ಕುತ್ಪಾಡಿ: ವಿಶ್ವ ಶುಶ್ರೂಷಕಿಯರ ದಿನಾಚರಣೆ

ಉಡುಪಿ, ಮೇ 17: ಕುತ್ಪಾಡಿಯ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆ ಯಲ್ಲಿ ವಿಶ್ವ ಶುಶ್ರೂಷಕಿಯರ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸ ಲಾಯಿತು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ಶುಶ್ರೂಷಕಿಯರ ದಿನಾಚರಣೆಯ ಮಹತ್ವ ಮತ್ತು ಶುಶ್ರೂಷಕಿಯರ ಪಾತ್ರದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಮುಖ್ಯ ಶುಶ್ರೂಷಕಿ ಶಾರದಾ ಸ್ಟೊನಾಚ್ ಶುಶ್ರೂಷಕಿ ಯರ ಸೇವೆಯ ಮಹತ್ವವನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ವಹಿಸಿದ್ದರು. ತಜ್ಞ ವೈದ್ಯರಾದ ಡಾ.ನಿರಂಜನ್ ರಾವ್, ಡಾ.ರಜನೀಶ ವಿ.ಗಿರಿ ಮಾತನಾಡಿದರು. ಡಾ.ಕೆ.ಆರ್.ರಾಮಚಂದ್ರ ಉಪಸ್ಥಿತರಿದ್ದರು. ಡಾ.ಸುಧೀಂದ್ರ ಹೊನವಾಡ ಕಾರ್ಯಕ್ರಮ ನಿರೂಪಿಸಿದರು.
Next Story