ಗುರುವಾಯನಕೆರೆ: ರಸ್ತೆ ಅಪಘಾತ; ಇಬ್ಬರಿಗೆ ಗಾಯ

ಬೆಳ್ತಂಗಡಿ, ಮೇ 14: ಗುರುವಾಯನಕೆರೆ ಸನಿಹ ಬದ್ಯಾರು ಎಂಬಲ್ಲಿ ಕಾರು ಮತ್ತು ಬಸ್ಸು ಢಿಕ್ಕಿಯಾಗಿ ಕಾರಿನಲ್ಲಿದ್ದ ಮಗು ಸಹಿತ ಗೃಹಿಣಿಯೋರ್ವರು ಗಂಭೀರ ಗಾಯಗೊಂಡ ಘಟನೆ ಸೋವವಾರ ನಡೆದಿದೆ.
ಘಟನೆ ನಡೆದ ಸಂದರ್ಭ ಭಾರಿ ಮಳೆ ಇದ್ದುದರಿಂದ ರಾಜ್ಯ ಹೆದ್ದಾರಿಯ ತಿರುವೊಂದರಲ್ಲಿ ನ್ಯಾನೋ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ನಾರಾವಿ ಕಡೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಎದುರು ಭಾಗದಲ್ಲಿ ಆರು ತಿಂಗಳ ಮಗುವಿನೊಂದಿಗೆ ಕುಳಿತಿದ್ದ ಗೃಹಿಣಿ ಹಾಗೂ ಮಗುವಿಗೆ ಗಂಭೀರ ಗಾಯಗಳಾಗಿವೆ. ಪತಿ ಕಾರನ್ನು ಚಾಲನೆ ಮಾಡುತ್ತಿದ್ದು, ಹಿಂದಿನ ಸೀಟಿನಲ್ಲಿದ್ದ ಇನ್ನೊಂದು ಮಗು ಯಾವುದೇ ತೊಂದರೆಗಳಿಲ್ಲದೆ ಪಾರಾಗಿದೆ. ಕಾರಿನ ಎದುರು ಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Next Story