ಅನುಮತಿ ಇಲ್ಲದೆ ಕಾಂಗ್ರೆಸ್ ಗೆ ಬೆಂಬಲ: ಆರೋಪ
ಬೆಂಗಳೂರು, ಮೇ 19: ಶಾಸಕ ವಿ.ಶಂಕರ್ ಪಕ್ಷದ ಅನುಮತಿ ಪಡೆಯದೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಕೆಪಿಜೆಪಿ ಅಧ್ಯಕ್ಷ ಮಹೇಶ್ ಗೌಡ ಆರೋಪಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಶಾಸಕ ಶಂಕರ್ ಪಕ್ಷದ ಸಮಿತಿಯ ಅನುಮತಿಯಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಯಾವುದೇ ಪಕ್ಷಕ್ಕೆ ಬೆಂಬಲ ನೀಡದಂತೆ ಶಂಕರ್ ವಿರುದ್ಧ ವಿಪ್ ಜಾರಿ ಮಾಡುತ್ತೇನೆ ಎಂದರು.
Next Story