ರಾಜ್ಯ ವಿಧಾನಸಭಾ ಚುನಾವಣೆ: ಎಂಟು ಮಂದಿ ಅಲ್ಪಸಂಖ್ಯಾತರಿಗೆ ಗೆಲುವು

ಬೆಂಗಳೂರು, ಮೇ 15: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಎಂಟು ಮಂದಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದು, ಬಿಜೆಪಿಯಿಂದ ಈ ಬಾರಿ ಯಾವುದೇ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕಟ್ ನೀಡಿರಲಿಲ್ಲ.
ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ ಅಲ್ಪಸಂಖ್ಯಾತರು: ಶಿವಾಜಿನಗರ-ರೋಷನ್ಬೇಗ್, ಶಾಂತಿನಗರ-ಎನ್.ಎ.ಹಾರೀಸ್, ಚಾಮರಾಜ ಪೇಟೆ-ಝಮೀರ್ ಅಹ್ಮದ್ ಖಾನ್, ಮಂಗಳೂರು-ಯು.ಟಿ.ಖಾದರ್, ನರಸಿಂಹರಾಜ-ತನ್ವೀರ್ ಸೇಠ್, ಬೀದರ್-ರಹೀಂ ಖಾನ್, ಗುಲ್ಬರ್ಗ ಉತ್ತರ-ಕನೀಝ್ ಫಾತಿಮಾ ಹಾಗೂ ಸರ್ವಜ್ಞ ನಗರ-ಕೆ.ಜೆ.ಜಾರ್ಜ್ ಗೆಲುವಿನ ನಗೆ ಬೀರಿದ್ದಾರೆ.
Next Story





