ಗಮನ ಸೆಳೆದ ಗಣ್ಯರ ಕ್ಷೇತ್ರಗಳ ಫಲಿತಾಂಶ: ಚಾಮುಂಡೇಶ್ವರಿ
ಕರ್ನಾಟಕ ವಿಧಾನಸಭಾ ಚುನಾವಣೆ

ಚಾಮುಂಡೇಶ್ವರಿ,ಮೇ.15: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಕಣಕಿಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಹೀನಾಯ ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು 1,15,081ಮತಗಳನ್ನು ಗಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ-80,507 ಮತಗಳನ್ನು ಪಡೆದಿದ್ದಾರೆ.
34,511 ಮತಗಳ ಭಾರೀ ಅಂತರದಿಂದ ಗೆದ್ದ ಜಿ.ಟಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಯದ ನಗೆ ಬೀರಿದ್ದಾರೆ.
Next Story





