'ಬ್ಯಾರಿ ನಿಖಾಃ ಅವಾರ್ಡ್ 2018' : ಇಸ್ಲಾಮಿಕ್ ಪ್ರಬಂಧ ಸ್ಪರ್ಧೆ

ಮಂಗಳೂರು, ಮೇ 18: 'ಬ್ಯಾರಿ ನಿಖಾಃ ಹೆಲ್ಪ್ ಲೈನ್' ವತಿಯಿಂದ ಪವಿತ್ರ ರಮಝಾನ್ ಪ್ರಯುಕ್ತ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಇಸ್ಲಾಮಿಕ್ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಬರಹಗಾರರು ಕಳುಹಿಸಿದ ಪ್ರಬಂಧವನ್ನು ಲೇಖಕರ ಹೆಸರಿನೊಂದಿಗೆ 'ಬ್ಯಾರಿ ನಿಖಾಃ ಹೆಲ್ಪ್ ಲೈನ್' ಇದರ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುವುದು. ಓದುಗರರ ಅತೀ ಹೆಚ್ಚು ಲೈಕ್ ಪಡೆದ ಲೇಖನವನ್ನು ವಿಜಯಶಾಲಿಯೆಂದು ಘೋಷಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗೂ 'ಬ್ಯಾರಿ ನಿಖಾಃ ಅವಾರ್ಡ್' ನೀಡಲಾಗುವುದು.
ಭಾಷಾಂತರದ (Copyright) ಲೇಖನಕ್ಕೆ ಅವಕಾಶವಿರುವುದಿಲ್ಲ. ಲೇಖನವು ಇಸ್ಲಾಮಿಕ್ ವಿಚಾರಗಳಿಗೆ ಸಂಬಂಧಪಟ್ಟದ್ದಾಗಿರಬೇಕು. (ಉದಾ: ದಾಂಪತ್ಯ ಜೀವನ, ವರದಕ್ಷಿಣೆ, ಇಸ್ಲಾಮಿನಲ್ಲಿ ಶುಚಿತ್ವದ ಬಗ್ಗೆ, ದಾನದ ಬಗ್ಗೆ, ಆಹಾರದ ಬಗ್ಗೆ, ಕುಟುಂಬದ ಪಾಲನೆ, ಅಲ್ಲಾಹನ ಆರಾದನೆಯ ಬಗ್ಗೆ, ರಮಝಾನ್ ನ ಮಹತ್ವದ ಬಗ್ಗೆ ಹಾಗೂ ಇನ್ನಿತರ)
ಮೇ 25ರೊಳಗಾಗಿ ತಮ್ಮ ಹೆಸರು ಹಾಗು ವಿಳಾಸದೊಂದಿಗೆ ಲೇಖನವನ್ನು 'ಬ್ಯಾರಿ ನಿಖಾಃ ಹೆಲ್ಪ್ ಲೈನ್ ಫೇಸ್ಬುಕ್ ಪೇಜಿನ INBOXಗೆ ಕಳುಹಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಇರ್ಫಾನ್ ಕಲ್ಲಡ್ಕ ವಾಟ್ಸ್ಆ್ಯಪ್ ಮೊ. +971559503091, Facebook.com/bearynikahhelpline ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.