Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೊದಲ ಇಫ್ತಾರ್ ಗೆ ನಾವು ಸ್ವಲ್ಪ ಅವಲಕ್ಕಿ...

ಮೊದಲ ಇಫ್ತಾರ್ ಗೆ ನಾವು ಸ್ವಲ್ಪ ಅವಲಕ್ಕಿ ಮತ್ತು ಹಸಿ ಮೆಣಸು ಮಾತ್ರ ತಿಂದೆವು: ಅಬ್ದುಲ್ ರಹೀಂ

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್21 May 2018 11:42 AM IST
share
ಮೊದಲ ಇಫ್ತಾರ್ ಗೆ ನಾವು ಸ್ವಲ್ಪ ಅವಲಕ್ಕಿ ಮತ್ತು ಹಸಿ ಮೆಣಸು ಮಾತ್ರ ತಿಂದೆವು: ಅಬ್ದುಲ್ ರಹೀಂ

ನಮಗೆ ಇಡೀ ವರ್ಷ ರಮಝಾನ್ ತಿಂಗಳಿನಂತೆ. ಏಕೆಂದರೆ ನಾವು ಆಹಾರಕ್ಕಾಗಿ ಇಡೀ ದಿನ ಹಸಿದಿರಬೇಕಾಗುತ್ತದೆ. ಆದುದರಿಂದ ನಮಗೆ ರಮಝಾನ್ ತಿಂಗಳಲ್ಲಿ ಉಪವಾಸವಿರುವುದು ಕಷ್ಟವಾಗುವುದಿಲ್ಲ. ರಮಝಾನ್ ತಿಂಗಳು ಎಲ್ಲವನ್ನೂ ವರ್ಜಿಸುವ ತಿಂಗಳೆಂದು ಎಲ್ಲರೂ ಹೇಳುತ್ತಾರೆ. ಆದರೆ ರಮಝಾನ್ ಸಂದರ್ಭ ಎಲ್ಲರೂ ಇಫ್ತಾರ್ ಅಥವಾ ಸಹರಿ ಹೊತ್ತಿನಲ್ಲಿ ಒಳ್ಳೆಯ ಆಹಾರ ತಿನ್ನುವುದನ್ನು ನೋಡಿ ನನಗೆ ಆಹಾರದ ಮೇಲೆ ಹೆಚ್ಚು ಆಸೆಯಾಗುತ್ತದೆ. ಅವುಗಳನ್ನು ತಿನ್ನಬೇಕೆಂದು ಮನಸ್ಸಾಗುತ್ತದೆ. ಸಂಜೆಯ ಹೊತ್ತು  ನಮಾಜ್ ಮಾಡುವಾಗ ನಾನು ಬಹಳಷ್ಟು ನಿತ್ರಾಣ ಅನುಭವಿಸುತ್ತೇನೆ. ಕೆಲವೊಮ್ಮೆ ನಮಾಝ್ ನಂತರ ಬಜಾರಿನಿಂದ ಹಿಂದಿರುಗಿದಾಗ ರಸ್ತೆ ಬದಿಗಳಲ್ಲಿ ಸ್ವಾದಿಷ್ಟ ಇಫ್ತಾರ್ ತಿನಿಸುಗಳನ್ನು ಅಲಂಕೃತವಾಗಿ ಇಡಲಾಗಿರುವುದನ್ನು ನೋಡಿದಾಗ ಸಣ್ಣ ಮಗುವಿನಂತೆ ನನಗೆ ಆಸೆಯಾಗುತ್ತದೆ. ನಾವು ಸಹರಿ ಸಮಯ ಕೇವಲ ತಂಗಳನ್ನವನ್ನು ತಿನ್ನುವಾಗ ಹೇಗೆ ಉಪವಾಸವನ್ನು ಸಹಿಸುತ್ತೇವೆಂದು ನನಗೇ ತಿಳಿದಿಲ್ಲ. ರಮಝಾನ್ ತಿಂಗಳ ಮೊದಲ ರಾತ್ರಿಯಂದು ನನ್ನ ಪತ್ನಿ ಗ್ರಾಮಸ್ಥರಿಂದ ಕಾಡಿ ಬೇಡಿ ತಂದ ಅನ್ನ ಮತ್ತು ಸ್ವಲ್ಪ ತರಕಾರಿಗಳನ್ನು ತಿಂದೆವು. ನಾನು ಕಡೆಯ ಬಾರಿ ಮೊಟ್ಟೆ ಯಾವಾಗ ತಿಂದಿದ್ದೆನೆಂದು ನನಗೇ ಗೊತ್ತಿಲ್ಲ. ಈ ರಮಝಾನ್ ಸಂದರ್ಭ ಕನಿಷ್ಠ ಒಮ್ಮೆಯಾದರೂ ಹಾಲಿನ ಜತೆ ಅನ್ನ ತಿನ್ನಬೇಕೆಂದು ನನ್ನ ಆಸೆಯಾಗಿದೆ. ಆದರೆ ಯಾರು ನನಗೆ ಈ ಉತ್ತಮ ಆಹಾರ ಒದಗಿಸುತ್ತಾರೆ ?

