
X