ಮೊದಲ ಇಫ್ತಾರ್ ಸಂದರ್ಭ ನಾವು ಸ್ವಲ್ಪ ಅವಲಕ್ಕಿ ಮತ್ತು ಹಸಿ ಮೆಣಸು ಮಾತ್ರ ತಿಂದಿದ್ದೆವು. ಕಳೆದ ಐದು ವರ್ಷಗಳಿಂದ ನಮ್ಮ ಪುತ್ರಿಯ ಜತೆ ನಾವು ವಾಸವಾಗಿದ್ದೇವೆ.  ನನ್ನ ಪುತ್ರಿ ಮತ್ತಾಕೆಯ ಕುಟುಂಬ ಕೂಡ ಕಡು ಬಡತನದಲ್ಲಿದೆ. ಆದರೆ ಕನಿಷ್ಠ ನನ್ನ ಮಕ್ಕಳಲ್ಲಿ ಒಬ್ಬರಾದರೂ ನಮಗೆ ಉಳಿದುಕೊಳ್ಳಲು ಜಾಗ ಹಾಗೂ ನಮಗೆ ಸ್ವಲ್ಪ ಆಹಾರ ಒದಗಿಸುತ್ತಿದ್ದಾಳಲ್ಲ ಎಂಬ ಕಾರಣಕ್ಕೆ ನಾನು ನನ್ನನ್ನು ಅದೃಷ್ಟಶಾಲಿ ಎಂದು ತಿಳಿಯುತ್ತೇನೆ.

ನಾವು ಸಾಯಬಹುದಾದರೆ ನಮ್ಮ ಕಷ್ಟಗಳೂ ನಮ್ಮೊಂದಿಗೆ ಅಂತ್ಯವಾಗುತ್ತವೆ. ಆದರೆ ಬದುಕಿರುವ ತನಕ ನಾವು ಹಸಿವನ್ನು ಎದುರಿಸಲೇ ಬೇಕು. ವೃದ್ಧಾಪ್ಯ ಒಂದು ಶಾಪ. ಮೂರು ಹೊತ್ತಿನ ಆಹಾರಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸುವಂತಾಗುತ್ತದೆ. ಗಂಜಿಯನ್ನು ಉಪ್ಪು ಹಾಗೂ ಕೆಲವೊಮ್ಮೆ ಒಣ ಮೆಣಸಿನೊಂದಿಗೆ ಈ ವೃದ್ಧಾಪ್ಯದಲ್ಲಿ ಪ್ರತಿ ದಿನ ತಿನ್ನುವುದು ಬಹಳ ಕಷ್ಟ. ಕೆಲವೊಮ್ಮ ನುಂಗಲೂ ಆಗುವುದಿಲ್ಲ. ತೀರದ ಹಸಿವು ಹಾಗೂ ಈ ಪ್ರಾಯದಲ್ಲಿ ಸ್ವಲ್ಪ ಉತ್ತಮ ಆಹಾರಕ್ಕಾಗಿ  ನಮಗಿರುವ ಆಸೆಯಿಂದಾಗಿ ಇರುವ ಆಕ್ರೋಶವನ್ನು ಪದಗಳಲ್ಲಿ ನಿಮಗೆ  ತಿಳಿ ಹೇಳಲು ಸಾಧ್ಯವಿಲ್ಲ.

ಅಬ್ದುಲ್ ರಹೀಂ(80)

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X